ಸೆಪ್ಟೆಂಬರ್ 25, 2012

"ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿವೆ"- ಚಿದಂಬರರಾವ್ ಜಂಬೆ





ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹಳ್ಳಿಯ ಶಿವಸಂಚಾರ ಈ ಮೂರೂ ಪ್ರಮುಖ ರಂಗಶಾಲೆಗಳಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ರಂಗನಿರ್ದೇಶಕ ಮತ್ತು ಚಿಂತಕ ಚಿದಂಬರರಾವ್ ಜಂಬೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. 
(ಚಿತ್ರಗಳು-ಹರ್ಷಕುಮಾರ್ ಕುಗ್ವೆ)

ಆಧುನಿಕ ರಂಗಭೂಮಿಯ ಇಂದಿನ ಟ್ರೆಂಡ್ ಏನಾಗಿದೆ?
ಈ ’ಆಧುನಿಕತೆ’ ಎನ್ನುವುದನ್ನೇ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಇಂದು ಆಧುನಿಕತೆ ಎಂದು ಕರೆಯುವುದು ಕೇವಲ ತಾಂತ್ರಿಕವಾಗಿಯೇ ವಿನಃ ವಸ್ತುಸಂವಿಧಾನದಲ್ಲಿ ಆದಂತಹ ಬದಲಾವಣೆಗಳನ್ನು ಇಟ್ಟುಕೊಂಡು ನಾವು ಆಧುನಿಕತೆಯನ್ನು ನೋಡುತ್ತಿಲ್ಲ. ಈಗ ತಾಂತ್ರಿಕವಾಗಿ ಅಷ್ಟೇನು ಬದಲಾವಣೆಗಳು ಆಗಿಲ್ಲ ಎಂಬುದು ನನ್ನ ಅಭಿಪ್ರಾಯ. ವಸ್ತು ಸಂವಿಧಾನದಲ್ಲಿ ಕೂಡ ಹೇಳಿಕೊಳ್ಳುವಂತಹಾ ಬಹಳಷ್ಟು ಏನೂ ಬಂದಿಲ್ಲ. ಇಂದು ಆಧುನಿಕ ಅಂದರೆ ಜಾಗತಿಕರಣದ ವೇಗದಲ್ಲಿ ಹೋಗುತ್ತಿರುವುದರಿಂದ ಅದನ್ನೇ ಆಧುನಿಕತೆ ಎನ್ನುವ  ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ವಾಸ್ತವದಲ್ಲಿ ಅದು ಆಧುನಿಕತೆಯಲ್ಲ. ಅದರ ಹೊರತಾಗಿ ಜಾಗತಿಕರಣವನ್ನು ನಿರಾಕರಣೆ ಮಾಡುವಂತಾದ್ದು ಅಥವಾ ಆ ವೇಗಕ್ಕೆ ಸಿಲುಕಿಕೊಳ್ಳದೇ ಇರುವ ಯಾವುದಾದರೂ ಒಂದು ಮಾರ್ಗವಿದ್ದರೆ  ಅದನ್ನ ನಾವು ಆಧುನಿಕತೆ ಎಂದು ಕರೆಯಬಹುದು.

ನಮ್ಮ ಪಾರಂಪರಿಕವಾದ ರಂಗಭೂಮಿಗೂ ಇಂದಿನ ರಂಗಭೂಮಿಗೂ ಭಿನ್ನತೆಗಳು ಹೇಗೆ ವ್ಯಕ್ತಗೊಂಡಿವೆ?
ನಮ್ಮ ಪಾರಂಪರಿಕವಾಗಿ ಬಂದಂತಹ ರಂಗಭೂಮಿ ಎಷ್ಟೋ ಬಾರಿ ಆಧುನಿಕ ರಂಗಭೂಮಿಯನ್ನು ಮೀರಿ ನಿಲ್ಲುವಂತಹ ಸಂದರ್ಭವನ್ನು ನೋಡುತ್ತೇವೆ. ಉದಾಹರಣೆಗೆ ಭವಭೂತಿಯ ಉತ್ತರ ರಾಮಚರಿತವನ್ನೇ ನೋಡಿ. ಸಮರ್ಥವಾಗಿ ನಮ್ಮ ಸಮಕಾಲೀನ ಯಾವ ನಾಟಕದಲ್ಲಿ ಬರದೇ ಇರುವ ಆಧುನಿಕತೆಯನ್ನ ಭವಭೂತಿ ಹೇಳುತ್ತಾನೆ. ಏಕೆಂದರೆ ಆ ನಾಟಕದಲ್ಲಿ ಅರುಂಧತಿ ಒಬ್ಬ ಸ್ತ್ರೀವಾದಿಯಾಗಿ, ಒಬ್ಬ ಮಹಿಳಾವಾದಿಯಾಗಿ ಕೊನೆಯಲ್ಲಿ ರಾಮನ ಜೊತೆಗೆ ಸೀತೆ ಹೋಗಬೇಕು ಅನ್ನುವ ತೀರ್ಮಾನ ನೀಡುತ್ತಾಳೆ. ಪ್ರಸವ ವೇದನೆ ತಡೆಯಲಾಗದೆ ನೀರಿಗೆ ಹಾರಿ ಬಿಡುವ ಸೀತೆಯನ್ನು ಗಂಗೆ ಮತ್ತು ಭೂಮಿ ಸೇರಿ ಬದುಕಿಸುತ್ತಾರೆ. ಅರುಂಧತಿ ಬಂದು ಇಡೀ ಅಯೋದ್ಯಾ ಪುರದ ಜನರನ್ನ ಕರೆಸಿ ನಿಲ್ಲಿಸಿ ದೇವಾನು ದೇವತೆಗಳ ಸಮ್ಮುಖದಲ್ಲಿ ಸೀತೆಯ ಅಗ್ನಿಪರೀಕ್ಷೆಯಾದಮೇಲೆ ಮತ್ತೆ ಮತ್ತೆ ಅನುಮಾನವುದೇನಿದೆ? ಇನ್ನೊಂದು ಹೆಣ್ಣಿನ ಮೇಲೆ ಅನುಮಾನ ಪಡುವಂತಾ ಮನೋಭಾವ ಬಹಳ ಅಶ್ಲೀಲವಾದದ್ದು. ಅದಕ್ಕೆ ನಾನು ಹೇಳುತ್ತಿದ್ದೇನೆ ಶ್ರೀರಾಮ ಸೀತೆಯನ್ನ ಕರೆದೊಯ್ಯಬೇಕು ಎಂದು. ನೀವೇನು ಹೇಳುತ್ತೀರಿ? ಎಂದು ಕೇಳುತ್ತಾಳೆ. ಅಯೋದ್ಯಾ ಪುರ ಜನರೆಲ್ಲಾ ಬಂದು ಸೀತಾ ದೇವಿಯ ಕಾಲಿಗೆ ಬೀಳ್ತಾರೆ. ಇದು ವಾಲ್ಮೀಕಿ ರಾಮಾಯಣ ಅಲ್ಲ ಆದ್ರೆ ಭವಭೂತಿ ಸೃಷ್ಟಿಸಿದ ರಾಮಾಯಣ ಇದು. ಈ ನಾಟಕ ಸುಮಾರು ೬-೭ ನೇ ಶತಮಾನದಲ್ಲಿ ಬರೆದಂತಹ ನಾಟಕ. ಆದರೆ ಅದು ಇವತ್ತಿಗೂ ಕೂಡ ಅದು ಯಾವ ಆಧುನಿಕತೆಗೂ ಕಮ್ಮಿ ಇಲ್ಲದಂತಹ ನಾಟಕ ಅದು. ಕೆಲವೊಮ್ಮೆ ವಸ್ತುವು ಪೌರಾಣಿಕವಾಗಿದ್ದ ಹೊತ್ತಿಗೂ ಕೂಡ ಅದು ಹೇಳುವಂತಹ ಆಶಯ ಏನಿದೆ ಎಂದು ನೋಡಬೇಕು. ಅದು ತನ್ನ ಕಾಲವನ್ನೂ ಮೀರಿ ಹೇಳುವಂತದ್ದಿರಬಹುದು. ರಂಗನಿರ್ದೇಶಕರಾದ ರಘುನಂದನ ಅವರು ಪ್ರತಿಮಾ ಭಾಸವಿ ನಾಟಕ ಮಾಡಿದ್ದರು. ಅದು ನನಗೆ ಬಹಳ ಇಷ್ಟವಾದ ನಾಟಕ. ಅದು ಅದರಲ್ಲಿ ಭರತ ಶಿಕ್ಷಣಕ್ಕೆ ಹೋಗಿರುತ್ತಾನೆ. ಅಲ್ಲಿಂದ ವಾಪಾಸು ಬರುವಾಗ ಶೂ ಮತ್ತು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬರುತ್ತಾನೆ. ಬಂದವನು ಸುಮಂತನ ಬಳಿ ಇವರಿಗೆ ಯಾವ ರೀತಿ ನಮಸ್ಕರಿಸಬೇಕು ಎಂದು ಕೇಳುತ್ತಾನೆ. ಮನೆಗೆ ಬಂದಾಗ ಯಾರಿಗೆ ಹೇಗೆ ನಮಸ್ಕಾರ ಮಾಡಬೇಕು ಎಂದು ಗೊತ್ತಿಲ್ಲದೆ ಇದ್ದರೆ ಶಿಕ್ಷಣ ಏನಾಗಿದೆ ಅನ್ನುವುದನ್ನು ಯೋಚಿಸುವ ರೀತಿ ರಘುನಂದನ್ ಅದನ್ನು ಬಹಳ ಚೆನ್ನಾಗಿ ಮಾಡಿದ್ದರು. 

ಜಾಗತೀಕರಣದಂತಹ ಪ್ರಕ್ರಿಯೆಗಳು ರಂಗಭೂಮಿಯನ್ನು ಪ್ರಭಾವಿಸುತ್ತಿಲ್ಲವೇ?
ಅದು ಕೇವಲ ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗುವುದಿಲ್ಲ. ಯಾಕೆಂದರೆ ನಾಟಕ ಮಾಡುವವರೂ ಸಹ ನಮ್ಮಂತಹ ಮನುಷ್ಯ ಜೀವಿಗಳೆ. ಇಂದು ನಾವೆಲ್ಲ ಬದುಕುತ್ತಿರುವ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ಇರುವಂತಹ ರೀತಿಯಲ್ಲಿಯೇ ಈ ಜಾಗತೀಕರಣ ನಮ್ಮನ್ನು ಎಳೆದುಕೊಂಡು ಹೋಗುತ್ತಿರುತ್ತದೆ. ನಮ್ಮ ಶತ್ರುಗಳು ಎದುರುಗಡೆ ಇದ್ದಾಗ ನಾವು ನೇರವಾಗಿ ಹೋರಾಟ ನಡೆಸಬಹುದು ಆದರೆ ಅದು ಅಘೋಷಿತವಾಗಿದ್ದಾಗ ಹೋರಾಟ ಮಾಡುವುದಕ್ಕೂ ಗೊತ್ತಾಗುವುದಿಲ್ಲ. ಎಲ್ಲಿಗೆ ಎಂದು ಬಾಣ ಬಿಡುವುದು? ಈ ತರದ ಒಂದು ಗೊಂದಲದಲ್ಲಿ ನಾವಿದ್ದೇವೆ. ಹಾಗಾಗಿ ರಂಗಭೂಮಿ ಒಂದೇ ಅಲ್ಲ ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿದೆ. ಭೂಮಿ ಅಂದರೆ ನಾನು ಕೃಷಿ ಸಂಸ್ಕೃತಿ. ಕೃಷಿಗೂ ಮತ್ತು ಸಂಸ್ಕೃತಿಗೂ ಭಾಳ ದೊಡ್ಡ ಸಂಬಂಧ ಇದೆ. ಕೃಷಿ ಇಲ್ದೇ ಇರ್ತಿದ್ರೆ ಸಂಸ್ಕೃತಿ ಏನಾಗ್ತಿತ್ತು ಯಾವ ರೀತಿ ಬೆಳಿತಿತ್ತೊ ಗೊತ್ತಿಲ್ಲ. ಕೃಷಿಗೂ ಮತ್ತು ಭೂಮಿಗೂ ಭಾಳ ದೊಡ್ಡ ಸಂಬಂಧ ಇದೆ. ಈ ಅಗ್ರಿಕಲ್ಚರ್‌ಗೆ ಬರುವ ರೋಗಗಳೆವೂ ಕಲ್ಚರ್‌ಗೆ ಬಂದಿವೆ. ಕೃಷಿಗೆ ಮತ್ತು ಭೂಮಿಗೆ ಇರುವಂತಹ ಎಲ್ಲಾ ಆತಂಕ ತಲ್ಲಣಗಳು ನಮ್ಮ ಈ ರಂಗಭೂಮಿಯಲ್ಲೂ ಇವೆ. 
ಹಿಂದೆ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಎಂದು ಭಿನ್ನತೆ ಇದ್ದಂತೆ ಇಂದು ರಂಗಭೂಮಿಯಲ್ಲಿ ವೃತ್ತಿಪರರು ಮತ್ತು ಹವ್ಯಾಸಿಗಳ ನಡುವೆ ಭಿನ್ನತೆ ಉಂಟಾಗಿದ್ದು ಶ್ರೇಷ್ಠತೆಯ ಪ್ರಶ್ನೆ ಅಂತರಂಗದಲ್ಲಿದೆ ಎನ್ನಿಸುತ್ತದೆ. ಎನು ಹೇಳುತ್ತೀರಿ? 
ಇದು ಶ್ರೇಷ್ಠತೆಯ ಪ್ರಶ್ನೆ ಅಲ್ಲ. ಇಂದು ರಂಗಭೂಮಿಯನ್ನೇ ಪೂರ್ಣವಾಗಿ ನಂಬಿಕೊಂಡು ಕೆಲಸ ಮಾಡುತ್ತೇವೆಂದರೆ  ಅದರಿಂದ ಊಟ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ರೀತಿಯಲ್ಲಿ ರಂಗಭೂಮಿ ಬೆಳೆಯಲೇ ಇಲ್ಲ.  ಅಷ್ಟೇ ವರ್ಷಗಳಲ್ಲಿ ಕೆಲಸ ಮಾಡಿದ ಬೇರೆ ಯಾವುದೇ ಕ್ಷೇತ್ರವಾದರೆ ಅವರು ಎಷ್ಟೋ ದುಡಿದು ಸಂಪಾದನೆ ಮಾಡಬಹುದು. ೩೦-೩೫ ವರ್ಷ ರಂಗಭೂಮಿಲಿ ಕೆಲಸ ಮಾಡಿದರೂ ಸಹ ಬದುಕಲು ಅವರು ಬಹಳ ಕಷ್ಟಪಡಬೇಕಾಗಿದೆ. ಬಸವಣ್ಣನವರು ಹೇಳಿದಾರೆ ಕಾಯಕವೇ ಕೈಲಾಸ ಅಂತ, ಕೈಲಾಸ ಸೇರೋವರೆಗೂ ನಾವು ಕಾಯಕವೇ ಮಾಡ್ತಿರೋದು ಅಂತ. ರಂಗ ಭೂಮಿಗೆ ಹೇಳಿ ಮಾಡಿಸಿದ ಮಾತಿದು. ಕೃಷಿಗೂ ಅಷ್ಟೇ ಸರಿಹೊಂದುವ ಮಾತಿದು. ರಂಗಭೂಮಿಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುವವರ ಅವರ ವಿಷಯ ಬೇರೆ. ಅವರ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಆದರೆ ಯಾರು ರಂಗಭೂಮಿಯನ್ನು ನಿಜವಾಗಿ ಅಪ್ಪಿಕೊಂಡು ಕೆಲಸ ಮಾಡ್ತಿದಾರೋ ಅವರು ಬಹಳ ಏನೂ ಸಂಪಾದನೆ ಮಾಡಲಾಗುವುದಿಲ್ಲ. ಆದರೆ ಬಹಳ ಪ್ರೀತಿಯಿಂದ ಕೆಲಸ ಮಾಡುವ ಅವರಿಗೆ ಅವರಿಗೆ ಅದೇ ಜೀವ ಆಗಿರುತ್ತದೆ. ಇಷ್ಟೂ ವರ್ಷಗಳಲ್ಲಿ ರಂಗಭೂಮಿಯನ್ನು ಬಿಟ್ಟು ಬೇರೇನೂ ಮಾಡಿಲ್ಲ ನಾನು. ಈಗ ಬೇರೆ ಏನಾದರೂ ಮಾಡಬೇಕೆಂದರೂ ಸಾಧ್ಯವಿಲ್ಲ. ಇಲ್ಲೇ ಇದ್ದು ಮಾಡಬೇಕಿರುವುದು ಅನಿವಾರ್ಯ. ಇದರಲ್ಲೇ ಹೋಗಬೇಕು, ಇದರಲ್ಲೇ ಮುಕ್ತಿ ಕಾಣ ಬೇಕಾಗಿದೆ ಅಷ್ಟೆ,
ದೃಶ್ಯ ಮಾಧ್ಯಮಗಳ ಪ್ರವೇಶ ರಂಗಭೂಮಿಗೆ ಪೆಟ್ಟು ನೀಡಿದೆ ಎನ್ನಿಸುವುದಿಲ್ಲವೆ? 
ಇಲ್ಲ ನಾನು ಈ ಸಿನಿಮಾ ಮತ್ತು ಕಿರುತೆರೆಗಳನ್ನು ರಂಗಭೂಮಿಗೆ ಒಂದು ಸವಾಲು ಎಂದು ನಾನು ಯಾವತ್ತಿಗೂ ಹೇಳುವುದಿಲ್ಲ. ಅದರಲ್ಲಿ ಒಂದು ಗ್ಲಾಮರ್ರೇ ಬೇರೆ ಇದೆ.

ರಂಗಭೂಮಿಯ ಅನೇಕ ಪ್ರತಿಭೆಗಳು ಕಿರುತೆರೆಯಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರಲ್ಲ? 
ಅದನ್ನು ನಾನು ಒಪ್ತೇನೆ. ಅದು ಇಲ್ಲಿ ಬದುಕುವುದು ಕಷ್ಟವಾದ ಕಾರಣ ಬದುಕಿನ ಅನಿವಾರ್ಯತೆಗಳ ಕಾರಣದಿಂದ ಅಲ್ಲಿಗೆ ಹೋಗಬೇಕಾಗಿದೆ ಎನ್ನಬಹುದು. ಅದರರ್ಥ ಜನರು ರಂಗಭೂಮಿಯನ್ನು ನಿರಾಕರಣೆ ಮಾಡಿದಾರೆ ಎಂದಲ್ಲ.  ಏಕೆಂದರೆ ಇದು ಜೀವಂತ ಪ್ರದರ್ಶನ. ನಾವೂ ನೀವೂ ಹೇಗೆ ಕುಳಿತುಕೊಂಡು ಮಾತನಾಡುತ್ತಿದ್ದೇವೋ ಹಾಗೆ ರಂಗಭೂಮಿ ಎಂಬುದು ಆ ಊರಿನ ಆ ಕ್ಷಣದಲ್ಲಿ ಸಂಭವಿಸುವ ಘಟನೆ ಅದು ಆ ಒಂದು ಸಮುದಾಯ ಮತ್ತು ಈ ನಟರು ಸೇರಿ ಹುಟ್ಟುವ ಅನುಭವ ಅದು. ಹಾಗಾಗಿ ಜನ ಯಾವತ್ತೂ ಕೂಡ ಒಂದು ಜೀವಂತ ಅನುಭವಕ್ಕಾಗಿ ತಮ್ಮನ್ನು ತೆರೆದುಕೊಳ್ಳುತ್ತಾರೆ. ಆ ಜೀವಂತ ಅನುಭವ ಬೇಕು ಎನ್ನವ ಒಂದು ಸಮುದಾಯ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲ್ಲಿಯವರೆಗೆ ಈ ರಂಗಭೂಮಿಯಂತಹ ಮಾದ್ಯಮಗಳಿಗೆ ಸೋಲಿಲ್ಲ. ಈಗ ಕಿರುತೆರೆಯೂ ಸೋಲುತ್ತಿದೆ. ಜನರು ನೋಡಿ ನೋಡಿ ಸುಸ್ತಾಗಿಬಿಟ್ಟಿದ್ದಾರೆ. ಸಿನಿಮಾಗಳವರೂ ಕೂಡ ಪಾಪ, ಎಲ್ಲರೂ ಕೂಡ ಅಷ್ಟೇ ಕಷ್ಟದಲ್ಲಿರ‍್ತಾರೆ. ಈ ಯಕ್ಷಗಾನ ಕಲೆ ಇದೆಯಲ್ಲ, ಅದೂ ಕೂಡ ಕಷ್ಟದಲ್ಲಿದೆ ಆದರೂ ಕೂಡ ಅವರು ಆರು ತಿಂಗಳುಗಳ ಕಾಲ ಸತತವಾಗಿ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆಯೋ ರೀತಿ ಕಂಡರೆ ಆಶ್ಚರ‍್ಯವಾಗುತ್ತದೆ. ಜಾಗತೀಕರಣದ ಪ್ರಭಾವದ ನಡುವೆಯೂ ಈ ಜನ ತಮ್ಮ ಕಲೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಆದ್ರೆ ಈ ರೀತಿಯ ಕಲೆಯನ್ನು ನಂಬಿಕೊಂಡು ಬಂದ ಜನ ಎಷ್ಟೇ ವರ್ಷ ಕಲೆಗಾಗಿ ತಮ್ಮನ್ನು ಮುಡಿಪಾಗಿಟ್ಟರೂ ಕೂಡ ಕೊನೆಗೂ ಅದರಲ್ಲಿರುವವನು ಒಬ್ಬ ಕಲಾವಿದನಾಗಿಯೇ ಉಳಿಯುತ್ತಾನೆ. ಗಣ್ಯ ವ್ಯಕ್ತಿ ಎಂಬ ಪಟ್ಟ ಇತರೆ ಬೇರೆ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ದುಡಿದವರಿಗೆ ಸಿಗುತ್ತದೆ. ಆದರೆ ನಮ್ಮ ಕಲಾವಿದರು ಅದನ್ನು ಕಡೆಗಣಿಸಿ ತಮ್ಮ ಕಲೆಯನ್ನೇ ಸರ್ವಸ್ವ ಅನ್ನುವ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಲೆಗಾಗಿ ಜೀವನಾನ ಮುಡಿಪಾಗಿಸಿಟ್ಟಿದ್ದಾರೆ. ನಾವು ಆದರ್ಶವನ್ನು ಹೇಳುವುದು ಎಷ್ಟು ಸುಲಭವೋ ಅದನ್ನು ಅನುಸರಿಸುವುದು ಅಷ್ಟೇ ತ್ರಾಸದಾಯಕವಾದ್ದು. ಕಲೆಗಾಗಿ ದುಡಿಯುತ್ತಿರುವವರನ್ನು ಗುರುತಿಸಿ ಅವರ ಜೀವನದ ಸುಭದ್ರತೆಗೆ ಏನಾದರೊಂದು ಪರ್ಯಾಯ ವ್ಯವಸ್ಥೆಯಾಗಬೇಕಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಂತಹ ಘಟಕಗಳು ಈ ದಿಸೆಯಲ್ಲಿ ಯಾವತ್ತೂ ಚಿಂತನೆಯನ್ನೇ ಮಾಡಿಲ್ಲ. ರಂಗಸಂಸ್ಕೃತಿಯನ್ನು ಕಟ್ಟುವ ರೀತಿಯಲ್ಲಿ ರಂಗಾಯಣದಂತಹ ಅನೇಕ ರಂಗಸಂಸ್ಥೆಗಳಿವೆ ಅವುಗಳ ಉದ್ಧಾರವಾಗಬೇಕಿದೆ. 

