ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಂ ಎನ್ ಸಿಗಳ ತೆಕ್ಕೆಗೆ ಔಷಧ

ಇಮೇಜ್
  ಹೆಲ್ತ್ ಫಾರ್ Only rich! .  ಒಂದು ದೇಶದಲ್ಲಿ ತಯಾರಿಸಲಾಗುವ  ಔಷಧ ಮಾತ್ರೆಗಳು ಆ ದೇಶದ ಜನರ  ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ,  ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ??  ಇದು ಸಧ್ಯದ  ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ  ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ.. ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ. ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ  ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ  ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು.  ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ  ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ. 2105ರ ಸುಮಾರಿಗೆ ಭಾರತದ ಔಷಧಿ ಮಾರ...

ಇರಬೇಕು ಇದ್ದರೆ ಇಂಥಾ ಶಾಲೆ

ಇಮೇಜ್
ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಸೇರಿಸೋದು ಇಂದು ಒಂದು ಬಗೆಯ ಮಾಸ್ ಹಿಸ್ಟೀರಿಯಾ ಆಗಿಬಿಟ್ಟಿದೆ. ಆದರೆ ಪ್ರಪಂಚದೆಲ್ಲೆಡೆ ಸಾಬೀತಾಗಿರುವ ವಾಸ್ತವ ಸತ್ಯ ಏನೆಂದರೆ ಯಾವುದೇ ಒಂದು ಮಗು ತನ್ನ ಪರಿಪೂರ್ಣ ಬೌದ್ಧಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗೋದು ಮಾತೃಭಾಷಾ ಶಿಕ್ಷಣದ ಮೂಲಕ ಮಾತ್ರ. ಪ್ರಪಂಚದಲ್ಲಿ ಯಾವ್ಯಾವ ದೇಶಗಳು ಮುಂದುವರೆದಿವೆಯೋ ಅಲ್ಲೆಲ್ಲಾ ಈ ವ್ಯವಸ್ಥೆ ಇದೆ. ಆದರೆ ಮೆಕಾಲೆಯ ವಾರಸುದಾರರಾಗಿರುವ ನಮ್ಮ ಆಳುವ ಮಂದಿಗೆ ಮಾತ್ರ ಈ ಸತ್ಯ ಅರಿವಾಗೋದೇ ಇಲ್ಲ. ಒಂದು ಕಡೆ ಶಿಕ್ಷಣವನ್ನು ದುಡ್ಡು ಮಾಡಲು ಒಂದು ದಂದೆಯಾಗಿ ಮಾತ್ರ ನೋಡುವ ಉದ್ಯಮಿಗಳು ನಾಯಿಕೊಡೆಗಳಂತೆ ಬೆಳೆಸುತ್ತಿರುವ ಕಾನ್ವೆಂಟುಗಳು ಇನ್ನೊಂದೆಡೆ ದರಿದ್ರ ಶಿಕ್ಷಕರಿಂದ ಮಕ್ಕಳ ಕ್ರಿಯೇಟಿವಿಟಿಯನ್ನೆಲ್ಲಾ ಹಾಳುಮಾಡುತ್ತಿರುವ ಸರ್ಕಾರಿ ಶಾಲೆಗಳು. ಇದರೆ ನಡುವೆ ನಮ್ಮಲ್ಲೂ ಒಂದಷ್ಟು ಮಂದಿ ಎಚ್ಚೆತ್ತಿದ್ದಾರೆ. ಹೊಸ ಬಗೆಯ ಮಾದರಿಯ ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕನ್ನಡ ಮಾದ್ಯಮ ಶಿಕ್ಷಣದ ಬಗ್ಗೆ ಗಂಟೆಗಟ್ಟಲೆ ಉಪನ್ಯಾಸ ನೀಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಕಳುಹಿಸುವ ಸೋಗಲಾಡಿ ಮಂದಿಯಲ್ಲ ಇವರು... ಶಿಕ್ಷಣದ ವ್ಯಾಪಾರ ಮಾಡಲು ಇಳಿದವರೂ ಅಲ್ಲ... ಕನ್ನಡ ಮಿಡಿಯಂ ಶಾಲೆ ನಡೆಸುತ್ತಿರುವ ತಮ್ಮನ್ನು ಯಾರಾದರೂ ಗುರುತಿಸಬೇಕು, ಪ್ರಶಸ್ತಿ, ಪದವಿ ನೀಡಬೇಕು ಎಂಬ ಹಪಹಪಿಕೆಯೂ ಇವರಿಗಿಲ್ಲ. ಆದರೆ ಈ ನಾಡಿನ ಮುಂದಿನ ಪ್ರಜೆಗಳಾ...