ನಿಮಗೆ ರಂಗಭೂಮಿಯೊಂದಿಗೆ ನಂಟು ಬೆಳೆದಿದ್ದು ಹೇಗೆ? 
ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರ ಸುದೈವದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ಅವರೊಂದಿಗೆ ಸಂಸ್ಥೆ ಕಟ್ಟುವ ಸುದೈವ ಸಿಕ್ಕು ಆ ಮೂಲಕ ನನಗೆ ಬಹಳಷ್ಟು ಅನುಭವ ಸಿಕ್ಕಿತು. ೨೨ ವರ್ಷಗಳಲ್ಲಿ ಸುಬ್ಬಣ್ಣ ನಮ್ಮ ಆಸರೆಯ ಸೂರಿನಂತಿದ್ದರು. ನಂತರ ರಂಗಾಯಣದಂತಹ ಸಾರ್ವಜನಿಕ ಸಂಸ್ಥೆಗೆ ಬಂದಾಗ ಜವಾಬ್ದಾರಿಗಳು ಬದಲಾದವು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ನಾವು ಸಾರ್ವಜನಿಕ ಸಂಸ್ಥೆಗೆ ಬಂದಾಗ ಬಹಳಷ್ಟು ಬದಲಾವಣೆಗಳಾದವು. ಜನರೊಂದಿಗೆ ನೇರವಾದ ಸಂಪರ್ಕ ಸರ್ಕಾರದೊಂದಿಗೆ ಗುದ್ದಾಟ, ಕಲಾವಿದರೊಂದಿಗೆ ಒಡನಾಟ ಬೆದು ಒಂದು ದೊಡ್ಡ ಅನುಭವ ಸಿಕ್ಕಿತು. ಮುಂದೆ ನನಗೆ ರಂಗಾಯಣದ ಅವಧಿ ಮುಗಿಸಿದಾಗ ಸಾಣೆಹಳ್ಳಿಯ ಪಂಡಿತರಾಧ್ಯ ಸ್ವಾಮಿಗಳು ನನ್ನನ್ನು ಕರೆದು ರಂಗಶಾಲೆ ಕಟ್ಟುವ ಬಗ್ಗೆ ಮಾತಾಡಿದರು. ಆಗ ಆರ್ಥಿಕವಾಗಿ ರಂಗಶಾಲೆ ಸೋತಿರುವುದರ ಬಗ್ಗೆ ಮಾತಾಡಿ, ನಿಮಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅವಕಾಶ ಇದ್ದರೆ ನನಗೆ ಕೆಲಸ ಮಾಡಲು ಸಾಧ್ಯ ಎಂದಾಗ ’ನಾನು ಮಕ್ತವಾಗಿರುತ್ತೇನೆ ನೀವು ಬಂದು ಮಾಡಿ’ ಎಂದರು. ನಂತರ ನನಗೆ ಅದೊಂದು ದೊಡ್ಡ ಸವಾಲಾಗಿತ್ತು. ನಂತರ ಎರಡು ವರ್ಷಗಳು ಅಲ್ಲಿ ಕೆಲಸ ಮಾಡಿದೆ. ಆಗ ರಂಗಶಾಲೆ ಒಂದು ವ್ಯವಸ್ಥೆಗೆ ಬಂದಿತ್ತು. ಮುಂದೆ ರಾಷ್ಟ್ರೀಯ ನಾಟಕ ಶಾಲೆಯಿಂದ ಅವಕಾಶ ಬಂತು. ಆಗ ಸ್ವಾಮಿಗಳಲ್ಲಿ ಹೋಗಲು ಅವಕಾಶ ಮಾಡಿಕೊಡಿ ಅಂದಾಗ ಕಳಿಸಲು ನಿರಾಕರಿಸಿದರು. ಹೀಗೆ ಮೂರು ತರದ ಮೂರು ಸಂಸ್ಥೆಗಳೊಂದಿಗೆ ಒಡನಾಟ ಬೆಳೆಯಿತು. ಅನುಭವವೂ ದೊರೆಯಿತು.
ರಂಗಭೂಮಿಯಿಂದ ನೀವು ಪಡೆದುಕೊಂಡಿರುವುದೇನು?
ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಂವೇದನೆಯನ್ನು, ಪ್ರೀತಿಯನ್ನು, ಮನುಷ್ಯ ಕಾಳಜಿಗಳನ್ನು ರಂಗಭೂಮಿ ನನನಗೆ ಕಟ್ಟಿಕೊಟ್ಟಿದೆ. ಇದು ಬಹಳ ಮುಖ್ಯ. ಅದಕ್ಕಿಂತ ಏನು ಬೇಕು? ಅದನ್ನು ಉಳಿಸಿಕೊಂಡರೆ ಸಾಕು. 

ನಾಡಿನ ಪ್ರಮುಖ ರಂಗಶಾಲೆಗಳನ್ನು ಕಟ್ಟಿಬೆಳೆಸುವಲ್ಲಿ ವಿಶೇಷ ಪಾತ್ರವಹಿಸಿರುವ ನಿಮಗೆ ರಂಗಶಾಲೆಯ ಕುರಿತು ಇದ್ದ ಪರಿಕಲ್ಪನೆಗಳೇನು? 
ಒಂದು ರಂಗಶಾಲೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಪರಿಕಲ್ಪನೆ ಯಾವ ರೀತಿ ಎಂಬುದು ಮುಖ್ಯ. ನಂತರ ಅದನ್ನು ಅನುಷ್ಠಾನಗೊಳಿಸುವ ಅಂಶ. ಹೆಚ್ಚು ಒತ್ತು ನೀಡಿಕೊಂಡು ಶಿಕ್ಷಣದಲ್ಲಿ ರಂಗ ಭೂಮಿಯ ಅಂಶಗಳನ್ನು ಸೇರಿಸುತ್ತಾ ಹೋಗಬೇಕು. ಅದನ್ನು ಒಂದು ವಿಷಯವಾಗಿ ತೆಗೆದುಕೊಂಡಲ್ಲಿ ಬಹಳ ಇಷ್ಟವಾಗುತ್ತದೆ ಹಾಗೂ ಪ್ರಯೋಜನ ಆಗುವಂತಾದ್ದು. ಇದರಿಂದಾಗಿ ಸಮಾಜದ ಜೊತೆಗೆ ನೇರವಾದ ಸಂಪರ್ಕ ಇರುತ್ತದೆ. ಇದರಿಂದ ಅದರೊಂದಿಗೆ ಬರುವ ವಿದ್ಯಾರ್ಥಿಗಳು ಹಾಗೂ ನಾಟಕ ನೋಡುವ ಸಮುದಾಯ ಬೆಳೆಯುತ್ತ ಹೋಗುವ ಕಾರ್ಯ ಆಗಬೇಕು. ಆ ವಿದ್ಯಾರ್ಥಿ ಒಬ್ಬ ನಟನಾಗಿ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಅದನ್ನು ಪರಂಪರೆಯಿಂದ ಕೃಷಿ ಮಾಡಿ ಬೆಳೆಸಬೇಕಾಗುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಯಕ್ಷಗಾನ ಕಲಾವಿದರು ತಮ್ಮ ಕಲೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆ ಅವಕಾಶ ಕಡಿಮೆ. ಇಲ್ಲಿ ಒಬ್ಬ ನಟ ಬೆಳಕು ನಿರ್ವಹಣೆ, ಪ್ರಸಾದನಗಳಂತಹ ಎಲ್ಲಾ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಇದರಿಂದ ನಟನೆ ಬೆಳೆಯಲು ಸಾದ್ಯವಿಲ್ಲ. ಆದುದರಿಂದ ಅಭಿನಯ ಪ್ರಯೋಗಶಾಲೆಯಂತಹ ವ್ಯವಸ್ಥೆಯನ್ನು ನೀಡಬೇಕು. ಇದರಿಂದ ನಾವು ಒಬ್ಬ ನಟನನ್ನು ಬೆಳೆಸಲು ಸಾದ್ಯ. ನೀನಾಸಂ ಇರಬಹುದು ಅಥವಾ ಸಾಣೆಹಳ್ಳಿಯ ಶಿವ ಸಂಚಾರ ಇರಬಹುದು. ಅವರೆಲ್ಲಾ ನಟರನ್ನು ಬೆಳೆಸುವ ನಿಟ್ಟಿನಲ್ಲಿ ಬೇರೆ ತರದ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಬೆಳೆಸುವ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿಲ್ಲ. ಈ ವಾತಾವರಣ ಸೃಷ್ಟಿಯಾಗಬೇಕು. 
 
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಂಗಭೂಮಿ ಶಿಕ್ಷಣವನ್ನು ನೀಡು ಪ್ರಯತ್ನವನ್ನು ಸರ್ಕಾರ ಆರಂಭಿಸಿದೆ. ಆದರೆ ಈ ನಿಟ್ಟಿನಲ್ಲಿ ಒಂದು ಪಠ್ಯಕ್ರಮವಾಗಲೀ, ನಾಟಕ ಶಿಕ್ಷಕರ ಪೂರಕ ವಾತಾವರಣಗಳಾಗಲೀ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ನಾಟಕ ಶಿಕ್ಷಣ ಹೇಗೆ ಸಾಧ್ಯ? 
ಸರ್ಕಾರದ ವ್ಯವಸ್ಥೆಯಲ್ಲಿ ಕಲಾವಿದರು ಹೋಗಿ ಸೇರಿದರೆ ತಮ್ಮ ಸಂವೇದನೆಗಳನ್ನು ಕಳೆದುಕೊಂಡುಬಿಡುತ್ತಾರೆ. ಪೂರಕ ವಾತಾವರಣ ಶಾಲೆಗಳಲ್ಲಿ ಇರುವುದಿಲ್ಲ. ಶಾಲಾಶಿಕ್ಷಕರಾಗಿದ್ದ ಬಹಳ ದೊಡ್ಡ ಸಂಗೀತಗಾರರಾದ ಪರಮೇಶ್ವರ್ ಹೆಗ್ಡೆ ರಾಜೀನಾಮೆ ಕೊಟ್ಟ ಹೊರಗಡೆ ಬಂದರು.  ಕಲೆಗೆ ಬೆಲೆ ಸಿಗುದುದೇ ಇದಕ್ಕೆ ಕಾರಣ. ನಾಟಕ ಶಿಕ್ಷಕರು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಅಂದರೆ ಮಕ್ಕಳಲ್ಲಿ ಒಂದು ಸಂವೇದನೆ ಸೃಷ್ಟಿ ಮಾಡುವಂತಹ ಅವಕಾಶವಿರಬೇಕು. ಮಕ್ಕಳು ಎಷ್ಟೆಷ್ಟು ಸಂವೇನಾಶೀಲರಾಗುತ್ತಾರೋ ಅಷ್ಟು ಬೆಳೆಯಲು ಸಾದ್ಯ. ಆದರೆ ನಮ್ಮ ಸರಕಾರದೊಂದಿಗೆ ಗುದ್ದಾಡುವ ಕಾರ್ಯ ಸಾದ್ಯವಿಲ್ಲ. ವ್ಯವಸ್ಥೆಯಲ್ಲಿರುವ ಏರುಪೇರುಗಳಿಂದ  ಕಲೆಗಾರನಿಗೆ ಬೆಳೆಯಲು ಸಾಧ್ಯವಿಲ್ಲದಾಗಿದೆ. ನಮ್ಮ ನಾಟಕದ ಮೇಸ್ಟ್ರು ಅಟೆಂಡರ್ ಅಗಿ ಕೆಲಸ ಮಾಡುವ ಪರಿಸ್ಥಿತಿ ಅಲ್ಲಿದೆ. ಆದರೆ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಅವರನ್ನು ತೊಡಗುವಂತೆ ಮಾಡಲು ಸಾಧ್ಯವಿದೆ. ನಮ್ಮ ಶಿಕ್ಷಣವ್ಯವಸ್ಥೆಯಲ್ಲಿರುವ ಡ್ರಾಯಿಂಗ್ ಶಿಕ್ಷಕರಿರಲಿ, ಕ್ರಾಫ್ಟ್ ಶಿಕ್ಷಕರಿರಲಿ ಇವರೆಲ್ಲಾ ಸೇರಿ ಮುಖ್ಯವಾಹಿನಿಯೊಂದಿಗೆ ಹೇಗೆ ಕಾರ್ಯನಿರ್ವಹಿಸಿ ಮಕ್ಕಳ ಮನೋವಿಕಾಸಕ್ಕೆ, ಅವರಲ್ಲಿ ಸಂವೇದನೆ ಬೆಳೆಸುವ ನಿಟ್ಟಿನಲ್ಲಿ ಸಹಾಯವಾಗಬದುದೆಂದು ನಾವು ಪ್ರಯೋಗಾತ್ಮಕವಾಗಿ ಕ್ಷೇತ್ರಕಾರ್ಯದಲ್ಲಿ ಮಾಡಿ ತೋರಿಸಿದ್ದೇವೆ. ಹಲವಾರು ನಾಟಕದ ಶಿಕ್ಷಕರು ಈಗಾಗಲೇ ಅದ್ಭುತ ಕೆಲಸಗಳನ್ನು ಮಾಡಿಯೂ ತೋರಿಸಿದ್ದಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಒದ್ದಾಡುವುದು ಬಹಳ ಕಷ್ಟವಿದೆ. ವ್ಯವಸ್ಥೆಯೊಳಗಿರುವ ತರತಮ ವ್ಯವಸ್ಥೆಯೂ ಕಲಾವಿದರಿಗೆ ಒಗ್ಗುವುದಿಲ್ಲ. 

ಒಬ್ಬ ರಂಗಕರ್ಮಿಯಾಗಿ ಇಂದಿನ ಸಾಮಾಜಿಕ ರಾಜಕೀಯ ಸಂದರ್ಭದ ಕುರಿತು ಏನು ಹೇಳುತ್ತೀರಿ?
ನಮ್ಮ ಸಂದರ್ಭದ ದುರಂತ ಏನೆಂದರೆ ಇಂದು ಯಾವ ಚಳವಳಿಯನ್ನೂ ಮಾಡಲಾಗದ ಒಂದು ದುಸ್ಥಿತಿ ಇದೆ. ಎಲ್ಲಾ ಚಳವಳಿಗಳನ್ನೂ ಕ್ಯಾಪಿಟಲೈಸ್ ಮಾಡಿಕೊಂಡುಬಿಡಲಾಗುತ್ತಿದೆ. ಕೆಲವೊಮ್ಮೆ ಯೋಚಿಸಿದಾಗ ಈ ಕಾಲದಲ್ಲಿ ಬದುಕಲಿಕ್ಕೇ ಅರ್ಹತೆ ನಮಗೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ಆದರೂ ಇದೊಂದು ಕಾಲಘಟ್ಟದವರೆಗೆ ಮಾತ್ರ ಅನ್ನಿಸುತ್ತದೆ. ರಾಜಕೀಯದಲ್ಲಿ ವಿಕೇಂದ್ರೀಕರಣ ಬಂದ ಮೇಲೆ ವಿಧಾನಸೌಧದಿಂದ ಗ್ರಾಮಪಂಚಾಯಿತಿ ಮಟ್ಟಕ್ಕೂ ಭ್ರಷ್ಟಾಚಾರ ಮುಂದುವರೆಯಿತು. ಆದರೆ ಜನರು ಇದನ್ನು ಎಲ್ಲಿಯವರೆಗೆ ಸಹಿಸಿಕೊಮಡಿರಲು ಸಾಧ್ಯ. ಇದೆಲ್ಲಾ ಕೊನೆಗೊಳ್ಳಲೇಬೇಕು. 


ಸೆಪ್ಟೆಂಬರ್ 13, 2012

ಕಸದ ವಿಷಚಕ್ರದೊಳಗೆ

ಕೃಪೆ: ದ ಸಂಡೆ ಇಂಡಿಯನ್, ಕನ್ನಡ





ಕಳೆದ ಆಗಸ್ಟ್ ೨೩ ರಂದು ಬೆಂಗಳೂರಿನ ಉತ್ತರ ಭಾಗದಲ್ಲಿರುವ ಹೆಸರಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ ಏಕಾಏಕಿ ಸುಮಾರು ೬೦೦ ಪೊಲೀಸರು ಜಮಾಸಿದ್ದರು. ಯಾರೋ ಉಗ್ರಗಾ"ಗಳು ಆ ಹಳ್ಳಿಯಲ್ಲಿ ಅಡಗಿಕೊಂಡಿದ್ದರು ಎಂದಲ್ಲ. ಬದಲಾಗಿ ಹಾಗೆ ಜಮಾಸಿದ್ದ ಪೊಲೀಸರೇ ಎರಡು ದಿನಗಳ ಕಾಲ ಹಳ್ಳಿಯಲ್ಲಿ ಉಗ್ರ ವಾತಾವರಣ ಸೃಷ್ಟಿಸಿಬಿಟ್ಟಿದ್ದರು. ಅಂದು ಬೆಳಿಗ್ಗೆ ಊರಿನ ಮುಖಂಡರಿಗೆ ಕರೆಮಾಡಿದ ಡಿವೈಎಸ್‌ಪಿ ಶ್ರೀಧರ್ ಮಾವಳ್ಳಿಪುರ ಕಸದ ಗುಡ್ಡೆಯ ಬಳಿ ಬರಲು ತಿಳಿಸಿದ್ದರು. ಮಾವಳ್ಳಿಪುರದ ಮೂರು ನಾಲ್ಕು ಜನರು ಅಲ್ಲಿಗೆ ಹೋದೊಡನೆ ಆ ಪೊಲೀಸ್ ಅಧಿಕಾರಿ ಊರಿಗೆ ಬರುವ ಕಸದ ಲಾರಿಗಳನ್ನು ತಡೆಯುವುದೇಕೆ ಎಂದು ಧಮಕಿ ಹಾಕಿದರು. ಆಗ ಊರಿನವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ತಿಂಗಳ ಹಿಂದೆಯೇ ಅಲ್ಲಿ ಕಸವನ್ನು ಹಾಕುವುದನ್ನು ನಿಲ್ಲಿಸಲು ತಿಳಿಸಿದೆ ಎಂದು ಆದೇಶ ಪತ್ರ ತೋರಿಸಿದರು. ಆದರೆ ಅದಕ್ಕೆ ಗಮನ ನೀಡದ ಪೊಲೀಸರು ಬಲವಂತವಾಗಿ ಕಸ ತುಂಬಿದ ಲಾರಿಗಳಿಗೆ ಅವಕಾಶ ನೀಡಿದಾಗ ತಕ್ಷಣಕ್ಕೆ 25-30 ಜನರು ನೆರೆದು ಪೊಲೀಸರೊಂದಿಗೆ ಮಾತಿಗಿಳಿದರು. ಇಷ್ಟರಲ್ಲಿ ಏಕಾಏಕಿ ವಾಹನಗಳಲ್ಲಿ ಬಂದ ೬೦೦ ರಷ್ಟು ಪೊಲೀಸರು ಭಯಭೀತ ವಾತಾವರಣವನ್ನೇ ಹುಟ್ಟಿಸಿಬಿಟ್ಟರು. 
ಆದರೆ ಕಳೆದೊಂದು ದಶಕದಿಂದಲೂ ಬೆಂಗಳೂರು ಬಿಸಾಡಿ ಕಳಿಸಿದ ಕಸವನ್ನು ಸುರಿಸಿಕೊಂಡು ಇನ್ನಿಲ್ಲದ ತೊಂದರೆಗಳನ್ನನುಭವಿಸಿರುವ ಗ್ರಾಮಸ್ಥರು ಸೋಲೊಪ್ಪಲು ಸಿದ್ಧರಿರದೇ ಗಟ್ಟಿಯಾಗಿ ನಿಂತುಬಿಟ್ಟರು. ಅಷ್ಟರಲ್ಲಿ ಮಾಧ್ಯಮಗಳೂ, ಹಲವು ಸಂಘಸಂಸ್ಥೆಗಳ ಮುಖಂಡರೂ ಅಲ್ಲಿಗೆ ಧಾವಿಸಿದ್ದರಿಂದ ಅಂದು ಹಳ್ಳಿಗರ ಮೇಲೆ ನಡೆದುಹೋಗಬಹುದಾಗಿದ್ದ ದೊಡ್ಡ ಮಟ್ಟದ ದೌರ್ಜನ್ಯವೊಂದು ತಪ್ಪಿತೆಂದೇ ಹೇಳಬೇಕು. ಆದರೆ ಆ ಪ್ರತಿಭಟನೆಯಲ್ಲಿ ಉದ್ವೇಗಕ್ಕೊಳಗಾದ ಎಲ್. ಶ್ರೀನಿವಾಸ ಎಂಬ 37 ವಯಸ್ಸಿನ ಯುವಕ ಹೃದಯಾಘಾತವಾಗಿ ಕುಸಿದು ಬಿದ್ದ. ಕೂಡಲೇ ಆತನನು ದೇಹವನ್ನು ಯಲಹಂಕ ಆಸ್ಪತ್ರೆಗೆ ಸೇರಿಸಲಾತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ. ಇದರಿಂದ ಜನರು ಮತ್ತುಷ್ಟು ರೊಚ್ಚಿಗೆದ್ದರು. ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳ ಉದ್ಧಟತನದಿಂದಾಗಿ ಪ್ರಾಣಕಳೆದುಕೊಂಡ ಯುವಕನ ಶವವನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ಗ್ರಾಮಸ್ಥರು ಸಜ್ಜಾಗುತ್ತಿದ್ದಂತೆಯೇ ಮರುದಿನ ಬೆಳಕು ಹರಿಯುವುದರೊಳಗಾಗಿ ಯಾರಿಗೂ ಗೊತ್ತಿಲ್ಲದಂತೆ ಆ ಯುವಕನ ಶವವನ್ನು ಆಸ್ಪತ್ರೆಂದ ಪೊಲೀಸರು ಕದ್ದು ಸಾಗಿಸಿದ್ದರು. ದ್ವಾರದಲ್ಲಿ ತಡೆದ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಶವವನ್ನು ಆ ಯುವಕನ ಊರಾದ ಕುರುಬರಹಳ್ಳಿಯಲ್ಲಿ ಅನಾಥವಾಗಿ ಇಟ್ಟು ಹೋದರು. ಆಗಲೂ ಊರಿಗೆ 400-500 ಜನ ಪೊಲೀಸರು ಶವದ ವಾಹನದೊಂದಿಗೆ ಬಂದಿದ್ದನ್ನು ಬೆಳಬೆಳಗ್ಗೆಯೇ ನೋಡಿದ ಗ್ರಾಮಸ್ಥರು ಹೌಹಾರಿದ್ದರು. ಆ ಬಡ ರೈತಾಪಿ ಯುವಕ ಕುರುಬರಹಳ್ಳಿಯ ಶ್ರೀನಿವಾಸನ ಸಾವಿಗೆ ಕಾರಣವಾದ ಬಿಬಿಎಂಪಿಯಾಗಲೀ ಸರ್ಕಾರವಾಗಲೀ ಆತನ ಅನಾಥ ಕುಟುಂಬಕ್ಕೆ ಈ ಕ್ಷಣದವರೆಗೂ ಬಿಡಿಗಾಸಿನ ಪರಿಹಾರವನ್ನೂ ನೀಡಿಲ್ಲ. 
ಬೆಂಗಳೂರೆಂಬ ಮಹಾನಗರಕ್ಕೆ ಸನಿಹದಲ್ಲಿರುವ ಮಾವಳ್ಳಿಪುರವೆಂಬ ಒಂದು ಹಳ್ಳಿಯಲ್ಲಿ ಮೇಲೆ ಹೇಳಿದ ಒಂದು ವಿಚಿತ್ರ ಸನ್ನಿವೆಶ ಸ್ಟೃಯಾಗಿದ್ದಾದರೂ ಯಾಕೆ ಎಂದು ಕಾರಣಗಳನ್ನು ಹುಡುಕುತ್ತಾ ಹೊರಟರೆ ದಿಗ್ಭ್ರಮೆ ಹುಟ್ಟಿಸುವ ವಿಚಾರಗಳು ಎದುರಾಗುತ್ತವೆ; ಆಡಳಿತ ಚುಕ್ಕಾಣಿ ಹಿಡಿದವರು, ಬೃಹತ್ ಮಹಾನಗರ ಪಾಲಿಕೆಯಂತಹ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ನಡೆಸುವರು ಮಾವಳ್ಳಿಪುರದಂತಹ ಹಳ್ಳಿಗಳ ಜನರ ಬಗ್ಗೆ ತೋರಿದ ಅಸಡ್ಡೆಗಳು, ಹೃದಯ ಹೀನ ಮನಸ್ಥಿತಿಗಳು, ಸಾರ್ವಜನಿಕ ದುಡ್ಡಿನ ಮೇಲಿನ ಅವರ ಹಪಹಪಿಕೆ ಮತ್ತು ಇದೆಲ್ಲದ್ದಕ್ಕೆ ಅಧಿಕಾರದ ದುರುಪಯೋಗಗಳ ಬ್ರಹ್ಮಾಂಡ ದರ್ಶನವಾಗುತ್ತದೆ. ಮಾತ್ರವಲ್ಲ ಇವೆಲ್ಲ ಇಲ್ಲಿಗೇ ಮುಂದುವರೆದರೆ ಮುಂಬರುವ ವರ್ಷಗಳಲ್ಲಿ ಬೆಂಗಳೂರು ಮತ್ತು ಇನ್ನಿತರ ದೊಡ್ಡ ನಗರಗಳ ಸಮಾನ್ಯ ಜನರಿಗೆ, ಮಾವಳ್ಳಿಪುರದಂತಹ ನೂರಾರು ಹಳ್ಳಿಗಳ ಜನರಿಗೆ ಬಂದೊದಗಲಿರುವ ದುರ್ದಿನಗಳ ಮುನ್ಸೂಚನೆಯೂ ಸಿಗುತ್ತದೆ.  
ಕಸದ ವಿಷವನ್ನು ಹಳ್ಳಿಗಳಿಗೆ ಉಣಿಸುತ್ತಿರುವ ಈ ವ್ಯವಸ್ಥೆಯೇ ಒಂದು ವಿಷಚಕ್ರವಾಗಿ ಪರಿಣಮಿಸಿದ ರೀತಿಯನ್ನು ಮಾವಳಿಪುರದ ಉದಾಹರಣೆಂದಲೇ ನೋಡುವುದೊಳಿತು.  
ಈಗ್ಗೆ ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ಕಸವನ್ನು ಸುರಿಯಲು ನಗರ ಪಾಲಿಕೆ ಒಂದು ಕಾನೂನುಬಾಹಿರ ದಾರಿಯನ್ನು ಕಂಡುಕೊಂಡಿತ್ತು. ಅದೇನೆಂದರೆ, ಯಲಹಂಕ ಹೋಬಳಿಯ ಸುಬೇದಾರ್ ಪಾಳ್ಯದ ಬೈಲಪ್ಪ ಎಂಬುವವರ ಜಮೀನಿನಲ್ಲಿ ಆ ಕಸವನ್ನು ಸುರಿಯಲು ಅದು ಕರಾರು ಪತ್ರ ಮಾಡಿಕೊಂಡಿತ್ತು. ಅದು ಕೂಡ ಕಾವಲ್‌ಬಂಡೆ ಅರಣ್ಯಪ್ರದೇಶದ ಜಾಗವನ್ನು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಯಾಮಾರಿಸಿಯೋ ಅಥವಾ ಅವರ ಕೈಬಿಸಿಮಾಡಿಯೋ ಸುಳ್ಳುದಾಖಲೆಗಳ ಮೂಲಕ ಬೈಲಪ್ಪ ತನ್ನ ಹೆಸರಿಗೆ ಮಾಡಿಕೊಂಡಿದ್ದ ಜಮೀನಾಗಿತ್ತು. ದಿನನಿತ್ಯ ನೂರಾರು ಲಾರಿಗಳು ಕಸತುಂಬಿಕೊಂಡು ಬಂದು ಸುರಿದು ಬೆಂಕಿ ಹಚ್ಚಿಹೋಗುವ ಪರಿಪಾಠ ಶುರುಮಾಡಿಕೊಂಡಿದ್ದರು. ಪರಿಣಾಮವಾಗಿ ಈ ಪ್ರದೇಶದ ಸುತ್ತಲಿನ ಗಾಳಿ, ನೀರು ಮಲಿನಗೊಂಡು ಜನರ ಆರೋಗ್ಯದ ಮೇಲೆ ವಿಪರೀತ ಆರೋಗ್ಯ ಸಮಸ್ಯೆಗಳು ಆರಂಭವಾದವು. ಜನರ ಪ್ರತಿರೋಧವೂ ಎದುರಾತು. ಆ ಪ್ರತಿರೋಧಕ್ಕೆ ಬೈಲಪ್ಪ ಜನರ ಮೇಲೆ ಗೂಂಡಾಗಿರಿಯನ್ನು ನಡೆಸಿದ್ದ. ಕೊನೆಗಂತೂ ಆತನ ದೌರ್ಜನ್ಯ ಕೊನೆಗೊಂಡು ೨೦೦೪ರಲ್ಲಿ ಬಿಬಿಎಂಪಿಯು ಪಕ್ಕದ ಮಾವಳಿಪುರದ ಸರ್ವೆ ನಂ ೮ರ ೧೦೦ ಎಕರೆ ಜಮೀನಿನಲ್ಲಿ ಅಧಿಕೃತವಾಗಿ ಕಸವಿಲೇವಾರಿ ಘಟಕವೊಂದನ್ನು ಸ್ಥಾಪಿಸಲು ಹೈದರಾಬಾದ್ ಮೂಲದ ರಾಮ್‌ಕಿ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿತು. ಅಲ್ಲಿಂದಾಚೆಗೆ ಸುತ್ತಮುತ್ತಲ ಹಳ್ಳಿಯ ಜನರಿಗೆ ಬೆಂಕಿಂದ ಬಾಣಲೆಗೆ ಹಾರಿದ ಅನುಭವವಾಗುತ್ತಾ ಹೋತು. ಈ ರಾಮ್‌ಕಿ ಕಂಪನಿಯು ನೆಪಮಾತ್ರಕ್ಕೆ ಒಂದು ಕಸಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಪ್ರತಿ ಲೋಡು ಲಾರಿಗೆ ಬಿಬಿಎಂಪಿಂದ ೩೦೦ ರೂಪಾಗಳಂತೆ ಇದುವರೆಗೆ ನೂರಾರು ಕೋಟಿ ರೂಪಾಗಳನ್ನು ನುಂಗಿ ನೀರುಕುಡಿದಿದೆ. ಈಗ ಮಾವಳ್ಳಿಪುರದ ಈ ಜಾಗದಲ್ಲಿ ಇದುವರೆಗೆ ಸಂಗ್ರಹವಾಗಿರುವ ಒಟ್ಟು ಕಸ 22,00,000 ಟನ್ ಎಂದು ಅದಾಜಿಸಲಾಗಿದೆ! ಈ ಕಸದ ಬೆಟ್ಟದ ಮೇಲೆ ನಿಂತರೆ ಅಲ್ಲಿಂದ ಬಹುದೂರದ ಬೆಂಗಳೂರಿನ ಪ್ರದೇಶಗಳೂ ಕಾಣುತ್ತವೆ! ಒಟ್ಟು ಕಸದಲ್ಲಿ ರಾಮ್‌ಕಿ ಕಂಪನಿ ಸಂಸ್ಕರಣೆ ಮಾಡಿ ಹಾಕಿರುವುದು ಕೇವಲ 15,000 ಟನ್‌ಗಳಷ್ಟು ಮಾತ್ರ! 
ಅಕ್ಷರಶಃ ಬೆಟ್ಟದಂತಿರುವ ಈ ಕಸ ಅಂದಿನಿಂದಲೂ ಅನೇಕ ವಿಷಕಾರಿ ಅನಿಲ-ದ್ರವಗಳನ್ನು ಸ್ಟೃಸುತ್ತಾ ಸುತ್ತಮುತ್ತಲ ಪ್ರದೇಶವನ್ನು ಮಲಿನಗೊಳಿಸುತ್ತಾ ಬಂದಿದೆ! ಸುತ್ತಮುತ್ತಲಿನ ಶಿವಕೋಟೆ, ಕುರುಬರಹಳ್ಳಿ, ರಾಮಗೊಂಡನಹಳ್ಳಿ ಮುಂತಾದ ಹತ್ತಾರು ಹಳ್ಳಿಗಳ ಕೃಕರ ಬದುಕು ಇನ್ನಿಲ್ಲಂತೆ ಘಾಸಿಗೊಂಡಿದೆ. ಬೆಂಗಳೂರಿನ ಗಲ್ಲಿಗಲ್ಲಿಗಳ ತರಹೇವಾರಿ ತ್ಯಾಜ್ಯಗಳು ಈ ಊರಿನಲ್ಲಿ ಪರ್ವತದೋಪಾದಿಯಲ್ಲಿ ಪೇರಿಸುತ್ತಾ ಹೋದಂತೆ ಸೊಳ್ಳೆ, ನೊಣಗಳು, ಕ್ರಿಮಿಕೀಟಗಳ ಕಾಟ ವಿಪರೀತ ಹೆಚ್ಚಿ ನಾನಾ ಖಾಲೆಗಳಿಗೆ ಜನರು ಈಡಾಗಿದ್ದಾರೆ. ಅಲ್ಲಿಂದ ಹತ್ತಾರು ಕಿಲೋಮೀಟರ್ ದೂರದ ಊರುಗಳಲ್ಲಿಯೂ ದುರ್ವಾಸನೆ ಜನಜೀವನವನ್ನು ಅಸಹನೀಯಗೊಳಿಸಿದೆ. ಕಸದ ಗುಡ್ಡದಡಿಂದ ಸೋರಿದ ವಿಷಕಾರಿ ದ್ರವ (ಅದನ್ನು ಲೀಚೆಟ್ ಎನ್ನಲಾಗುತ್ತದೆ) ಅಂತರ್ಜಲದಲ್ಲಿ ಸೇರಿಕೊಂಡು ಕೆಳಭಾಗದ ಹಳ್ಳಿಗಳ ಕೊಳವೆಬಾವಿಗಳಲ್ಲಿ, ನೀರಿನ ಕಾಲುವೆಗಳಲ್ಲಿ ಮತ್ತು ಶಿವಕೋಟೆಯ ಕೆರೆಯಲ್ಲಿ ಸೇರಿಕೊಂಡು ಜನರು ತೀವ್ರ ಅಸ್ವಸ್ಥರಾದರು. ಈ ದ್ರವವೆಲ್ಲವೂ ಮುಂದೆ ಹರಿದು ಅರ್ಕಾವತಿ ನದಿಯ ಅಚ್ಚುಕಟ್ಟನ್ನು ಸೇರುವುದರಿಂದ ವಿಷವು ಅಲ್ಲಿಗೂ ಮುಂದುವರೆಯುತ್ತ್ತಿದೆ. ಈಗಾಗಲೇ ಡೆಂಘಿ, ಕ್ಯಾನ್ಸರ್, ಕಿಡ್ನಿ ಖಾಲೆ, ವೈರಲ್ ಫಿವರ್‌ನಂತಹ ಖಾಲೆಗಳಿಗೀಡಾಗಿ ಎಂಟು ಜನರು ಜೀವಕಳೆದುಕೊಂಡಿದ್ದಾರೆ. ಇಡೀ ಪ್ರದೇಶದ ಕೃಯ ಮೇಲೆಯೂ ಈ ಕಸದ ವಿಷ ಅನಾಹುತಕಾರಿ ಪರಿಣಾಮವನ್ನುಂಟುಮಾಡಿದೆ. ರೈತರ ಹೊಲಗಳಲ್ಲಿ ರಾಗಿಯೊಂದನ್ನು ಹೊರತುಪಡಿಸಿ ಮತ್ತಿನ್ನಾವ ಬೆಳೆಯೂ ಉತ್ತಮ ಇಳುವರಿ ನೀಡುತ್ತಿಲ್ಲ. ದ್ರಾಕ್ಷಿ ತೋಟಗಳ ದ್ರಾಕ್ಷಿ ಗೊಂಚಲೊಂದರಲ್ಲಿ ಒಂದೇ ಬಾರಿಗೆ ಹಣ್ಣುಗಳಾಗುವುದಿಲ್ಲ. ಚೆಂಡುಹೂವಿನ ಬೆಳೆಗೂ ಸಾವಿರಾರು ತರದ ಕ್ರಿಮಿಕೀಟಗಳು ದಾಳಿಮಾಡಿ ತೀವ್ರ ನಷ್ಟವನ್ನುಂಟುಮಾಡುತ್ತಿವೆ ಎಂದರೆ ಪರಿಸ್ಥಿತಿಯ ಭೀಕರತೆಯನ್ನು ಯಾರು ಬೇಕಾದರೂ ಊಹಿಸಬಹುದು.  
ಬೆಂಗಳೂರಿನ ಕಸವೆಲ್ಲ ಹೋಗಿ ಸೇರುತ್ತಿರುವುದು ಹೀಗೆ...
ಇಷ್ಟೆಲ್ಲಾ ಅನಾಹುತಗಳು ನಡೆಯುವುದನ್ನು ಕಂಡು ಈ ಊರುಗಳ ಜನರು ಸತತವಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕಸದ ವಿಲೇವಾರಿಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಇದುವರೆಗೆ ಏನಿಲ್ಲೆಂದರೂ 230 ಮನವಿಪತ್ರಗಳನ್ನು ಕೊಟ್ಟಿರುವುದಾಗಿ ದಲಿತ ಸಂಘರ್ಷ ಸಮಿತಿಯ (ಸಂಯೋಜಕ) ಸ್ಥಳೀಯ ಮುಖಂಡರು ತಿಳಿಸುತ್ತಾರೆ! ಆದರೆ ಇದುವರಗೆ ಬಿಬಿಎಂಪಿ ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಯಾವುದೇ ಸಕಾರಾತ್ಮಕ ಪ್ರತಿಸ್ಪಂದನೆ ತೋರಿದ್ದಿಲ್ಲ. ಬದಲಿಗೆ, ನ್ಯಾಯಯುತವಾಗಿ ಹೋರಾಡುತ್ತಿದ್ದ ಆ ಅಮಾಯಕ ಹಳ್ಳಿಗರನ್ನು ನಾನಾ ಬಗೆಯಲ್ಲಿ ಬಗ್ಗಿಸಲು ಯತ್ನಿಸಿದ್ದಾರೆಯೇ ವಿನಃ ಅವರ ಆಕ್ರಂದನವನ್ನು ಆಲಿಸುವ ಆಲಿಸುವ ಗೋಜಿಗೇ ಹೋಗಿಲ್ಲ. 
ಇಲ್ಲಿ ಗಮನಿಸಬೇಕಾದ ವಿಷಯವೊಂದಿದೆ. ಸುಬೇದಾರ್ ಪಾಳ್ಯದ ಬೈಲಪ್ಪನ ಹೊಲದಲ್ಲಿ ಮತ್ತು ಮಾವಳ್ಳಿಪುರದ ಈ ಕಸ ವಿಲೇವಾರಿ ಘಟಕದಲ್ಲಿ ಕಸವನ್ನು ಬಿಬಿಎಂಪಿ ಸುರಿಯಲು ಆರಂಭಿಸುವುದಕ್ಕೆ ಎರಡು ವರ್ಷ ಮೊದಲೇ ಈ ದೇಶದಲ್ಲಿ ಕಸ ವಿಲೇವಾರಿಯ ಕುರಿತು ನಿಯಮಗಳು ರಚನೆಯಾಗಿದ್ದವು. 2000ನೇ ಇಸವಿಯಲ್ಲಿ ಕೇಂದ್ರ ಸರ್ಕಾರವು ಮುನಿಸಿಪಲ್ ಘನತ್ಯಾಜ್ಯ (ನಿರ್ವಹಣೆ) ನಿಯಮಗಳು 2000ನ್ನು (ಎಂಎಸ್‌ಡಬ್ಲ್ಯೂ ನಿಯಮಗಳು) ರಚಿಸಿ ಅವನ್ನು ಪಾಲಿಸಲು ರಾಜ್ಯಸರ್ಕಾರಗಳಿಗೆ ಆದೇಶ ನೀಡಿತ್ತು. ವಾಸ್ತವದಲ್ಲಿ ಈ ನಿಯಮಗಳ ಯಾವ ಅಂಶವನ್ನೂ ಈ ಕಸ"ಲೇವಾರಿ ಘಟನಗಳಲ್ಲಿ ಪಾಲಿಸಲಾಗಿಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ. 
ಅಂತಿಮವಾಗಿ ಮಾವಳ್ಳಿಪುರದ ಜನರ ಹೋರಾಟಕ್ಕೆ ಬೆಲೆ ಬಂದಿದ್ದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಚೇರ್ಮನ್ ಆದ ಸದಾಶಿವಯ್ಯನವರು 2012ರ ಜುಲೈ 11ರಂದು, ಬಿಬಿಎಂಪಿಯ ಆಯುಕ್ತ, ಬಿಬಿಎಂಪಿ ಆರೋಗ್ಯ "ಭಾಗದ ಡೆಪ್ಯೂಟಿ ಕಮಿಷನರ್ ಮತ್ತು ರಾಮ್‌ಕಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟೀಸು ನೀಡಿ ಮಾವಳ್ಳಿಪುರದಲ್ಲಿ ಕೂಡಲೇ ಕಸ ಸುರಿಯುವುದನ್ನು ನಿಲ್ಲಿಸಬೇಕೆಂದು ಕಟ್ಟುನಿಟ್ಟಾಗಿ ಹೇಳಿದ ಮೇಲೆಯೇ. ಇಲ್ಲವಾದಲ್ಲಿ ಎಲ್ಲರ ಮೇಲೆ ಕಾಯ್ದೆಯನ್ವಯ  ಕ್ರಿಮಿನಲ್ ಕೇಸುಗಳನ್ನು ದಾಖಲಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದರು. ತಕ್ಷಣ ಉಚ್ಛ ನ್ಯಾಯಾಲವೂ ಬಿಬಿಎಂಪಿಗೆ ಛೀಮಾರಿ ಹಾಕಿತು. ಈಗ ಸ್ಥಳೀಯರ ಪ್ರತಿಭಟನೆಯ ನಂತರದಲ್ಲಿ ಮತ್ತು ಜನರ ಪ್ರತಿಭಟನೆ ಮಾಧ್ಯಮಗಳಲ್ಲಿ ಪ್ರಚಾರವಾದೊಡನೆ ರಾಮ್‌ಕಿ ತನ್ನ ಕೆಸಲವನ್ನು ನಿಲ್ಲಿಸಿತಲ್ಲದೇ ಬಿಬಿಎಂಪಿಯ ಕಸದ ಲಾರಿಗಳೂ ಅಲ್ಲಿ ಕಸಸುರಿಯುವುದನ್ನು ನಿಲ್ಲಿಸಿದವು. ಕೆಲವಾರು ವರ್ಷಗಳ ಇಡೀ ಹೋರಾಟದಲ್ಲಿ ಮಹತ್ತರ ಪಾತ್ರವಹಿಸಿದ ಹಾಲಿ ಗ್ರಾಮ ಪಂಚಾಯತಿ ಸದಸ್ಯ ಮತ್ತು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ಶ್ರೀನಿವಾಸ ಎಂಬ ಯುವ ನಾಯಕ ವಹಿಸುತ್ತಿರುವ ಪರಿಶ್ರಮ ಮತ್ತು ತೋರಿದ ಧೈರ್ಯದ ಕುರಿತು ಮಾವಳ್ಳಿಪುರ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವರೆಲ್ಲರ ಹೋರಾಟಕ್ಕೆ ಬೆಂಬಲವಾಗಿ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಎಂಬ ಪರಿಸರ ಸಂಘಟನೆಯೂ ಸಾಕಷ್ಟು ಶ್ರಮವಹಿಸಿದೆ.  
ಕಸ ಸುರಿಯುವುದು ನಿಂತಿರುವ ಮಾತ್ರಕ್ಕೆ ಅಲ್ಲೀಗ ಸಮಸ್ಯೆಯೇನೂ ಸಂಪೂರ್ಣವಾಗಿ ಪರಿಹಾರವಾಗಿಲ್ಲ. ಕಸವನ್ನು ಸಂಸ್ಕರಿಸದೇ ಹತ್ತಾರು ವರ್ಷಗಳ ಕಾಲ ಸುರಿದು ಕಸದ ಬೆಟ್ಟವನ್ನೇ ನಿರ್ಮಿಸಲಾಗಿದ್ದು ಅದು ಮುಂದೆಯೂ ಅನಾಹುತಗಳನ್ನು ಸ್ಟೃಸುತ್ತಲೇ ಹೋಗಲಿದೆ. ಈಗ ಸಮಸ್ಯೆಗೆ ತೇಪೆ ಹಾಕುವ ಕ್ರಮವೆಂಬಂತೆ ಬಿಬಿಎಂಪಿ ಆ ಕಸದ ಗುಡ್ಡೆಯ ಮೇಲೆ ಮಣ್ಣನ್ನು ಹಾಕಿಸುತ್ತಿದೆ. ಒಂದು ಸರಿಯಾದ ಮಳೆ ಬಂತೆಂದರೆ ಮುಗಿತು. ಆ ಮಣ್ಣೆಲ್ಲಾ ಕೆಸರಾಗಿ ಹರಿದು, ಕಸದ ರಾಶಿ ಬಿರುಕು ಬಿಟ್ಟು ಒಳಗಡೆಯ ಕಸವೂ ಮೇಲೇಳತೊಡಗುತ್ತದೆ. ಎಲ್ಲಿಯವರೆಗೆ ಸಂಪೂರ್ಣ ಕಸವನ್ನು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ಜನರು ನಾನಾ ತೊಂದರೆಗೊಳಗಾಗುವುದು ತಪ್ಪುವುದಿಲ್ಲ. ಒಮ್ಮೆ ಈ ಕಸದ ಗುಡ್ಡೆಯನ್ನು ನೋಡಿದರೆ ಇಡೀ ಬೆಂಗಳೂರಿಗೆ ನಾನಾ ರೋಗಗಳನ್ನು ಯಥೇಚ್ಛವಾಗಿ ಹರಡಬಲ್ಲ ಗಂಗೋತ್ರಿಯೇ ಆಗಿದೆ ಎಂಬ ಭಾವನೆ ಬರುವುದು ಖಂಡಿತ.
ಬೆಂಗಳೂರಿನ ಕಸದ ಕೂಪಕ್ಕೆ ಬಲಿಯಾಗಿ ಹೆಚ್ಚೂಕಡಿಮೆ ಮಾವಳ್ಳಿಪುರದಂತಹ ಸ್ಫೋಟಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮತ್ತೊಂದು ಹಳ್ಳಿ ಮಂಡೂರು. ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಮಂಡೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಕಥೆ ಮತ್ತೂ ದುರಂತಮಯ. ಇಲ್ಲಿ ಸಾಗರದೋಪಾದಿಯಲ್ಲಿ ಅನಾಥವಾಗಿ ಬಿದ್ದುಕೊಂಡಿರುವ ಕಸದ ರಾಶಿಯಿಂದಾಗಿ ಜನರು ಸಹ ಇನ್ನಿಲ್ಲದ ಅನಾರೋಗ್ಯದ ತೊಂದರೆಗಳಿಗೆ ಈಡಗುತ್ತಿದ್ದಾರೆ. ಸುತ್ತಲ ಗ್ರಾಮಸ್ಥರು ನಾನಾ ರೀತಿಯ ಚರ್ಮರೋಗಗಳಿಂದ ತತ್ತರಿಸಿಹೋಗಿದ್ದಾರೆ. ತೆರೆದ ವಾಹನಗಳು ದಾರಿಯುದ್ದಕ್ಕೂ ಚೆಲ್ಲುವ ಕಸದಿಂದಾಗಿ ಸೊಳ್ಳೆ, ನೊಣಗಳು ಜನರ ನೆಮ್ಮದಿ ಕೆಡಿಸಿವೆ. ಊರಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಮ್ಮದಿಂದ ಪಾಠವನ್ನೂ ಕೇಳಲಾರದಷ್ಟು ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಇಲ್ಲಿ ಸುರಿಯುವ ಕಸದಲ್ಲಿಲ್ಲಿ ಏನೇನಿರುತ್ತದೆ ಎಂದು ಊಹಿಸಬೇಕಾದರೆ ಆ ಕಸದ ಗುಡ್ಡೆಯ ಮೇಲಿರುವ ಸಾವಿರಾರು ಬೀದಿನಾಗಳನ್ನೂ, ರಣಹದ್ದು, ಗಿಡುಗ, ಬೆಳ್ಳಕ್ಕಿಗಳ ಹಿಂಡುಗಳನ್ನು ನೀವು ನೋಡಿಕೊಂಡು ಬರಬೇಕು. ಸುತ್ತಲಿನ ಹಳ್ಳಿಗಳಲ್ಲಿಯೂ ಬೀದಿನಾಗಳ ಹಾವಳಿ ಅಷ್ಟಲ್ಲ. ಕಾನೂನಿನ ಪ್ರಕಾರ ಬೀದಿನಾಗಳು ಕಸ ವಿಲೇವಾರಿ ಸುತ್ತಮುತ್ತಲು ಸ್ಥಳದಲ್ಲಿ ಕಾಣಿಸಕೂಡದು! ಆದರೆ ಇಲ್ಲಿ ತದ್ವಿರುದ್ಧ ಸ್ಥಿತಿ.  