ಎತ್ತ ಸಾಗಿದೆ ಮಾಹಿತಿ ಹಕ್ಕು

ಇಮೇಜ್
ಎತ್ತ ಸಾಗಿದೆ ಮಾಹಿತಿ ಹಕ್ಕು ಕರೇಗೌಡ ಎಂಬ ಆ ವಿಧ್ಯಾರ್ಥಿ ತನ್ನ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ತಾನು ಹುಟ್ಟಿದ ವರ್ಷ ತಪ್ಪಾಗಿ ದಾಖಲಾಗಿತ್ತೆಂಬ ಕಾರಣಕ್ಕೆ ಶಿಕ್ಷಣ ಇಲಾಖೆಯ ಕಛೇರಿಗೆ ಒಂದು ಅರ್ಜಿ ಬರೆದು ತನ್ನ ಮೂಲ ಅಂಕಪಟ್ಟಿಯನ್ನು ಕಳುಹಿಸಿಕೊಟ್ಟಿದ್ದ. ಯಥಾಪ್ರಕಾರ ಆ ಇಲಾಖೆಯ ಅಧಿಕಾರಿಗಳಿಂದ ಅದನ್ನು ಸರಿತಿದ್ದಿಕೊಡುವುದು ಹೋಗಲಿ, ಕನಿಷ್ಠ ಒಂದು ಪ್ರತಿಕ್ರಿಯೆಯೂ ಬರಲಿಲ್ಲ. ಆತಂಕಕ್ಕೊಳಗಾದ ಆ ಯುವಕ ಅನೇಕ ಬಾರಿ ಪತ್ರಗಳನ್ನೂ ಬರೆದ. ಆಗಲೂ ಉತ್ತರ ಬರಲಿಲ್ಲ. ಹೀಗೇ ನಾಲ್ಕುವರ್ಷಗಳು ಕಳೆದು ಹೋದವು. ತನ್ನ ಅಂಕಪಟ್ಟಿ ಇನ್ನು ತನಗೆ ಸಿಗುವುದೇ ಇಲ್ಲವೇನೋ ಎಂಬ ತೊಳಲಾಟಕ್ಕೆ ಬಿದ್ದ ಕರೇಗೌಡ ಕೊನೆಗೆ ಮಾಹಿತಿಹಕ್ಕು ಕಾರ್ಯಕರ್ತರೊಬ್ಬರ ಸಹಾಯ ಪಡೆದ. ತನ್ನ ಅಂಕಪಟ್ಟಿಯ ಕುರಿತು ಮಾಹಿತಿ ನೀಡಲು ಮಾಹಿತಿ ಹಕ್ಕು ಕಾಯ್ದೆ ಅಡಿ ಒಂದು ಅರ್ಜಿ  ಸಲ್ಲಿಸಿದ. ಅಷ್ಟೇ ನೋಡಿ. ಆ ಅರ್ಜಿ ತಲುಪಿದ ಮೂರೇ ದಿನಗಳಲ್ಲಿ ಕರೇಗೌಡನ ಅಂಕಪಟ್ಟಿ ತಿದ್ದುಪಡಿಯೂ ಆಗಿ ಅವನ ಮನೆಯ ವಿಳಾಸಕ್ಕೇ ತಲುಪಿತ್ತು!. ಇದು ನಡೆದಿದ್ದು ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರು ತಾಲ್ಲೂಕಿನ ಮೊಗಾವಿಯಲ್ಲಿ. ಈ ಒಂದು ಘಟನೆ ಮಾಹಿತಿ ಹಕ್ಕು ಕಾಯ್ದೆಯ ಪವರ್ ಏನು ಎಂದು ತೋರಿಸಿಕೊಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ಈ ದೇಶದಲ್ಲಿ ಜಾರಿಗೆ ಬಂದು ಇದೇ ಅಕ್ಟೋಬರ್ 12 ಕ್ಕೆ ಐದನೇ ವರ್ಷಕ್ಕೆ ಕಲಿಡಲಿದೆ. ಇಂದು ಈ ಕಾಯ್ದೆ ಒಂದು ಕಾನೂನು ಮಾತ್ರ...