ಮಾವಳ್ಳಿಪುರ-ಕುರುಬರಹಳ್ಳಿಗಳಲ್ಲಿ ಪೊಲೀಸರು 
ಮಂಡೂರಿನಲ್ಲಿ ಶ್ರೀನಿವಾಸ ಗಾಯತ್ರಿ ಸೋರ್ಸಸ್ ಕಂಪನಿ ಸಂಸ್ಕರಣೆ ಮತ್ತು ವಿದ್ಯುಚ್ಛಕ್ತಿ ತಯಾರಿಕೆಯ ಪ್ರದರ್ಶನ ನೀಡುತ್ತಿದೆ. ಆದರೆ ಇದಕ್ಕೂ ಮಾವಳ್ಳಿಪುರದ ರಾಮ್‌ಕಿಗೂ ವ್ಯತ್ಯಾಸವೇನಿಲ್ಲ. ಮತ್ತೊಂದು ಕಡೆ ಇಲ್ಲಿ ಬಿಬಿಎಂಪಿಯೇ ನೇರವಾಗಿ ಕಸವನ್ನು ಸುರಿದು ಮತ್ತೆ ಇಲ್ಲಿಂದ ದೊಡ್ಡಬಳ್ಳಾಪುರದ ಬಳಿಯ ಟೆರ್ರಾಫಾರ್ಮ ಸಂಸ್ಕರರಣಾ ಘಟಕಕ್ಕೆ ಕೊಂಡೊಯ್ಯುತ್ತದೆ. ಈ ಕಸಸುರಿಯುವ ಗುಡ್ಡಗಳ ಸನಿಹದಲ್ಲಿ ಲ್ಯಾಂಡ್ ಫಿಲ್‌ಗಳಲ್ಲಿ ಸೇರುತ್ತಿರುವ ಲೀಚೆಟ್ (ಕಸದಿದ ಸೃಷ್ಟಿಯಾದ ರಾಸಾಯನಿಕ ವಿಷದ್ರವ) ಸೀದಾ ಭೂಮಿಯೊಳಗೇ ಇಂಗಿಹೋಗುವಂತೆ ಏರ್ಪಾಡು ಮಾಡಲಾಗಿದೆ! ಇದು ಎಂಎಸ್‌ಡಬ್ಲ್ಯೂ ನಿಯಮಗಳಿಗೆ ವಿರುದ್ಧವಾದುದೆಂದ ಕ್ರಮ. ಲೀಚೆಟ್ ಭೂಮಿಯೊಳಗೆ ಇಂಗಿ ಜಲದ ಮೂಲಗಳೊಂದಿಗೆ ಬೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಎಂಎಸ್‌ಡಬ್ಲ್ಯೂ ನಿಯಮ -2000ಹೇಳುತ್ತದೆ. ಅಂತಹ ಯಾವ ಮುನ್ನೆಚ್ಚರಿಕೆಯೂ ಇಲ್ಲಿ ಇಲ್ಲದ ಪರಿಣಾಮವಾಗಿ ಮಂಡೂರಿನ ಪಕ್ಕದ ಬೈಯಪ್ಪನಹಳ್ಳಿ ಕೆರೆಯ ನೀರು ವಿಷಕಾರಿಯಾಗಿದೆಯಲ್ಲದೆ ಪಕ್ಕದ ಗುಂಡೂರು, ಕಮ್ಮಸಂದ್ರ, ಬಿದರಹಳ್ಳಿ ಗ್ರಾಮಗಳ ಜನಜಾನುವಾರುಗಳು ತೋದರೆಗಳನ್ನನುಭವಿಸುವಂತಾಗಿದೆ. ಒಂದೆಡೆ ಜನರು ನಾನಾ ಖಾಲೆಗಳಿಗೊಳಗಾಗುತ್ತಿದ್ದರೆ ಈ ಊರುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಬ್ಬನೇ ಒಬ್ಬ ಖಾಯಂ ವೈದ್ಯರೂ ಇಲ್ಲಿಲ್ಲ. ಯಾವುದೇ ರೋಗಕ್ಕೂ ಒಂದೇ ಗುಳಿಗೆ! ವಿಶೇಷ ಏನು ಗೊತ್ತೆ? ಮಂಡೂರು ರಾಜ್ಯಕ್ಕೇ ಆರೋಗ್ಯ ಸಚಿವರಾಗಿರುವ ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರ ಸ್ವಕ್ಷೇತ್ರದಲ್ಲಿ ಬರುತ್ತದೆ.  ಇಂತಹ ಸಚಿವರಿಂದ ರಾಜ್ಯದ ಆರೋಗ್ಯವನ್ನು ನಿರೀಕ್ಷಿಸುವುದು ಹೇಗೆ?
ವಿಪರ್‍ಯಾಸದ ಸಂಗತಿಯೊಂದಿದೆ. ಪಂಚಾಯತ್ ರಾಜ್ಯ ಕಾಯ್ದೆಯ ಪ್ರಕಾರ ಅಧಿಕಾರವು ವಿಕೇಂದ್ರೀಕರಣಗೊಂಡು ಸ್ಥಳೀಯ ಆಡಳಿತ ಅಂಗಗಳಿಗೆ ಹೆಚ್ಚು ಅಧಿಕಾರವಿರಬೇಕು. ಆದರೆ, ಮಂಡೂರಿನ ಗ್ರಾಮಪಂಚಾಯ ವಿಷಯದಲ್ಲಿ ಅಂತಹ ಮಾತುಗಳು ಅರ್ಥ ಕಳೆದುಕೊಂಡಿವೆ. ಅದೆಷ್ಟು ಸಲ ಇಲ್ಲಿನ ಗ್ರಾಮಪಂಚಾಯತಿಯು ಸರ್ವಾನುಮತದಿಂದ ಇಲ್ಲಿ ಕಸದ ವಿಲೇವಾರಿಯನ್ನು ರದ್ದುಗೊಳಿಸಬೇಕೆಂದು ನಿರ್ಣಯ ಕೈಗೊಂಡು, ಶ್ರೀನಿವಾಸ ಗಾಯತ್ರಿ ಸೋರ್ಸಸ್ ಕಂಪನಿಯ ಸಂಸ್ಕರಣಾ ಘಟಕಕ್ಕೆ ಪರವಾನಿಗೆ ನಿರಾಕರಿಸುತ್ತಾ ಬಂದಿದ್ದರೂ ಗ್ರಾಮಸಭೆಯ ನಿರ್ಣಯಕ್ಕೆ  ಕವಡೆಕಾಸಿನಷ್ಟೂ ಬೆಲೆಲ್ಲದಂತಾಗಿದೆ. 2006ರಲ್ಲೇ ಶ್ರೀನಿವಾಸ ಗಾಯತ್ರಿ ರಿಸೋರ್ಸ್ ಸಂಸ್ಥೆಯ ಗುತ್ತಿಗೆ ಮುಗಿದಿದಿದ್ದರೂ ಅದು ಪರವಾನಗಿ ನವೀಕರಣ"ಲ್ಲದೆಯೂ ಇನ್ನೂ ತನ್ನ ಕೆಲಸ ಮಾಡುತ್ತಲೇ ಮುಂದುವರೆದಿದೆ!  
ಮಾವಳ್ಳಿಪುರದ ಜನರು ಬೀದಿಗಿಳಿದು ಹೋರಾಡಿ ಯುಶಸ್ಸು ಕಾಣತೊಡಗಿದಂತೆಯೇ ಈಗ ಮಂಡೂರಿನ ಜನರೂ ಬೀದಿಗಿಳಿದಿದ್ದಾರೆ. ಆದರೆ ಇಲ್ಲಿನ ಸಮಸ್ಯೆ ಆಡಳಿತ ಪಕ್ಷದ್ದು. "ನಮಗೆ ಊರಿನ ಹಿತವೂ ಮುಖ್ಯವಾಗಿರುವ ಸಂದರ್ಭದಲ್ಲಿಯೇ ಪಕ್ಷದ ಮತ್ತು ನಮ್ಮ ಶಾಸಕರ ಹಿತವನ್ನೂ ನೋಡಿಕೊಂಡು ತಾತ್ಕಾಲಿಕವಾಗಿ ತಡೆದುಕೊಂಡಿರಬೇಕಾಗಿದೆ" ಎನ್ನುತ್ತಾರೆ ಗ್ರಾಮಪಂಚಾಯ್ತಿ ಸದಸ್ಯ ತಮ್ಮಣ್ಣ. ಮೊದಲು ಜೇಡಿಎಸ್‌ನಲ್ಲಿದ್ದ ತಮ್ಮಣ್ಣನವರು ಈಗ ಬಿಜೆಪಿಯಲ್ಲಿದ್ದಾರೆ. ತಮ್ಮ ಪಕ್ಷವೇ ಅಧಿಕಾರದಲ್ಲಿರುವಾಗ, ಅದರಲ್ಲೂ ತಮ್ಮ ಕ್ಷೇತ್ರದ ಶಾಸಕರೇ ರಾಜ್ಯದ ಆರೋಗ್ಯ ಸಚಿವರೂ ಆಗಿರುವಾಗ ತಮ್ಮ ಹಳ್ಳಿಯ ಮತ್ತು ಇತರ ಸುತ್ತಮುತ್ತಲ ಹಳ್ಳಿಗಳ ಆರೋಗ್ಯಕ್ಕೋಸ್ಕರ ಪಕ್ಷ ಮತ್ತು ಶಾಸಕರ ಹಿತವನ್ನು ಬಲಿಕೊಡುವುದಕ್ಕೆ ಅವರಿಗೆ ಕಷ್ಟವಾಗುತ್ತಿದೆ. ಆದರೂ, ಶಾಸಕರೊಂದಿಗೆ ತಮ್ಮ ಹಕ್ಕೊತ್ತಾಯವನ್ನು ತಿಳಿಸಿ ಅವರಿಂದಲೂ ಶಾಸಕರಿಂದಲೂ ಒಂದಿಷ್ಟು ಭರವಸೆಗಳನ್ನು ಪಡೆದುಕೊಂಡಿದ್ದಾರೆ. ಅವು ಒಂದು ರೀತಿಯಲ್ಲಿ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ನೀಡಿ ಮರೆತಬಿಡುವ ಆಸ್ವಾಸನೆಗಳಂತೆಯೇ ಇವೆ! "ಕಸ ಸುರಿಯುವುದಕ್ಕೆ ಬೇರೆ ಕಡೆ ವ್ಯವಸ್ಥೆಯಾಗುವ ತನಕ ಒಂದು ತಿಂಗಳು ಮಾತ್ರ ಇಲ್ಲಿ ಕಸ ಸುರಿಯುವುದಾಗಿಯೂ ಹಾಗೂ ಇನ್ನೊಂದು ವರ್ಷದೊಳಗೆ ಈಗಾಗಲೇ ಸುರಿದಿರುವ ಕಸವನ್ನೆಲ್ಲಾ ಬೇರೆ ಕಡೆ ಸಾಗಹಾಕುವುದಾಗಿಯೂ ಶಾಶಕರು ಭರವಸೆ ನೀಡಿದ್ದಾರೆ" ಎನ್ನುತ್ತಾರೆ ಪಂಚಾಯ್ತಿ ಕಾರ್ಯದರ್ಶಿ ವೀರೇಗೌಡ. 2006ರಿಂದಲೂ ಇಲ್ಲಿ ಕಸ ಸುರಿಯುತ್ತಾ ಬರಲಾಗಿದೆ. ಪರಿಣಾಮವಾಗಿ ಮಾವಳ್ಳಿಪುರದಂತೆ ಇಲ್ಲಿಯೂ ಹತ್ತಾರು ಮೈಲಿ ದೂರದವರೆಗೂ ದುರ್ವಾಸನೆ ಬೀರುವ ಕಸದ ಬೃಹತ್ ಬೆಟ್ಟಗಳೇ ನಿರ್ಮಾಣವಾಗಿವೆ. ನೂರಾರು ಜನ ವಿವಿಧ ರೀತಿಯ ಖಾಯಿಲೆಕಸಾಲೆಗಳಿಗೆ ಬಲಿಯಾಗಿದ್ದಾರೆ. ಅವರ ಸಹನೆಯ ಕಟ್ಟೆಯೂ ಈಗ ಒಡೆದುಹೋಗಿದೆ. ಪರಿಣಾಮವಾಗಿ ಮಂಡೂರು ಮತ್ತು ಸುತ್ತಲಿನ ಹಳ್ಳಿಗಳು ಬಿಬಿಎಂಪಿಯ ವಿರುದ್ಧ ಸ್ಫೋಟಗೊಳ್ಳಲು ಸಜ್ಜಾಗಿ ನಿಂತಿವೆ. ಆಡಳಿತ ನಡೆಸುವವರು ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವ"ಸದೇ ಹೋದರೆ ಪರಿಸ್ಥಿತಿ ಕೈಮೀರಬಹುದು. ಅದನ್ನು 'ನಿಯಂತ್ರಿಸುವುದಕ್ಕೆ' ಖಾಕಿಪಡೆ ಅಮಾಯಕ ರೈತರ ಮೇಲೆ ಹಲ್ಲೆ ನಡೆಸಬಹುದು. 
ಈಗ ಸಮಸ್ಯೆ ತೀವ್ರಗೊಂಡು ಸ್ಥಳೀಯರಿಂದ ಒತ್ತಡ ಹೆಚ್ಚಾಗತೊಡಗಿದಂತೆ, ಸುಂದರ ನಗರಿ ಬೆಂಗಳೂರಿನ ರಸ್ತೆಗಳಲ್ಲಿ ಕಸದ ದೊಡ್ಡ ದೊಡ್ಡ ರಾಶಿಗಳು ನಾಗರೀಕರ ಕಣ್ಣುಕುಕ್ಕಿ, ವಾಸನೆ ಮೂಗಿಗೆ ಬಡಿದು ಜನರ ಆಕ್ರೋಶಕ್ಕೆ ಕಾರಣವಾಗತೊಡಗಿದಂತೆ ಕಕ್ಕಾಬಿಕ್ಕಿಯಾಗಿರುವ ಬಿಬಿಎಂಪಿ ಮತ್ತು ಸರ್ಕಾರ ತರಹೇವಾರಿಯ ಯೋಜನೆಗಳನ್ನು ಪ್ರಕಟಿಸಿವೆ. ಇನ್ನಷ್ಟು ಕಸವಿಲೇವಾರಿ ಜಾಗಗಳನ್ನು ಗುರುತಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ಕಸ ವಿಲೇವಾರಿ ಸಮಸ್ಯೆಯ ಮೂಲವನ್ನು ಬಗೆಹರಿಸದಿದ್ದರೆ ಇದು ಸಮಸ್ಯೆಯ ಸ್ಥಳಾಂತರವಾಗಬಹುದಷ್ಟೇ ವಿನಃ ಸಮಸ್ಯೆಯ ಪರಿಹಾರವಲ್ಲ. ಕಸವನ್ನು ಸಂಸ್ಕರಣೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕ ದೃಷ್ಟಿಕೋನದಿಂದ ವಿಲೇವಾರಿ ಮಾಡದೇ ಹೋದರೆ ಬೆಂಗಳೂರಿನ ಕಸ ಇನ್ನಷ್ಟು ಮಾವಳ್ಳಿಪುರ, ಮಂಡೂರುಗಳನ್ನು ಸೃಷ್ಟಿಸುತ್ತದಷ್ಟೆ.
ಹಾಗೆ ನೋಡಿದರೆ ಬೆಂಗಳೂರನ್ನು ಆವರಿಸಿಕೊಂಡಿರುವ ಕಸದ ವಿಷವರ್ತುಲದಿಂದ ಮನಸ್ಸು ಮಾಡಿದರೆ ಹೊರಬರಲಾರದ್ದೇನಲ್ಲ. ಇಡೀ ಪ್ರಪಂಚದಲ್ಲಿ ಇಷ್ಟು ದೊಡ್ಡ ನಗರ ಅಂತ ಇರುವುದು ಬೆಂಗಳೂರು ಮಾತ್ರವಲ್ಲ. ಇದಕ್ಕಿಂತಲೂ ದೊಡ್ಡದಾದ ನಗರಗಳೂ ಇವೆ, ಚಿಕ್ಕದಾದ ನಗರಗಳೂ ಇವೆ. ಅಲ್ಲಿಯೂ ಪ್ರತಿದಿನ ಸಾವಿರಾರು ಮೆಟ್ರಿಕ್ ಟನ್ ಕಸ ಸ್ಟೃಯಾಗುತ್ತಲೇ ಇದೆ. ಆದರೆ, ಇಲ್ಲಿಯಂತೆಯೇ ಅಲ್ಲಿ ಸಮಸ್ಯೆ ಯಾಕೆ ಉಲ್ಬಣಿಸಿಲ್ಲ ಎಂದರೆ ಆ ನಗರಗಳ ಆಡಳಿತ ಅಂಗಗಳು ಕಸ"ಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುತ್ತವೆ. ಅದೇ ರೀತಿ ಬೆಂಗಳೂರಿನಲ್ಲಿ ಮಾಡಲು ಏನು ಕೊರತೆ? 
ರಾಜಕೀಯ ಇಚ್ಛಾಶಕ್ತಿ ಕೊರತೆ ಬಿಟ್ಟರೆ ಇನ್ನೇನಿಲ್ಲ. ಬೆಂಗಳೂರಿನಲ್ಲಿ ಕಸದ ವಿಲೇವಾರಿಗೆಂದು ರಚಿಸಿರುವ 60 ಬ್ಲಾಕ್‌ಗಳಲ್ಲಿ ಸ್ಥಳೀಯ ಕಾರ್ಪೊರೇಟರ್ ಮತ್ತು ಗುತ್ತಿಗೆದಾರರು, ಉಪಗುತ್ತಿಗೆದಾರರಿಗೆ ಸುಲಭವಾಗಿ ಕಾಸು ಸಂಪಾದಿಸಿಕೊಡುವ ಮೂಲವೇ ನಗರದ ಈ ಕಸ. ಈ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿದುಬಿಟ್ಟರೆ ಕಸದ ಲಾಭದ ರುಚಿಯುಂಡವರ ಆದಾಯಕ್ಕೆ ಕತ್ತರಿ ಬೀಳುತ್ತದೆ! ದುರಾದೃಷ್ಟವಶಾತ್ ನಮ್ಮ ಉಚ್ಛನ್ಯಾಯಾಲಯವೂ ಇದನ್ನು ಗುರುತಿಸುವಲ್ಲಿ "ಫಲಗೊಂಡು ಸಮಸ್ಯೆಯನ್ನು ಕೇವಲ ನಾಗರಿಕರ ಮೇಲೆಯೇ ಹಾಕುವ ಪ್ರಯತ್ನ ಮಾಡಿದ್ದು ವಿಷಾದನೀಯ. ಇದನ್ನೇ ನೆಪ ಮಾಡಿಕೊಂಡು ಸಚಿವ ಸುರೇಶ್ ಕುಮಾರ್ ಅವರೂ ನಾಗರಿಕರ ಮೇಲೆ ಕ್ರಮಕೈಗೊಳ್ಳುವ ಮಾತನ್ನೂ ಆಡಿದ್ದಾರೆ. ಅಂದಮಾತ್ರಕ್ಕೆ ನಾಗರಿಕರ ಪಾತ್ರ ಇಲ್ಲವೇ ಎಂಬುದು ಇದರರ್ಥವಲ್ಲ. ಸಮಸ್ಯೆಯಲ್ಲಿ ಅವರದ್ದೂ ಪಾಲಿದೆ. ಆದರೆ, ಪ್ರಧಾನ ಹೊಣೆಗಾರ ಮಾತ್ರ ಬಿಬಿಎಂಪಿ ಎಂಬುದನ್ನು ನಾವು ಮರೆಯಬಾರದು. ಕಸದ ವಿಲೇವಾರಿಯ ಕಾನೂನನ್ನೂ ಸಹ ಕಾರ್ಪೊರೇಷನ್ ಕಸದಂತೆಯೇ ಕೀಳಾಗಿ ಕಾಣುವ ಆಡಳಿತದ ಲಾಭಿಗಳೇ ಈ ಸಮಸ್ಯೆಯ ಸೂತ್ರದಾರರಾಗಿದ್ದು ಅವೇ ಸಮಸ್ಯೆಯ ಪರಿಹಾರಕ್ಕೆ ನಿಜವಾದ ತಡೆಗೋಲಾಗಿವೆ ಎಂಬ ವಾಸ್ತವ ಅಂಶವನ್ನು ಗುರುತಿಸದೇ ಹೋದರೆ ಸಮಸ್ಯೆಯ ಪರಿಹಾರ ಅಸಾಧ್ಯ. 
ಸಮಸ್ಯೆಯ ಪರಿಹಾರಕ್ಕೆ ಹೊಸದಾದ ನೀತಿಗಳಾಗಲೀ, ಕಾನೂನುಗಳಾಗಲೀ ಬೇಕಿಲ್ಲ. ಈಗ ಚಾಲ್ತಿಯಲ್ಲಿರುವ ಕಾಯ್ದೆ, ನಿಯಮಗಳನ್ನೇ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದರೆ ಸಮಸ್ಯೆ ತನ್ನಿಂದ ತಾನೇ ಬಗೆಹರಿದುಬಿಡುತ್ತದೆ. ಇದಕ್ಕಾಗಿ ೨೦೦೦ದಲ್ಲಿ ಬಂದ ನಿಯಮಗಳಿವೆ, ಸುಪ್ರೀಕೋರ್ಟ್ ನೇಮಿಸಿದ ಆಯೋಗದ ವರದಿದೆ, 2004ರಲ್ಲಿ ಸಾರ್ಕ್ ದೇಶಗಳು ಇದೇ ವಿಷಯದ ಕುರಿತು ಚರ್ಚಿಸಿ ತೆಗೆದುಕೊಂಡ ನಿರ್ಣಯಗಳಿವೆ. ಅದನ್ನೆಲ್ಲಾ ಈಗಾಗಲೇ ಹೇಳಿದಂತೆ ಅನುಷ್ಠಾನಗೊಳಿಸುವುದಕ್ಕೆ ಮನಸ್ಸಿರಬೇಕಷ್ಟೆ. 
ಒಂದು ಉದಾಹರಣೆಯನ್ನು ನೋಡಿ. 2000ನೇ ಸಾಲಿನ ಮುನಿಸಿಪಲ್ ಘನತ್ಯಾಜ್ಯ ನಿಯಮವು ಕಸ ವಿಲೇವಾರಿಗೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದಕ್ಕೆ ಹೇಳುತ್ತದೆ. ಅದರ ಪ್ರಕಾರ ಕಸವನ್ನು ಸಂಗ್ರಹಿಸುವಾಗಲೇ ಜೈವಿಕ-ವೈದ್ಯಕೀಯ ಕಸ ಮತ್ತು ಕೈಗಾರಿಕಾ ಕಸಗಳನ್ನು ನಗರದ ಇನ್ನಿತರ ಕಸದೊಂದಿಗೆ ಬೆರೆಸುವಂತಿಲ್ಲ. ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಬೇಕು. ಕಸವನ್ನು ಸುಡುವಂತಿಲ್ಲ. ಕಸ ಸಂಗ್ರಹಿಸಿಡುವ ಜಾಗದಲ್ಲಿ ಯಾವುದೇ ಅನಾರೋಗ್ಯಕರ ಪರಿಸ್ಥಿತಿ ಉಂಟಾಗಕೂಡದಂತೆ ಸಂಗ್ರಹಿಸಿಡಬೇಕು. ಕಸವನ್ನು ತೆರೆದ ವಾತಾವರಣಕ್ಕೆ ಮುಕ್ತವಾಗಿ ಇಡಕೂಡದು. ಕಸವನ್ನು ನೇರವಾಗಿ ಕೈಂದ ಮುಟ್ಟುವುದನ್ನು ನಿಷೇಧಿಸತಕ್ಕದ್ದು. ಅನಿವಾರ್ಯ ಸಂದರ್ಭಗಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ನಡೆಸತಕ್ಕದ್ದು. ಸಂಸ್ಕರಿಸಿದ ಕಸವನ್ನು ಗುಂಡಿಗಳಲ್ಲಿ ಮುಚ್ಚಿಡಬೇಕು. ಅದಕ್ಕಾಗಿ ಅತಿಯಾದ ಪ್ರಮಾಣದ ಕಸವನ್ನು ಒಂದೇ ಕಡೆ ಸುರಿಯುವಂತಿಲ್ಲ. ಹಸಿಕಸವನ್ನು ಗೊಬ್ಬರ ಅಥವಾ ವಿದ್ಯುತ್ ತಯಾರಿಕೆಗೆ ಸೂಕ್ತ ತಂತ್ರಜ್ಞನದ ಮೂಲಕ ಬಳಸಬೇಕು. ಒಣಕಸವನ್ನು ಮರುಬಳಕೆಗೆ ಕಳು"ಸಬೇಕು. ಮರುಬಳಕೆಗೆ ಒಗ್ಗದ ಕಸವನ್ನು ಮಾತ್ರವೇ ಗುಂಡಿಗಳಲ್ಲಿ ಮುಚ್ಚಬೇಕು. ನೀರಿನ ಮೂಲಗಳಿರುವೆಡೆ, ಜನವಸತಿಗಳಿರುವೆಡೆ ಇಂತಹ ಗುಂಡಿಗಳನ್ನು ನಿರ್ಮಿಸುವಂತಿಲ್ಲ; ಸುತ್ತಮುತ್ತಲ ಪ್ರದೇಶಗಳಿಗೆ ಕಸದ ದುರ್ವಾಸನೆ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು... ಇತ್ಯಾದಿ, ಇತ್ಯಾದಿ. ಈ ನಿಯಮಗಳನ್ನು ಬಿಬಿಎಂಪಿ ಎಷ್ಟರ ಮಟ್ಟಿಗೆ ಪರಿಪಾಲನೆ ಮಾಡಿದೆ ಎಂಬುದನ್ನು ಅರಿಯಬೇಕೆಂದರೆ ನೀವೊಮ್ಮೆ ಮಾವಳ್ಳಿಪುರ-ಮಂಡೂರುಗಳಿಗೆ ಹೋಗಿ ನೋಡಿ ಬರಬೇಕು. ವಿಷಗಾಳಿ ಸೇವಿಸಿ ಭೀಕರ ರೋಗಗಳಿಗೆ, ಕೊನೆಗೆ ಸಾಯುವುದಕ್ಕೂ ಸಿದ್ಧವಾದರೆ, ಆ ಎರಡೂ ಊರುಗಳಲ್ಲಿ ಅಕ್ಷರಶಃ ಬೃಹತ್ ಬೆಟ್ಟದಂತೆ ನಿಂತಿರುವ ಕಸದ ಗುಡ್ಡೆಗಳನ್ನು ಹತ್ತಿಬರಬೇಕು. ಈ ನಿಯಮಗಳಲ್ಲಿ ಒಂದನ್ನೂ ಬಿಬಿಎಂಪಿ ಪಾಲಿಸಿಲ್ಲ ಎಂಬ ಆಘಾತಕಾರಿ ಅಂಶ ನಿಮಗೆ ಮನವರಿಕೆಯಾಗದಿದ್ದರೆ ಕೇಳಿ. ಎರಡೂಕಡೆ ಇರುವ ಕಸದ ರಾಶಿಗಳ ಮೇಲೆ ಹಾರಾಡುವ ರಣಹದ್ದುಗಳು ಇಲ್ಲಿಗೆ ಸಮೀಪದ ಯಲಹಂಕ ಅಂತರರ್‍ಟ್ರಾಯ ವಿಮಾನನಿಲ್ದಾಣದಿಂದ ಹಾರುವ ವಿಮಾನಗಳಿಗೆ ಬಡಿದು ಈಗಾಗಲೇ ಅನಾಹುತಗಲೂ ಸಂಭವಿಸಿವೆ ಎಂದರೆ ಎಲ್ಲಿನ ಹೊಣೆಗೇಡಿತನ ಎಷ್ಟು ಎಂಬುದು ತಿಳಿಯುತ್ತದೆ. 
ಬಿಬಿಎಂಪಿ ಮತ್ತು ಕಸ ಸಂಸ್ಕರಣೆಯ ಗುತ್ತಿಗೆ ಪಡೆದ ಸಂಸ್ಥೆಗಳು ಇದುವರೆಗೆ ಮಾಡಿದ್ದೆಲ್ಲವೂ ಈ ನಿಯಮಗಳ ಉಲ್ಲಂಘನೆ ಮಾತ್ರ. ಈ ನಿಯಮಗಳನ್ನು ರಚಿಸಿದ ಸಮಯದಿಂದಲೇ ಅದರ ಪ್ರಕಾರ ನಡೆದುಕೊಂಡಿದ್ದರೆ ಇಂದು ಕಸದ ರಾಸಿಯೊಂದಿಗೆ ಬೆಟ್ಟವಾಗಿ ಬೆಳೆದಿರುವ ಕಸದ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ ಸರ್ಕಾರಗಳು, ಅಧಿಕಾರಿಗಳು ಆಯ್ದುಕೊಂಡಿದ್ದು ಸುಲಭದ ಅಡ್ಡದಾರಿಯನ್ನು. ಕಾರ್ಪೊರೇಟರ್‌ಗಳ ಸುಪರ್ದಿಯಲ್ಲಿ ಬರುವ ಗುತ್ತಿಗೆದಾರರು ನಗರಪಾಲಿಕೆಂದ ಪ್ರತಿ ಲೋಡಿಗೆ ೫೦೦-೬೦೦ ರೂಪಾಗಳಂತೆ ವರ್ಷಕ್ಕೆ ಸಾವಿರಾರು ಕೋಟ್ಯಂತರ ರೂಪಾಗಳನ್ನು ಪಡೆದು ಕಸವಿಲೇವಾರಿಯ ಗುತ್ತಿಗೆ ಪಡೆದರು. ಪ್ರತಿನಿತ್ಯ ಬಿಬಿಎಂಪಿ ಗುರುತಿಸಿದ ರಾಮ್‌ಕಿಯಂತಹ ಹೊಣೆಗೇಡಿ ಸಂಸ್ಥೆಗಳಿಗೆ ನಿಗದಿಪಡಿಸಿದ ಜಾಗದಲ್ಲಿ ಕಸ ಸುರಿದು ಬರುವುದಷ್ಟೇ ಅವರ ಕೆಲಸವಾತು. ಸಂಸ್ಕರಣೆ ನಡೆಸುತ್ತೇವೆಂದು ಹಳಿಕೊಂಡ ಈ ಸಂಸ್ಥೆಗಳು ನೆಪಮಾತ್ರಕ್ಕೆ ಯಂತ್ರಗಳನ್ನು ಸ್ಥಾಪಿಸಿದರು. ಎಷ್ಟು ಸಾಧವೋ ಅಷ್ಟು ಲಾಭ ಮಾಡಿಕೊಂಡರು. ಕಸವೆಂದರೆ ಕಾಸು ಎಂಬುದಷ್ಟೇ ಎಲ್ಲರ ಮಂತ್ರವಾಗಿತ್ತು. ಪರಿಣಾಮವಾಗಿ ಅತ್ತ ಹಳ್ಳಿ ಜನರ ಬದುಕು ನರಕಸದೃಶವಾಯಿತು. 
ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳದಿದ್ದರೆ ನಿಜಕ್ಕೂ ಇದು ಕಸದ ವಿಷಚಕ್ರವೆ. ಬಿಬಿಎಂಪಿ ಬೆಂಗಳೂರಿನ ಸುತ್ತಮುತ್ತ ಹೊಸ ಹೊಸ ಜಾಗಗಳನ್ನು ಹುಡುಕಿ ವೈಜ್ಞಾನಿಕವಾಗಿ ಸಂಸ್ಕರಿಸದ ಕಸವನ್ನು ಸುರಿದು ಬರುತ್ತದೆ. ಆ ಪ್ರದೇಶದ ಪರಿಸರವೇ ನಾಶವಾಗಿ ಹಳ್ಳಿಗರ ಕೃಷಿ, ಆರೋಗ್ಯ, ಬದುಕು ನರಕವಾಗುತ್ತದೆ. ಮುಂದೊಂದು ದಿನ ಅವರ ಸಹನೆಯ ಕಟ್ಟೆಯೊಡೆದು ಪ್ರತಿಭಟನೆಯ ಹಾದಿ ಹಿಡಿಯುತ್ತಾರೆ. ಬೆಂಗಳೂರಿನ ಕಸಹೊತ್ತು ತರುವ ಲಾರಿಗಳನ್ನು ತಡೆದು ನಿಲ್ಲಿಸುತ್ತಾರೆ. ಪರಿಣಾಮವಾಗಿ ಇತ್ತ ಬೆಂಗಳೂರು ಗಬ್ಬೆದ್ದು ನಾರುತ್ತಿದ್ದಂತೆಯೇ ಕೋಲಾಹಲ ಸ್ಟೃಯಾಗುತ್ತದೆ. ಬಿಬಿಎಂಪಿ ಮತ್ತೆ ಕಕ್ಕಾಬಿಕ್ಕಿಯಾಗಿ ಮತ್ತೆ ಹಳ್ಳ್ಳಿಯವರನ್ನು ಓಲೈಸಿ ರಾತ್ರಿ ಮಾತ್ರ ಕಸವಿಲೇವಾರಿ ಮಾಡಲು ಹೇಳುತ್ತದೆ. ನಿದ್ದೆಗೆಟ್ಟು ಆ ಇಕ್ಕಟ್ಟಾದ ದಾರಿಗಳಲ್ಲಿ ಲಾರಿಗಳನ್ನು ಓಡಿಸುವ ಪೌರಕಾರ್ಮಿಕರು ಅಪಘಾತಗಳಲ್ಲಿ ಮರಣಹೊಂದುತ್ತಾರೆ. ಆಗ ಅವರನ್ನು ಸಂತೈಸಲು ಮತ್ತೆ ಇನ್ನಿಲ್ಲದ ಹರಸಾಹಸವಾಗುತ್ತದೆ. ಮತ್ತೆ ಬಿಬಿಎಂಪಿ ಹೊಸ ಜಾಗಗಳನ್ನು ಹುಡುಕುತ್ತಾ ಈ ಕಸದ ವಿಷಚಕ್ರದಲ್ಲಿ ಒದ್ದಾಡುತ್ತಲೇ ಇರುತ್ತದೆ. ಇದಕ್ಕೆ ಕೊನೆಯಿಲ್ಲವೆ? 

 ಮಾಡಬೇಕಾದುದೇನು?
ಮಾವಳ್ಳಿಪುರದ ಕಸದ ಬೆಟ್ಟ!
ಮೊತ್ತಮೊದಲನೆಯದಾಗಿ ಪರಿಸರ ಸಂರಕ್ಷಣಾ ಕಾಯ್ದೆ ಮತ್ತು ಎಂಎಸ್‌ಡಬ್ಲ್ಯೂ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸಾವಿರಾರು ಜನರ ಪ್ರಾಣಗಳೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ರಾಮ್‌ಕಿ ಹಾಗೂ ಶ್ರೀನಿವಾಸ ಗಾಯತ್ರಿ ಸೋರ್ಸಸ್ ಕಂಪನಿಗಳ ಮಾಲೀಕರ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಈಗಾಗಲೇ ಈ ಅವೈಜ್ಞಾನಿಕ ಮತ್ತು ಹೊಣೆಗೇಡಿಯಾದ ಕಸದ ವಿಲೇವಾರಿಂದ ಜನರಿಗೆ, ಜಾನುವಾರುಗಳಿಗೆ ಮತ್ತು ಪರಿಸರಕ್ಕೆ ಆಗಿರುವ ನಷ್ಟವನ್ನು ತುಂಬಿಕೊಡಲು ತಪ್ಪಿತ್ಥಸ್ಥರಿಗೆ ತಾಕೀತು ಮಾಡಬೇಕು. 'ಮಲಿನಗೊಳಿಸಿದವನೇ ನಷ್ಟ ತುಂಬಬೇಕು' (Polluter Pays principle) ಎಂಬ ತತ್ವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆಗ ಮುಂದೆ ಗುತ್ತಿಗೆ ಪಡೆಯುವ ಸಂಸ್ಥೆಗಳು ಎಚ್ಚರಿಕೆಂದ ಕೆಲಸಮಾಡಲು ಸಾಧ್ಯವಾಗುತ್ತದೆ.
ಈಗ ಮಾವಳ್ಳಿಪುರ, ಮಂಡೂರುಗಳಂತೆಯೇ ಕಸದಗುಡ್ಡಗಳನ್ನು ನಿರ್ಮಿಸಲು ಇದೀಗ ಚಿಂತಾಮಣಿ. ಕೊರಟಗೆರೆ ಮುಂತಾದ ಕಡೆಗಳಲ್ಲಿಯೂ ಜಾಗಗಳನ್ನು ಗುರುತಿಸಲಾಗಿದೆ ಎಂದು ಮಹಾಪೌರರಾದ ವೆಂಕಟೇಶಮೂರ್ತಿಯವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಉಚ್ಛನ್ಯಾಯಾಲಯವು ಮೂಲದಲ್ಲಿಯೇ ಕಸವನ್ನು ವಿಂಗಗಡಿಸಬೇಕೆಂದು ನಾಗರಿಕರಿಗೆ ಆದೇಶ ನೀಡಿದೆ. ಕಸದಿಂದ ಗೊಬ್ಬರ ತಯಾರಿಸುವ, ವಿದ್ಯುತ್ ತಯಾರಿಸುವ ಮತ್ತಷ್ಟು ಖಾಸಗಿ ಕಂಪನಿಗಳು ನಾಮುಂದು ತಾಮುಂದು ಎಂದು ಬಂದಿವೆ. ಕಸದ ವಿಲೇವಾರಿ ಬಗ್ಗೆ ಜನರಿಗೆ ಜಾಗೃತಿ ನೀಡುವ ಕುರಿತು ಹೇಳಲಾಗುತ್ತದೆ. 
ವಾಸ್ತವದಲ್ಲಿ ಇಂದು ಕಸದ ವಿಲೇವಾರಿ ಸಮಸ್ಯೆ ಎಂಬುದು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ. ಮತ್ತು ಕೇವಲ ನಾಗರಿಕರು ಅಥವಾ ಕೇವಲ ಬಿಬಿಎಂಪಿ, ಸರ್ಕಾರ ನಿಭಾಸುವಂತಹ ಸಮಸ್ಯೆಯಲ್ಲ. ರಾಜ್ಯದ ಅನೇಕ ನಗರಗಳಲ್ಲಿ ಇದು ಚಿಕ್ಕ ದೊಡ್ಡ ಪ್ರಮಾಣದಲ್ಲಿ ಒಂದು ಮುಖ್ಯ ಸಮಸ್ಯೆಯೇ. ನಗರಗಳು ಬೆಳೆದಂತೆಲ್ಲಾ ಸಮಸ್ಯೆಯ ವ್ಯಾಪ್ತಿಯೂ ಸಿಗ್ಗುತ್ತದೆ. ಆದರೆ ಮುಂದೆಂದೋ ಸ್ಫೋಟಗೊಂಡೇ ತೀರುವ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು 'ನಾಗರಿಕತೆ'ಯ ಲಕ್ಷಣ. ಇದಕ್ಕಾಗಿ ಹಲವು ಹಂತದ ಕಾರ್ಯಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ಮೊತ್ತಮೊದಲು ಆಗಬೇಕಾದ ಕೆಲಸ ಕಾರ್ಪೊರೇಟರ್‌ಗಳನ್ನು ಮತ್ತು ಗುತ್ತಿಗೆದಾರರನ್ನು ನಿಯಂತ್ರಣಕ್ಕೊಳಪಡಿಸುವುದು. ಅವರ ದುರಾಸೆಯ ಪರಿಣಾಮವಾಗಿ ಜನರಿಗಾಗುವ ತೊಂದರೆಯ ಕುರಿತು ಅವರಲ್ಲಿ ಮೊದಲು ಜಾಗೃತಿ ಮೂಡಿಸುವುದು. ನಂತರ ಮೂಲದಲ್ಲೇ (ಮನೆ, ಮಾಲ್, ಫ್ಲ್ಯಾಟ್, ಸ್ಲಂ, ಸತ್ಕಾರ ಉದ್ಯಮ, ಹೋಟೆಲ್, ಆಸ್ಪತ್ರೆ, ಕೈಗಾರಿಕೆ, ಇತ್ಯಾದಿ) ಕಸ ವಿಂಗಡಿಸುವ ಕೆಲಸವನ್ನು ಗುತ್ತಿಗೆದಾರರು, ನಾಗರಿಕರು ಎಲ್ಲರೂ ಕೂಡಿ ನಡೆಸಲು ಕ್ರಮಗಳನ್ನು ಕೈಗೊಳ್ಳುವುದು. ಕಸ ವಿಂಗಡಿಸುವ ಬಿಬಿಎಂಪಿಯ ಕೆಲಸವನ್ನು ಇಂದು ಹತ್ತಾರು ಸಾವಿರ ಸಂಖ್ಯೆಯಲ್ಲಿ ಚಿಂದಿ ಆಯುವವರು ಮಾಡುತ್ತಿದ್ದಾರೆ. ಅವರ ನೆರವಿನಿಂದಲೇ ಈ ಕೆಲಸವನ್ನು ಅಧಿಕೃತವಾಗಿ ಮಾಡಿದರೆ ಆರ್ಥಿಕವಾಗಿ ಅವರಿಗೂ ಅನುಕೂಲವಾಗುತ್ತದೆ. ಆದರೆ ಅವರಿಗೆ ಸೂಕ್ತ ಸಾಧನ, ಸಲಕರಣೆ ಗೌರವ ಮತ್ತು ರಕ್ಷಣೆಗಳನ್ನು, ಅವರ ಕುಟುಂಬಗಳಿಗೆ ಅನುಕೂಲತೆಗಳನ್ನು ಮಾಡಿಕೊಡಬೇಕು. ಇದಕ್ಕಾಗಿ ಗುಜರಿ ಅಂಗಡಿ ಮಾಲೀಕರನ್ನೂ ಸೇರಿಸಿಕೊಳ್ಳುವುದು. ನಂತರ ಹಸಿಕಸದಿಂದ ಜೈ"ಕ ಗೊಬ್ಬರ, ವಿದ್ಯುತ್ ತಯಾರಿಸುವ ಚಿಕ್ಕ ಚಿಕ್ಕ ಘಟಕಗಳನ್ನು ನಗರದ ಹಲವಾರು ಕಡೆಗಳಲ್ಲಿ ಸ್ಥಾಪಿಸುವುದು. ಇದನ್ನು ಖಾಸಗಿಯವರಿಗೆ ಬಿಡದೆ ಸರ್ಕಾರವೇ ನಡೆಸಿದರೆ ಒಳಿತು. ಬೆಂಗಳೂರಿನ ದಶದಿಕ್ಕುಗಳಲ್ಲಿ ಸಂಸ್ಕರಣ ಘಟಕಗಳನ್ನು ತೆರೆಯುವುದು ಮತ್ತು ಮರುಬಳಕೆಗೆ ಸಾಧ್ಯವಾಗದ ತ್ಯಾಜ್ಯಗಳನ್ನು ಮಾತ್ರ ಗುಂಡಿಗಳಲ್ಲಿ (ಲ್ಯಾಂಡ್‌ಫಿಲ್) ತುಂಬಿಸಿ ಮುಚ್ಚಿಹಾಕುವ ವ್ಯವಸ್ಥೆಗಳನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಮಾಡುವುದು. ಹಾಗೆಯೇ ಮುಖ್ಯವಾಗಿ ಈಗಾಗಲೇ ಮಾವಳ್ಳಿಪುರ, ಮಂಡೂರು ಮತ್ತು ಟೆರ್ರಾಫಾರ್ಮ್‌ಗಳಲ್ಲಿ ರಾಶಿಬಿದ್ದಿರುವ ಕಸದ ಬೆಟ್ಟಕ್ಕೆ ಮತ್ತಷ್ಟು ಕಸವನ್ನು ಸೇರಿಸದೇ ಸಂಪೂರ್ಣ ಕಸವನ್ನು ಸಂಸ್ಕರಿಸಿ ಸರಿಯಾಗಿ ಲ್ಯಾಂಡ್‌ಫಿಲ್‌ಗಳನ್ನು ನಿ"ಸುವ ದೀರ್ಘಕಾಲಿಕವಾದ ಯೋಜನೆಯೊಂದನ್ನು ರಚಿಸಿ ಹತ್ತಾರು ಹಳ್ಳಿಗಳ ಜನರ, ಜಾನುವಾರುಗಳ ಮತ್ತು ಕೃಷಿ ಚಟುವಟಿಕೆಗಳಿಗೆ ಸೂಕ್ತ ರಕ್ಷಣೆ ನೀಡುವುದು. ಬೆಂಗಳೂರನ್ನು ಹೊರತುಪಡಿಸಿದ ನಗರಗಳಲ್ಲಿಯೂ ಸಹ ಇದೇ ಮಾದರಿಗಳ ಮೂಲಕ ಮುಂದೆ ಎದುರಾಗುವ ಸಮಸ್ಯೆಯನ್ನು ಸಶಕ್ತವಾಗಿ ತಡೆಯಲು ಸಾಧ್ಯವಿದೆ. 
ಇತ್ತೀಚೆಗಷ್ಟೆ ಬಿಬಿಎಂಪಿ ಆಯುಕ್ತರ ಸ್ಥಾನವನ್ನು ಅಲಂಕರಿಸಿರುವ ರಜನೀಶ್ ಗೋಯಲ್ ಅವರು ಅತ್ಯಂತ ನೀಟಾಗಿ ಬೆಳೆಸಲ್ಪಟ್ಟ ಚಂಡೀಗಢದಿಂದ ಬಂದವರಾದ್ದರಿಂದ ಅವರೇನಾದರೂ ಸಮಸ್ಯೆಯ ಪ್ರಾಮಾಣಿಕ ಪರಿಹಾರಕ್ಕಾಗಿ ಪ್ರಯತ್ನಿಸುವ ಧೈರ್ಯ ತೋರಿದರೆ, ಅದಕ್ಕೆ ಜನಪ್ರತಿನಿಧಿಗಳೂ ಸಹಕರಿಸಿದರೆ ಅದು ನಾಗರಿಕರ ಅದೃಷ್ಟ.