Charles Darwin

ಇಮೇಜ್
ಜೀವ ವಿಜ್ಞಾನದ ಮಹಾನ್ ಚೇತನ ಚಾರ್ಲ್ಸ್ ಡಾರ್ವಿನ್ -200 ಕ್ರಿ.ಶ.1831ರ ಜನವರಿ ಮಾಸದ ಒಂದು ನಡುಹಗಲು. ಬಿರುಗಾಳಿ ಬಲವಾಗಿ ಬೀಸುತ್ತಿತ್ತು. ಮೈಕೊರೆವ ಚಳಿ. ಶಾಂತಸಾಗರದಲ್ಲಿ ಹಾಯ್ದು ಹೋಗುತ್ತಿದ್ದ ಹಡಗೊಂದು ಗಜಗಾತ್ರದ ಅಲೆಗಳ ಅಬ್ಬರಕ್ಕೆ ಸಿಕ್ಕು ಬುಗರಿಯಂತಾಡುತ್ತಾ ಮೇಲೆ ಕೆಳಗೆ ಏರುತ್ತಾ ಇಳಿಯುತ್ತಾ ಸಾಗತೊಡಗಿತ್ತು. ಆ ನೌಕೆಯೊಳಗಿದ್ದ 22ರ ಹರೆಯದ ಯುವಕ ತೀವ್ರವಾಗಿ ಬಳಲಿ ಬೆಂಡಾಗಿಹೋಗಿದ್ದ. ಪ್ರಾಣಸಂಕಟದಿಂದ ಅಸ್ವಸ್ಥಗೊಂಡಿದ್ದ ಆ ಯುವಕ ಇನ್ನು ತನ್ನಿಂದ ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಿದ್ದ. ಆದರೆ ಅದೆಲ್ಲಿತ್ತೋ ಹುಮ್ಮಸ್ಸು ಒತ್ತಟ್ಟಿಕೊಂಡು ಬಂದು "ಊಂ ಹೂಂ.. ಹಾಗಾಗಕೂಡದು. ನಾನು ಈ ಸಾಗರಯಾನವನ್ನು ಪೂರೈಸಲೇ ಬೇಕು. ಪ್ರಾಣಹೋದರೂ ಅಡ್ಡಿಯಿಲ್ಲ" ಎಂದು ಗಟ್ಟಿ ನಿರ್ಧಾರ ತಳೆದ. ಆ ಒಂದು ದಿಟ್ಟ ನಿರ್ಧಾರ ಇಡೀ ಮನುಕುಲಕ್ಕೇ ಒಬ್ಬ ಅದ್ವಿತೀಯ, ಅಪ್ರತಿಯ ಜೀವವಿಜ್ಞಾನಿಯನ್ನು ನೀಡಿತು. ಊ.ಒ.ಖ. ಬೀಗಲ್ ಎಂಬ ಹೆಸರಿನ ಬ್ರಿಟಿಷ್ ರಾಯಲ್ ನೌಕಾಪಡೆಯ ಹಡಗಿನಲ್ಲಿದ್ದ ಆ ಯುವಕನೇ ಚಾರ್ಲ್ಸ್ ರಾಬರ್ಟ್ ಡಾರ್ವಿನ್ . 'ವಿಕಾಸವಾದ ಸಿದ್ಧಾಂತ'ವನ್ನು ವಿಶ್ವಕ್ಕೆ ನೀಡಿದ ಡಾರ್ವಿನ್ . ಡಾರ್ವಿನ್ ನ ಬಾಲ್ಯಜೀವನ ಚಾರ್ಲ್ಸ್ ಡಾರ್ವಿನ್ 1809ರ ಫೆಬ್ರವರಿ 12ರಂದು ಇಂಗ್ಲೆಂಡಿನ ಶ್ರೂಸ್ಬೆರಿಯಲ್ಲಿ ಜನಿಸಿದ. ವಿಶೇಷವೆಂದರೆ ಅದೇ ದಿನವೇ ಅಮೆರಿಕದ ಮಹಾನ್ ನಾಯಕ ಅಬ್ರಹಾಂ ಲಿಂಕನ್ ಕೂಡ ಜನಿಸಿದ...