ಮಾವಳ್ಳಿಪುರ ಪ್ರತಿಭಟನೆಯಲ್ಲಿ ಮೃತನಾದ ಯುವಕ ಶ್ರೀನಿವಾಸ ಅವರ ನತದೃಷ್ಟ ಪತ್ನಿ
ಮಂಡೂರಿನಲ್ಲಿ ಕಸದ ರಾಸಿಯಿಂದ ಹರಿದು ಬರುವ ವಿಷದ್ರವ ಸೀದಾ ಭೂಮಿಯೊಳಕ್ಕೆ ಇಳಿದು ಅಂತರ್ಜಲ ಸೇರುತ್ತಿದೆ!
ಹಳ್ಳಿ ಜನರು ದಂಗೆ ಎದ್ದರೆ ನಗರ ಹೀಗೆ ನಾರುತ್ತದೆ!

 ಕಸದ ರಾಶಿಯೆಂದರೆ ನಾಯಿಗಳಿಗೆ ಸಾಕ್ಷಾತ್ ಸ್ವರ್ಗ







(ಚಿತ್ರಗಳು- ಹರ್ಷಕುಮಾರ್ ಕುಗ್ವೆ ಮತ್ತು ಕುಮಾರ್ ಬುರಡಿಕಟ್ಟಿ)

ಸೆಪ್ಟೆಂಬರ್ 03, 2012

ವಿಶ್ವದ ಸಕಲ ಸಮಸ್ಯೆಗಳಿಗೂ ಉತ್ತರ ಬುದ್ಧನ ಚಿಂತನೆಯಲ್ಲಿದೆ- ಪ್ರೊ. ಕಾಳೇಗೌಡ ನಾಗವಾರ





ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡು ಅತ್ಯಂತ ಮೌಲ್ಯಯುತವಾದ ಸಾಹಿತ್ಯವನ್ನು ರಚಿಸಿರುವ ಪ್ರೊ. ಕಾಳೇಔಡ ನಾಡಿನ ಪ್ರಮುಖ ಸಾಹಿತಿ, ವಿಚಾರವಾದಿ ಮತ್ತು ಹೋರಾಟಗಾರರು. ಟಿಎಸ್‌ಐಗಾಗಿ ಹರ್ಷಕುಮಾರ್ ಕುಗ್ವೆ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ. 


ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿಕೊಂಡಿರುವ ನಾವು ಜಾನಪದ ಅಧ್ಯಯನದ ವಿಷಯದಲ್ಲಿ ಏನನ್ನು ನಿರೀಕ್ಷಿಸಬಹುದು?

ಜಾನಪದ ಅಧ್ಯಯನ ಅನ್ನುವುದು ವಾಸ್ತವವಾಗಿ ಇಡೀ ಜನಸಮುದಾಯದ ಅನುಭವದ ಇತಿಹಾಸವನ್ನೇ ಹೇಳುತ್ತದೆ. ಅಲ್ಲಿ ಅಪರೂಪದ ಪ್ರಯೋಗಗಳಿವೆ; ಅಲ್ಲಿ ವ್ಯಕ್ತಿಗಿಂತ ಹೆಚ್ಚಾಗಿ ಸಮುದಾಯದ ಅನುಭವಗಳಿರುತ್ತವೆ. ನಮ್ಮ ಸಾಂಸ್ಕೃತಿಕ ಇತಿಹಾಸ, ಆಚರಣೆ, ಸಂಗೀತ ಇತ್ಯಾದಿ ಸಕಲ ವೈವಿಧ್ಯಗಳ ಆಗರವೇ ಜಾನಪದ. ಹೀಗಾಗಿಯೇ ಆಯಾಯಾ ದೇಶಗಳಲ್ಲಿ ವಿವಿಧ ಕಾಲಮಾನ, ಹವಾಗುಣಕ್ಕನುಗುಣವಾಗಿ, ಆಹಾರ ಪದ್ಧತಿ, ನಡೆನುಡಿ ವಿಚಾರಗಳಲ್ಲಿ ಪ್ರಯೋಗಶೀಲವಾಗಿ ಯಾವುದು ಹೆಚ್ಚು ಅರ್ಥಪೂರ್ಣ ಎಂದು ಮನುಷ್ಯ ಸದಾ ಹುಡುಕುತ್ತಿರುತ್ತಾನೆ. ಅದು ಅಕ್ಷರಸ್ತರ ಲೋಕಕ್ಕಿಂತ ಭಿನ್ನವಾದ ಪ್ರಾಮಾಣಿಕವಾದ ಅನುಭವ ಲೋಕ. ಆ ದೃಷ್ಟಿಯಿಂದ ಆಯಾ ದೇಶಗಳಲ್ಲಿ ತಜ್ಞರಾದವರು ಆ ಸಮಾಜವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಜಾನಪದವನ್ನು ಜ್ಞಾನದ ಕಾರಣಕ್ಕಾಗಿ ಅಧ್ಯಯನಮಾಡುತ್ತಾರೆ. ಹಾಗೆಯೇ ನಮ್ಮ ಭಾರತದ ಸಂದರ್ಭದಲ್ಲಿ ಅಕ್ಷರಜ್ಞಾನ ಇರದಿದ್ದಾಗಲೂ ಸಮಾಜದ ಏಳಿಗೆಯನ್ನು ನಿರಂತರವಾಗಿ ಬಯಸುತ್ತಿದ್ದ ದೊಡ್ಡ ಸಮೂಹವನ್ನು ನಾವು ಕಾಣುತ್ತೇವೆ. ’ವೇದ ಸುಳ್ಳಾಗಬಹುದು’ ಎಂಬ ಮಾತಿದೆ ನೋಡಿ. ಯಾವುದೇ ಜ್ಞಾನ ಮುಕ್ತವಾಗಿ ತೆರೆದುಕೊಂಡಿರಬೇಕು. ಚಿಂತನೆ ಮರುಚಿಂತನೆ ಬೇಕೇಬೇಕು. ಅನುಭವದ ಒರೆಗಲ್ಲಿಗೆ ಹಚ್ಚಿದಾಗ ಅದು ಸತ್ಯವಾದರೆ ಉಳಿಯುತ್ತದೆ. ಇಲ್ಲವಾದರೆ ನಾಶವಾಗುತ್ತದೆ ಎನ್ನುವ ದಿಟ್ಟತನದಿಂದ ಬಂದಿರುವಂತದ್ದು ಜಾನಪದ ಜ್ಞಾನಪ್ರವಾಹ. ಇದನ್ನು ಹೇಗೆ ಉಳಿಸಿಕೊಳ್ಳಬೇಕು, ಹೇಗೆ ಬಳಸಿಕೊಳ್ಳಬೇಕು ಮತ್ತು ಹೊಸ ಸಮಾಜವನ್ನು ಕಟ್ಟುವಾಗ ಏನಾದರೂ ಉಪಯುಕ್ತ ಸಾಮಗ್ರಿ ಸಿಗುತ್ತಾ ಎಂದು ನೋಡುವ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕಿದೆ. 

ಇದುವರೆಗೆ ಜಾನಪದ ಅಧ್ಯಯನ  ಎಂದರೆ ’ದಾಖಲೀಕರಣ’ ಮಾತ್ರ ಎಂಬಷ್ಟಕ್ಕೇ ಸೀಮಿತವಾಗಿದೆಯಲ್ಲವೇ?  
ಜಾನಪದ ವೈವಿಧ್ಯವನ್ನು ದಾಖಲಿಸುವ ಜೊತೆಗೇ ಇಡೀ ಸಮುದಾಯವಾಗಿ ನಮ್ಮ ಜನಪದರು ಹೇಗೆಲ್ಲಾ  ಅಲೋಚಿಸಿದ್ದಾರೆ, ಏನು ಮಾಡಿದ್ದಾರೆ ಎಂದು ನೋಡಬೇಕು. ಹೊಸ ಸಮಾಜಕ್ಕೆ ಪೂರಕವಾಗಿ ಅಲ್ಲಿ ಏನಾದರೂ ಇದೆಯೇ ಎಂಬ ದೃಷ್ಟಿಯಿಂದಲೂ ನಮ್ಮ ಅಧ್ಯಯನ ಸಾಧ್ಯವಾಗಬೇಕು. ಅದರಲ್ಲಿ ಯಾವುದನ್ನು ಒಳಗೊಳ್ಳಬೇಕು, ಯಾವುದನ್ನು ಬಿಡಬೇಕು, ಜಾಗತೀಕರಣದ ಹಿನ್ನೆಲೆಯಲ್ಲಿ ಈ ವೈಶಿಷ್ಟ್ಯಗಳನ್ನು ಕಾಪಾಡುವುದು ಹೇಗೆ ಇಂತಹ ವಿಷಯಗಳೆಡೆ ಚಿಂತಿಸಬೇಕು. ನಮ್ಮ ಮೌಖಿಕ ಕಾವ್ಯಗಳಾದ ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪ ಕಾವ್ಯಗಳಲ್ಲಿ ಮೌಲ್ಯಗಳ ಹುಡುಕಾಟ ನಡೆದಿರುವುದನ್ನು ಕಾಣುತ್ತೇವೆ. ಸರ್ವರ ಏಳಿಗೆಗಾಗಿ ಎಲ್ಲರೂ ದುಡಿಯಬೇಕು ಎನ್ನುವುದು ಪ್ರಧಾನವಾಗಿ ನಮ್ಮ ಜನಪದದಲ್ಲಿ ಕಾಣುತ್ತದೆ. 

ಬಂಡಾಯ ಸಾಹಿತ್ಯ ಚಳವಳಿಯ ಭಾಗವಾಗಿ ಕೆಲಸ ಮಾಡಿದವರು ನೀವು. ಒಂದು ಸಾಹಿತ್ಯ ಚಳವಳಿಯಾಗಿ ಬಂಡಾಯದ ಹೆಗ್ಗಳಿಕೆಯೇನು?

ಹಾಗೆ ನೋಡುವುದಾದರೆ ಸಾವಿರ ವರ್ಷಗಳ ಕನ್ನಡ ಸಾಹಿತ್ಯದಲ್ಲಿ ಯಾರೆಲ್ಲಾ ದೊಡ್ಡ ಕವಿಗಳಿದ್ದಾರೋ ಅವರೆಲ್ಲರಲ್ಲಿ ಅಸಾಧಾರಣವಾದ ಮಾನವೀಯ ತುಡಿತಗಳನ್ನೇ ಕಾಣುತ್ತೇವೆ. ಲಿಂಗಭೇದ, ಜಾತಿಭೇದ ಮುಂತಾದ ಎಲ್ಲಾ ಕ್ರೌರ್ಯಗಳ, ಅಸಮಾನತೆಗಳ ವಿರುದ್ಧ ನಮ್ಮ ಕವಿಗಳು ಕಾಲಕಾಲಕ್ಕೆ ಹೋರಾಡಿದ್ದಾರೆ. ನಮ್ಮ ಕವಿರಾಜಮಾರ್ಗಕಾರ, ಪಂಪ, ಕುಮಾರವ್ಯಾಸರಲ್ಲಿ ಇದನ್ನೆಲ್ಲ ನೋಡಬಹುದು. ವಚನಕಾರರಲ್ಲಿ ಅದು ದೊಡ್ಡ ಮಟ್ಟದಲ್ಲಿ ಕಾಣುತ್ತದೆ. ಹರಿಹರ ರಾಘವಾಂಕ ಹಾಗೂ ಕುವೆಂಪು, ಶಿವರಾಮ ಕಾರಂತರವರೆಗೂ ಈ ಪರಂಪರೆ ಇದೆ. ನಂತರದ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಹೊಸಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡಾಯ ಚಳವಳಿ ಈ ಬಗೆಯ ಕೊಡುಗೆ ನೀಡಿದೆ. ಪ್ರಜಾಪ್ರಭುತ್ವ ಕಾಲದ ಉಳಿದ ಚಳವಳಿಗಳಿಗೆ ಹೋಲಿಸಿದಾಗ ಬಹಳ ಕಾಲ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದು ಬಂಡಾಯ ಸಾಹಿತ್ಯ ಚಳವಳಿ. ಒಂದು ವಿಶಾಲ ಮಾನಸಿಕ ತಳಹದಿಯನ್ನೂ ಅದು ಹೊಂದಿತ್ತು. ಸಾಮಾಜಿಕ ಬದಲಾವಣೆಯನ್ನು ಬಯಸುವ ಗೆಳೆಯರು ಶುರು ಮಾಡಿದ್ದು ಅದು. ಏಳುಬೀಳುಗಳ ಹೊರತಾಗಿಯೂ ಕೆಲವು ದಶಕಗಳವರಗೆ ಸಾಮಾಜಿಕ ಎಚ್ಚರವನ್ನು ಕಾಯ್ದಿಡುವ ಕೆಲಸವನ್ನು ಬಂಡಾಯ ಸಾಹಿತ್ಯ ಮಾಡಿದ್ದನ್ನು ನಾವು ನೋಡಬಹುದು. 

’ಬೂಸಾ’ ವಿರೋಧಿ ಹೋರಾಟಗಾರ, ಚಿಂತಕ, ರಾಜಕಾರಣಿಯಾಗಿದ್ದ ಬಸವಲಿಂಗಪ್ಪರೊಂದಿಗೆ ನಿಮ್ಮ ಒಡನಾಟ ಮತ್ತು ಬಸವಲಿಂಗಪ್ಪನವರ ವ್ಯಕ್ತಿತ್ವವನ್ನು ಕುರಿತು ನಮ್ಮ ಓದುಗರಿಗೆ ತಿಳಿಸಿಕೊಡಿ. 
ಬಸವಲಿಂಗಪ್ಪ ವಾಸ್ತವದಲ್ಲಿ ಬಹಳ ಆಶ್ಚರ್ಯಕರವಾದ ಒಬ್ಬ ರಾಜಕಾರಣಿ. ಅವರು ಅಂಬೇಡ್ಕರ್, ಬುದ್ಧ, ವZನಕಾರರೂ ಸೇರಿದಂತೆ ಮತ್ತೆಲ್ಲ ಪ್ರಗತಿಪರವಾದ ಸಾಹಿತ್ಯ ಮತ್ತು ವೈಚಾರಿಕ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದವರು. ಹಾಗೆಯೇ ಹುಟ್ಟಿನಿಂದ ದಲಿತನಾದ ಕಾರಣಕ್ಕೆ ಆ ತುಡಿತವೂ ಹೆಚ್ಚಾಗಿ ಅವರಲ್ಲಿತ್ತು. ನಾವೆಲ್ಲ ಬಸವಣ್ಣ, ಕುವೆಂಪು ಇತ್ಯಾದಿ ವಿಚಾರಧಾರೆಗಳನ್ನು ಚಿಕ್ಕವಯಸ್ಸಿನಲ್ಲೇ ಓದಿಕೊಂಡ ಪರಿಣಾಮವಾಗಿ ಮತ್ತು ನಂತರದಲ್ಲಿ ಅಂಬೇಡ್ಕರ್, ಲೋಹಿಯಾರವರನ್ನು ಅಧ್ಯಯನ ಮಾಡಿದ ತರುವಾಯ ಮತ್ತಷ್ಟು ಸ್ಪಷ್ಟತೆ ಸಿಕ್ಕಿತ್ತು. ಆದರೆ, ಬಸವಲಿಂಗಪ್ಪ ಅಷ್ಟೊತ್ತಿಗಾಗಲೇ ಪ್ರಯೋಗಶೀಲರಾಗಿದ್ದರು. ನನಗೆ ೨೪ ವಯಸ್ಸಾಗಿದ್ದಾಗ ಅವರು ನನ್ನ ಎರಡರಷ್ಟು ವಯಸ್ಸಿನವರು. ನಮ್ಮ ಹಳ್ಳಿಗಾಡಿನಲ್ಲಿ ನಮ್ಮ ಇತಿಮಿತಿಗಳಲ್ಲೇ ನಾವು ಒಂದಷ್ಟು ಹೋರಾಟಗಳನ್ನು ನಡೆಸುತ್ತಿದ್ದುದು ಅವರ ಗಮನಕ್ಕೆ ಬಂದಿತ್ತು. ಆಗ ಅವರೇ ನನ್ನನ್ನು ಹುಡುಕಿಕೊಂಡು ಬಂದರು. ನಾನು, ಡಾ. ಬೆಸಗರಹಳ್ಳಿ ರಾಮಣ್ಣ ಮುಂತಾದವರು ಆಗಿನ ಅನ್ಯಾಯ ಮತ್ತು ಸಮಾಜದಲ್ಲಿನ ಅಕ್ರಮಗಳ ವಿರುದ್ಧ ವಾಚಕರವಾಣಿಗೆ ಪತ್ರಗಳನ್ನು ಬರೆಯುತ್ತಿದ್ದೆವು. ಲೋಹಿಯಾರಿಂದ ಪ್ರಭಾವಿತಗೊಂಡು ಈ ಕಾಂಗ್ರೆಸ್‌ನಲ್ಲಿದ್ದವರೆನ್ನೆಲ್ಲ ನಂಬಲೇಬಾರದೆಂದು ತಿಳಿದುಕೊಂಡಿದ್ದವರು ನಾವು. ಹಾಗಾಗಿ ಒಂದೆರಡು ವರ್ಷ ನಾವವರನ್ನು ಭೇಟಿಯಾಗಿರಲೇ ಇಲ್ಲ. ಆ ನಂತರ ಅವರನ್ನು ಭೇಟಿ ಮಾಡಿದ ಮೇಲೆ ತಿಳಿಯಿತು ಅವರು ಬೇರೆಯದೇ ರೀತಿಯ ಹೃದಯವಂತ ವ್ಯಕ್ತಿ ಅಂತ. ಎಂತಹ ತೊಂದರೆಯನ್ನೂ ತೆಗೆದುಕೊಳ್ಳಲು ಅವರು ತಯಾರಿದ್ದರು. ಪ್ರಖರಸತ್ಯಗಳನ್ನು ಹೇಳಲು ತಯಾರಿಲ್ಲದಿದ್ದರೆ ನಮ್ಮ ಜನರು ಬಿಡುಗಡೆಯಿಲ್ಲದೆ ಹೀಗೇ ಇರಬೇಕಾಗುತ್ತದೆ- ಎಂದು ಅವರು ನಂಬಿದ್ದರು. ಯಾಕೆಂದರೆ ಆ ಕಾಲದಲ್ಲಿ ಅಸ್ಪೃಶ್ಯತೆಯನ್ನು ಬಹಿರಂಗವಾಗಿ ಸಮರ್ಥಿಸುವ ಪುರಿ ಪೀಠದ ಜಗದ್ಗುರುಗಳೇ ಇದ್ದರು. ಸಮಾಜದಲ್ಲಿ ವೈಚಾರಿಕ ಚಿಂತನೆಗಳು ಬರಬೇಕು ಎಂದು ಶ್ರಮಪಡುತ್ತಿದ್ದ ಬಸವಲಿಂಗಪ್ಪ ’ಇಷ್ಟು ದಿನ ದೇವರನ್ನು ಪೂಜಿಸಿದರೂ ನಿಮ್ಮ ಬದುಕಲ್ಲಿ ಬದಲಾವಣೆಯಾಗಿಲ್ಲ’ ಎಂದು ’ದೇವರ ಪಟಗಳನ್ನು ಚರಂಡಿಗೆಸೆಯಿರಿ’ ಎಂದರು. ಆಮೇಲೆ ಸಾಹಿತ್ಯದಲ್ಲಿ ಬೂಸಾ ಸಹ ಇರಲು ಸಾಧ್ಯವೆಂದರವರು. ಇದು ಬಹಳ ಇಂಟರೆಸ್ಟಿಂಗ್ ನೋಡಿ. ಬಸವಣ್ಣ, ಅಕ್ಕಮಹಾದೇವಿ ಕೂಡಾ ಇದನ್ನೇ ಹೇಳಿದ್ದು. ವೇದ ಶಾಸ್ತ್ರ ಪುರಾಣ ಆಗಮಂಗಳು/ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿಭೋ/ ಬರಿದೇ ಕುಟ್ಟಲೇಕೆ ಎಂದು. ’ವೇದಕ್ಕೆ ಒರೆಯ ಕಟ್ಟುವೆ’ ಎಂದೇ ಸಿಟ್ಟಿನಿಂದ ಬಸವಣ್ಣ ಹೇಳಿಲ್ಲವೇ? ಬುದ್ಧನಂತೂ ’ದೇವರು ಅಗಣ್ಯ’  ಎಂದು ಹೇಳಿದ. ಹೀಗೆ ಇವರೆಲ್ಲರ ಚಿಂತನೆಗಳ ಪ್ರಯೋಗಶೀಲತೆಯ ರೀತಿಯಲ್ಲಿ ಬಸವಲಿಂಗಪ್ಪ ಮಾತನಾಡಿದರು. ಆಗ ನಮ್ಮಂತಹ ಬಹಳ ಜನರಿಗೆ ಸಂತೋಷವಾಯಿತು. ಈ ಬಗೆಯ ಬದಲಾವಣೆ ಬಯಸುವ ಮನೋಭಾವದವರು ಕಾಂಗ್ರೆಸ್‌ನಲ್ಲಿದ್ದುದು ಕಡಿಮೆ. ಬಸವಲಿಂಗಪ್ಪ ಕಾಂಗೆಸ್ಸನ್ನು ಬಿಡುತ್ತಲೂ ಇರಲಿಲ್ಲ. ಆಳುವ ಕಾಂಗ್ರೆಸ್ ಸರ್ಕಾರದಲ್ಲೇ ಇದ್ದು ಏನಾದರೂ ಮಾಡಲು ಸಾಧ್ಯ ಎನ್ನುವ ಅಭಿಪ್ರಾಯ ಅವರದ್ದಾಗಿತ್ತು. ಆದರೆ ಅವರ ಬಗ್ಗೆ ಬಹಳ ಅಪಪ್ರಚಾರ ನಡಯಿತು. ಮುಗ್ಧ ವಿದ್ಯಾರ್ಥಿಗಳನ್ನು ಅವರ ವಿರುದ್ಧ ಎತ್ತಿಕಟ್ಟಲಾಯಿತು. ಹೀಗಾಗಿ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ಸೃಷ್ಟಿಯಾಯಿತು.

ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕಾಯ್ದೆ ದೇಶದಲ್ಲೇ ಮೊಟ್ಟಮೊದಲು ಆದದ್ದು ಅವರಿಂದಲೇ ಅಲ್ಲವೇ?

ಹೌದು. ಮಲಹೊರುವ ಪದ್ಧತಿಯನ್ನು ಇಲ್ಲವಾಗಿಸಲು ಅವರು ನಡೆಸಿದ ಪ್ರಯತ್ನಗಳಂತೂ ಶ್ಲಾಘನೀಯ. ಮಂತ್ರಿಯಾಗಿದ್ದ ಬಸವಲಿಂಗಪ್ಪ ಶಿಷ್ಟಾಚಾರವನ್ನೂ ಮೀರಿ ನನ್ನನ್ನು ಪತ್ರಿಕಾಗೋಷ್ಠಿಗಳಿಗೆ ಕೊಂಡೊಯ್ಯುತ್ತಿದ್ದರು.  ಅಲ್ಲಿ ಮಲ ಮೂತ್ರ ಎಂದು ಹೇಳದೇ ಹೇಲು ಉಚ್ಚೆ ಎಂದು ಬಳಸುತ್ತಿದ್ದರು. ಇದನ್ನು ಕೇಳಿ ಪತ್ರಕರ್ತರು ಕಿವಿಮುಚ್ಚಿಕೊಳ್ಳುತ್ತಿದ್ದರು. ಆಗ ಅವರು ಹೇಳುತ್ತಿದ್ದರು. ’ನೋಡಿ ಆ ಶಬ್ದಗಳನ್ನು ಕಿವಿಯಲ್ಲಿ ಕೇಳಲಿಕ್ಕೇ ನಿಮಗಾಗುವುದಿಲ್ಲ. ಆದರೆ ನನ್ನ ಜನ ಅದನ್ನು ಹೊರುವಾಗ ಕಣ್ಣು ಮೂಗು ಮುಖದ ಮೇಲೆಲ್ಲಾ  ಅವೆಲ್ಲಾ ಪ್ರತಿಕ್ಷಣವೂ ಸುರಿಯುತ್ತಿರುತ್ತವೆ’ ಎನ್ನುತ್ತಿದ್ದರು. ಬಸವಲಿಂಗಪ್ಪ ಅನುಕೂಲಸ್ಥ ಕುಟುಂಬದಿಂದ ಬಂದಿದ್ದರೂ ಆ ಜನರ ಅವಮಾನ, ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು ಎಂಬುದು ಮುಖ್ಯ. ಮಲಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಇವರು ತೀರ್ಮಾನ ತೆಗೆದುಕೊಂಡ ೨೫ ವರ್ಷಗಳ ನಂತರ ಕೇಂದ್ರ ಸರ್ಕಾರ ಅದನ್ನು ಅನುಸರಿಸಿತು ಎಂಬುದನ್ನು ನೋಡಿದರೆ ಬಸವಲಿಂಗಪ್ಪ ಎಂತಹ ಹೊಣೆಗಾರಿಕೆಯ ಮನುಷ್ಯ ಎಂದು ಅರ್ಥವಾಗುತ್ತದೆ.  ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಖಂಡಿತಾ ಸಾಧ್ಯವಿದೆ. ಆದರೆ ಇಂದಿನ ಆಳುವ ವರ್ಗದಿಂದ ಅಂತಹ ಸಂವೇದನಾಶೀಲತೆಯನ್ನು ನಿರೀಕ್ಷಿಸಲಾಗದಂತಹ ಪರಿಸ್ಥಿತಿ ಇದೆ. 

ನೀವು ಚಳವಳಿಗಳಲ್ಲಿ ಭಾಗವಹಿಸಿದವರು. ಕಳೆದ ಒಂದೆರಡು ದಶಕಗಳಲ್ಲಿ ಎಲ್ಲಾ ಚಳವಳಿಗಳು ಛಿದ್ರಗೊಂಡಿದ್ದಕ್ಕೆ ಕಾರಣಗಳೇನು ಎಂದು ನಿಮಗನಿಸುತ್ತದೆ?
ನಮ್ಮಲ್ಲಿ ದೊಡ್ಡ ಪ್ರಮಾಣದ ವೈಚಾರಿಕ ಭಿನ್ನಾಭಿಪ್ರಾಯಗಳಿಗಿಂತ ವ್ಯಕ್ತಿತ್ವದ ಅಹಂಕಾರಗಳು, ಅಸಹನೆ ಇವೇ ಕಾರಣವಾಗಿವೆ ಎಂದೆನಿಸುತ್ತದೆ. ಆದರೆ ನಿಜವಾದ ಸ್ನೇಹಭಾವದಿಂದ ಹೋರಾಟಗಳನ್ನು ನಡೆಸಬೇಕು. ಕಾಮ್ರೇಡರಿ ಗುಣ ಎನ್ನುತ್ತಾರಲ್ಲ ಅದು. ಆದರೆ ಅದು ಮನುಷ್ಯ ಮಾತ್ರರಿಗೆ ಸುಲಭವೂ ಅಲ್ಲ. ಹೇಳುವುದು ಸುಲಭ. ಮಾಡುವುದು ಕಷ್ಟ. ಈಗ ನೋಡಿ. ನಮ್ಮ ನಂಜುಂಡ ಸ್ವಾಮಿಯವರು ಬಹಳ ದೊಡ್ಡ ತ್ಯಾಗ ಮಾಡಿದರು. ಆದರೂ ನಮ್ಮ ದಲಿತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹಲವಾರು ಸಮಸ್ಯೆಗಳಿವೆ ಇಲ್ಲಿ. ಇವಕ್ಕೆಲ್ಲಾ ಒಂದು ಸಿದ್ಧೌಷದ ಎಂಬುದಿಲ್ಲ. ಸಮಾನ ಮನಸ್ಕರೆಲ್ಲಾ ಒಗ್ಗಟ್ಟಾಗಿ ಸಮಾಜಿಕ ಸಮಸ್ಯೆಗಳ ಸಂದರ್ಭದಲ್ಲಿ ಸರ್ಕಾರಗಳ ಅವಿವೇಕದ ವಿರುದ್ಧ ಪ್ರತಿಭಟನೆ ಮಾಡುವ ಒಗಟ್ಟನ್ನು ಇನ್ನಾದರೂ ಪ್ರದರ್ಶಿಸಬೇಕು. ಪ್ರತಿಯೊಂದು ಚಳವಳಿಗಳ ಸಂದರ್ಭದಲ್ಲಿ ಸೈದ್ಧಾಂತಿಕ ತಾಕಲಾಟಗಳಿದ್ದವು ಎಂಬುದನ್ನು ನೋಡುತ್ತೇವೆ. ವೈಚಾರಿಕ ಭಿನ್ನಾಭಿಪ್ರಾಯಗಳನ್ನೆಲ್ಲಾ ಗೌರವದಿಂದಲೇ ಕಾಣಬೇಕಾಗಿದೆ. ಇಂದು ಕಮ್ಯುನಿಸ್ಟರು, ಸಮಾಜವಾದಿಗಳು, ದಲಿತ ಹೋರಾಟಗಾರರು ಇತ್ಯಾದಿ ಎಲ್ಲಾ ಪ್ರಗತಿಪರರು ಸೇರಿ ಹೋರಾಟ ಮಾಡಲು ಕೈತುಂಬಾ ಕೆಲಸಗಳಿವೆ. ಒಂದು ಹಂತ ದಾಟಿದ ಮೇಲಷ್ಟೇ ಭಿನ್ನಾಭಿಪ್ರಾಯಗಳು ಮುಂದೆ ಬಂದರೆ ಸಮಸ್ಯೆ ಇಲ್ಲ. ಸಾಮಾನ್ಯ ಮನುಷ್ಯನಿಗೆ ಮೂಲಭೂತ ಅವಶ್ಯಕತೆಗಳೇ ಈಡೇರದಿರುವ ಸಂದರ್ಭದಲ್ಲಿ ಎಲ್ಲರೂ ಸೇರಿ ಒಂದು ಸಮಾನ ಹೋರಾಟದ ವೇದಿಕೆಯನ್ನು ನಿರ್ಮಿಸುವ ಅಗತ್ಯತೆ ಇದೆ.  ಇಂದು ಕೆಲವು ದೊಡ್ಡ ಸಾಹಿತಿಗಳು ಮತ್ತು ಚಿಂತಕರಾದವರು ಕೋಮುವಾದಿಗಳಂತೆ ಕೆಲಸ ಮಾಡುತ್ತಿರುವುದನ್ನು ನೋಡಿದ್ದೇವೆ. ಭೈರಪ್ಪನವರೇನೋ ಮೊದಲಿನಿಂದಲೂ ವರ್ಣವ್ಯವಸ್ಥೆಯ ಪರವಾಗಿರುವವರು. ಆದರೆ ಮೂಲತಃ ಒಳ್ಳೆಯ ವ್ಯಕ್ತಿಯಾಗಿರುವ ಚಿದಾನಂದ ಮೂರ್ತಿ ಕೋಮುವಾದಿಯಂತೆ ಮಾತನಾಡುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂದು ಒಳ್ಳೆಯ ಆಶಯಗಳನ್ನಿಟ್ಟುಕೊಂಡ ಅನೇಕರಿದ್ದಾರೆ. ಅರ್ಪಣಾ ಮನೋಭಾವದ ತರುಣರೂ ಇದ್ದಾರೆ. ಆದರೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಾಗದಿರುವುದು ವಿಷಾದನೀಯ ಸಂಗತಿ. 

ಮತ್ತೊಂದು ಕಡೆಗೆ ಸಮಾಜದಲ್ಲಿ ಮತಭ್ರಾಂತಿ ಹೆಚ್ಚುತ್ತಿರುವುದಕ್ಕೆ ನಿರ್ದಿಷ್ಟ ಕಾರಣಗಳಿರಬಹುದೇ? 
ಹೌದು. ಅಕ್ಷರ ಜ್ಞಾನ ಬಂದ ಮೇಲೆ ಇಂತಹ ವಿಚಾರಗಳು ಕಡಿಮೆಯಾಗುತ್ತವೆ ಎಂದುಕೊಂಡಿದ್ದೆವು. ಆದರೆ ಈಗಲೂ ಅಂತಹ ಕೋಮುಭಾವನೆ, ಜಾತೀಯತೆಯ ಭಾವನೆಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತೇವೆ. ಎಲ್ಲಾ ಧರ್ಮಗಳಲ್ಲಿಯೂ ಮೂಲಭೂತವಾದಿಗಳಿದ್ದಾರೆ. ಇದೆಲ್ಲಾ ಭಾರತದ ಅನಾದಿಕಾಲದ ಜಾಡ್ಯ. ಎಷ್ಟೊಂದು ಜನ ಸಮಾಜ ಸುಧಾರಕರು, ಧಾರ್ಮಿಕ ಚಿಂತಕರು ಬಂದೂ ಈ ಜಾಡ್ಯವನ್ನು ತೊಲಗಿಸಲಾಗಿಲ್ಲ. ಕೋಮುಗಲಭೆಗಳನ್ನು ಹಬ್ಬಿಸುವುದು, ಹಿಂಸೆ ನಡೆಸುವುದು, ಕೊಲ್ಲುವುದು- ಇವೆಲ್ಲಾ ಯಾವ ಕಾಲಕ್ಕೂ ಒಳ್ಳೆಯ ಮೌಲ್ಯಗಳಲ್ಲ. ಅದಕ್ಕಿಂತ ಭಿನ್ನವಾಗಿ ನಾವು ಒಟ್ಟಿಗಿರುವ ಆಲೋಚನೆಗಳೇ ಬಂದಿಲ್ಲ. ಹಾಗೆಯೇ ಮುಸಲ್ಮಾನರಲ್ಲಿಯೂ ದೊಡ್ಡ ಪ್ರಮಾಣದ ಅವಿವೇಕವಿದೆ. ಅವರಲ್ಲಿ ಅನಕ್ಷರತೆ, ಮೂಲಭೂತವಾದಿ ಧೋರಣೆಗಳು ಹೆಚ್ಚಿವೆ. ಹಿಂದೂಗಳಲ್ಲಿ ಅಂತಹವುಗಳನ್ನೆಲ್ಲಾ  ತೋರಿಸಿ ಇಲ್ಲಿನ ಬಡವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂದು ನೋಡಿ. ಮುಸ್ಲಿಮರ ಮೇಲೆ ದಾಳಿ, ಹಲ್ಲೆ ನಡೆಸಲು ಬಳಸುತ್ತಿರುವುದು ಶೂದ್ರರನ್ನೇ ಅಲ್ಲವೇ? ಅದಕ್ಕಾಗಿಯೇ ಭಜರಂಗದಳಗಳಂತ ಸಂಘಟನೆಗಳನ್ನು ರಚಿಸಿದ್ದಾರೆ. ಈ ವ್ಯೂಹ ಅರ್ಥವಾಗಬೇಕಿದೆ. ಉಳಿದಂತೆ ಸೆನ್ಸಿಬಲ್ ಆದ ದೊಡ್ಡ ಜನವರ್ಗವಿದ್ದರೂ ನಾವು ಯೋಚನೆ ಮಾಡುವುದು ದಂತಗೋಪುರಗಳಲ್ಲಿ ಕುಳಿತುಕೊಂಡೇ. ತೊಂದರೆ ತೆಗೆದುಕೊಳ್ಳಲಿಕ್ಕೆ ನಾವು ತಯಾರಿಲ್ಲದಿರುವುದು ಈ ಹೊತ್ತಿನ ನಿಜವಾದ  ಸಮಸ್ಯೆ. ಎಲ್ಲ ಕ್ಷೇತ್ರಗಳಲ್ಲಿ ಸಂವೇದನಾಶೀಲರಾಗಿರುವ ಜನರು ಈ ಮೈಚಳಿಯನ್ನು ಬಿಟ್ಟು ಹೋರಾಟ ಮಾಡುವುದೊಂದೇ ದಾರಿ. ಇಲ್ಲವಾದರೆ ಕೋಮುವೈಷಮ್ಯಗಳು ಹೆಚ್ಚುತ್ತಲೇ ಹೋಗುತ್ತವೆ. ಹಿಂದೂಧರ್ಮವೂ ಉದ್ಧಾರವಾಗುವುದಿಲ್ಲ. ಇಲ್ಲಿ ಸಮಾನತೆಯೂ ಸಾಧ್ಯವಾಗುವುದಿಲ್ಲ. ಆಶ್ಚರ್ಯವೆಂದರೆ ಶ್ರಮಜೀವಿಗಳ ಕೋಟಿಗಟ್ಟಲೆ ಹಣ ದೇವಸ್ಥಾನಗಳಲ್ಲಿ ಕೊಳೆಯುತ್ತಿದೆ. ಅದನ್ನು ಜನರ ಅಭಿವೃದ್ಧಿಗೆ ಬಳಸುವ ನಿರ್ಧಾರ ಕೈಗೊಳ್ಳಲೂ ನಮ್ಮ ಸರ್ಕಾರಗಳಿಗೆ ಆಗುತ್ತಿಲ್ಲ. ಕೆರೆಯ ನೀರನು ಕೆರೆಗೆ ಚೆಲ್ಲುವಂತಾಗಬೇಕಲ್ಲವೇ? ಮತ್ತೆ ಆ ಹಣಕ್ಕೆ ಲೆಕ್ಕವೂ ಇಲ್ಲ. ಮತ್ತೂ ದುರಂತವೆಂದರೆ ಇಂದು ಭ್ರಷ್ಟತೆ ಬುದ್ಧಿಜೀವಿಗಳನ್ನೂ ಬಿಟ್ಟಿಲ್ಲ. ಲೋಕಾಯುಕ್ತ ತನಿಖಾ ವರದಿಯಲ್ಲಿ ಪತ್ರಕರ್ತರ ಹೆಸರುಗಳೂ ಇರುತ್ತವೆ. ಸೋಕಾಲ್ಡ್ ಬುದ್ಧಿಜೀವಿಗಳು ಆ ಹಣದ ಹಿಂದೂ ಹೋಗುತ್ತಿರುವುದು ಇನ್ನೂ ಅನ್ಯಾಯ. ಅಲ್ಲದೇ ತಮ್ಮ ಈ  ಅವಕಾಶವಾದವನ್ನು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ನಮ್ಮ ಸಾಮಾಜಿಕ ವಿಷಮತೆಗಳಿಗೆ ಬುದ್ಧನ ಚಿಂತನೆಗಳು ಉತ್ತರವಾಗುತ್ತವೆ ಎಂದು ನಂಬುತ್ತೀರಾ? 

ವಿಶ್ವದ ಸಕಲ ಸಮಸ್ಯೆಗಳಿಗೂ ಬುದ್ಧನೇ ಉತ್ತರವಾಗುತ್ತಾನೆ ಎಂದು ಸಾವಿರ ಸಲ ನನಗೆ ಅನ್ನಿಸಿಬಿಟ್ಟಿದೆ. ಬುದ್ಧ ಮತ್ತು ಬಸವಣ್ಣ ಯಾಕೆ ಮುಖ್ಯರಾಗುತ್ತಾರೆಂದರೆ ಅವರು ಈ ರಾಜಶಾಹಿ ಮತ್ತು ಪುರೋಹಿತಶಾಹಿಯನ್ನು ದೂರಮಾಡಿದವರು. ವಿಶ್ವದ ಚರಿತ್ರೆಯಲ್ಲಿ ರಾಜಶಾಹಿ ಮತ್ತು ಪುರೋಹಿತಶಾಹಿ ಸೇರಿ ಶ್ರಮಜೀವಿಗಳ ಗಳಿಕೆಯ ಲಾಭವನ್ನು ಸೂರೆಹೊಡೆದಿದ್ದಾರೆ. ಬುದ್ಧನ ’ಕರತಲ ಭಿಕ್ಷೆ - ತರುಲತೆ ವಾಸ’ವನ್ನು ಆಶ್ರಯಿಸಿ ಅರಮನೆಯನ್ನು ಬಿಟ್ಟು ಸಂತನಾದವನು. ಬಸವಣ್ಣನೂ ಅಷ್ಟೆ. ಜನಿವಾರವು ಅಸಮಾನತೆಯ ಸಂಕೇತ ಎಂದು ಕಿತ್ತೆಸೆದುಬಿಟ್ಟ. ಮನಸ್ಸಿನ ಪರಿಶುದ್ಧತೆಯ ಬಗ್ಗೆ ಹೇಳಿದ. ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರೈಸ್ತ ಧರ್ಮವಾಗಲೀ, ಇಸ್ಲಾಂ ಧರ್ಮವಾಗಲೀ ಇರಲಿಲ್ಲ. ಆಗಲೇ ಮಹಾನ್ ಚಿಂತನೆಗಳನ್ನು ಮಂಡಿಸಿದ ಬುದ್ಧ ಸಕಾರಾತ್ಮಕ ಚಿಂತನೆ ಕುರಿತು ಮಾತನಾಡಿದ. ಹಾಗೆಯೇ ನಾನು ಹೇಳುವುದೇ ಅಂತಿಮವಲ್ಲ: ಯಾವುದು ಅತ್ಯುತ್ತಮವೋ ಅದರ ಕಡೆಗೆ ಹೋಗೋಣ ಎಂದು ಮರು ಆಲೋಚನೆಗೆ ಒತ್ತು ಕೊಟ್ಟ. ಗೌತಮ ಬುದ್ಧ ಪ್ರಜಾಪ್ರಭುತ್ವವಾದಿ, ಅಹಿಂಸಾವಾದಿ, ಸಮತಾವಾದಿ, ಮತ್ತು ಮೂಢನಂಬಿಕೆಗಳ ಕಡುವಿರೋಧಿ. ಎಲ್ಲಾ ಬಗೆಯ ತಾರತಮ್ಯಗಳಿಗೂ ಅಂತ್ಯ ಹಾಡುವ ಚಿಂತನೆಗಳು ಆತನಲ್ಲಿವೆ. ಸರಳತೆ, ಪ್ರಬುದ್ಧತೆಗಳು ಆತನ ತತ್ವಗಳಲ್ಲಿವೆ. ಆತನ ಚಿಂತನೆಗಳಿಗೆ ಸರಿಸಾಟಿಯಾದವರು ಯಾರೂ ಇಲ್ಲ. ನಮ್ಮ ನೆಲದಲ್ಲಿ ಬುದ್ಧ ಚಿಂತನೆಯಿದೆ. ಲೋಕಾಯತ ಚಿಂತನೆಯಿದೆ, ವಚನಕಾರರ ಚಿಂತನೆಯಿದೆ, ಹಾಗೆಯೇ ಸ್ವಾಮಿ ವಿವೇಕಾನಂದ, ಟ್ಯಾಗೋರ್, ಕುವೆಂಪು, ಶಿವರಾಮ ಕಾರಂತ- ಹೀಗೆ ಎಲ್ಲರೂ ದೊಡ್ಡ ಹೋರಾಟದ ಗಟ್ಟಿ ದಾರಿಯನ್ನು ತೋರಿಸಿಕೊಟ್ಟಿದ್ದರು. ಅವರೆಲ್ಲರ ದಾರಿಯಲ್ಲಿ ನಾವು ನಮ್ಮ ಬದ್ಧತೆಯನ್ನು ಪ್ರದರ್ಶಿಸಲು ವಿಫಲರಾಗಿದ್ದೇವೆ. 

ನೀವು ಹೇಳುವುದು ಸರಿ. ಆದರೆ ಬೌದ್ಧ ಧರ್ಮ ಎಲ್ಲೆಲ್ಲಿ ಆಳುವ ವರ್ಗಗಳ ಕೈ ಸೇರಿದೆಯೋ ಅಲ್ಲಿಯೂ ಸಹ ವ್ಯಾಪಕ ಹಿಂಸಾಚಾರಗಳು ನಡೆದಿವೆಯಲ್ಲ. ಟಿಬೆಟ್ ಮತ್ತು ಶ್ರೀಲಂಕಾಗಳಂತಹ ಉದಾಹರಣೆಗಳು ನಮ್ಮ ಮುಂದಿವೆ?
ಹೌದು ನಿಜ. ಇದೂ ಬಹಳ ಕುತೂಹಲಕರವಾದದ್ದು. ಇದಕ್ಕೆ ಕಾರಣ ಬೇರೇನೂ ಅಲ್ಲ- ಜಡತ್ವ. ಅಕ್ಕಮಹಾದೇವಿ ಹೇಳುವುದು ಅದನ್ನೇ. ನೀವು ತತ್ವ ಹೇಳುತ್ತೀರಾದರೂ ಹೃದಯ ಪರಿಶುದ್ಧತೆ ಇಲ್ಲ ಎಂದು ಹೇಳುತ್ತಾಳಾಕೆ. ಇಂದು ಹಿಂಸೆಯ ಗಲಭೆಗಳಾಗುವ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಎಷ್ಟೋ ವಾಸಿ. ಗುಜರಾತ್‌ನಂತಹ ಹಿಂಸಾತ್ಮಕ ಘಟನೆಗಳಾಗುತ್ತವೆ. ಅದೂ ಮೂಲಭೂತವಾದಿಗಳಿಂದಲೇ. ಇಂತಹವನ್ನು ಹೊರತುಪಡಿಸಿ ನೋಡಿದರೆ ಇಂದು ವ್ಯಾಪಕ ಹಿಂಸಾಚಾರ ನಡೆಯುವ ಕೆಲವು ನೆರೆಹೊರೆಯ ರಾಷ್ಟ್ರಗಳನ್ನೇ ನೋಡಿದರೆ ಭಾರತ ಎಷ್ಟೋ ಉತ್ತಮವೆಂದು ತೋರುತ್ತದೆ. 

ನೀವು ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದ್ದು ಹೇಗೆ?
ಯಾವುದೇ ಸಾಹಿತ್ಯ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳುವ ಕುರಿತಾದ ಚಿಂತನೆ ಎಂದೇ ನಾನಂದುಕೊಂಡಿರುವುದು. ನಮಗೆ ಸಾಹಿತ್ಯದ ಅಧ್ಯಯನದ ಮೂಲಕ ಇದು ಸಿಕ್ಕಿತು. ದೇವನೂರು, ಶ್ರೀ ಕೃಷ್ಣ ಆಲನಹಳ್ಳಿ, ಮುಂತಾದ ಒಂದೇ ವಯಸ್ಸಿನ ನಾವು ಚಳವಳಿ ಮತ್ತು ಬರಹಗಳನ್ನು ಒಟ್ಟೊಟ್ಟಿಗೇ ಮಾಡಲು ಆರಂಭಿಸಿದೆವು. ಆಗ ಅನಂತಮೂರ್ತಿ, ಲಂಕೇಶ್, ತೇಜಸ್ವಿಯಂತಹ ಸಮಾಜವಾದಿಗಳ ಪ್ರಭಾವವೂ ನಮ್ಮ ಮೇಲಿತ್ತು. ಲೋಹಿಯಾ ಅವರ ಬರಹಗಳು ಕನ್ನಡದಲ್ಲಿ ಬಂದದ್ದೂ ನಮಗೆ ನಮ್ಮ ತಿಳಿವಳಿಕೆ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು. ಇವೆಲ್ಲದರ ಜೊತೆಗೆ ಚಳವಗಳಲ್ಲಿ ನೇರವಾಗಿ ಭಾಗವಹಿಸಲು ತೊಡಗಿದ್ದೆವು. ನಮ್ಮ ಸಂಶೋಧನೆ, ಆಧ್ಯಾಪನ, ಚಳವಳಿ ಎಲ್ಲವೂ ಒಂದಕ್ಕೊಂದು ಪೂರಕವಾದವು. ಈಗ ಕೆಲವರು ಮಾಡುತ್ತಾರಲ್ಲ. ಕಾರ್ಖಾನೆ ತರಹ ಒಂದೇಸಮನೆ ಬರೆಯುವುದು. ಆ ತರಹದ ಅತಿಸಂತಾನದಲ್ಲೇನೂ ನನಗೆ ನಂಬಿಕೆಯಿರಲಿಲ್ಲ. ಕನ್ನಡದಲ್ಲಿ ಒಂದು ಸದಭಿರುಚಿಯಿದೆ. ನೀವು ಕಡಿಮೆ ಬರೆದರೂ ಅದರಲ್ಲಿ ಮೌಲ್ಯವಿದ್ದರೆ ಅದು ಗುರುತಿಸಲ್ಪಡುತ್ತದೆ. ಈಗ ನೋಡಿ. ರಾಘವೇಂದ್ರ ಖಾಸನೀಸ ಒಬ್ಬ ಸಂಪ್ರದಾಯವಾದಿ ಮಾಧ್ವ ಬ್ರಾಹ್ಮಣ. ಆದರೆ ಬಹಳ ಸಂವೇದನಾಪೂರಿತ ಕತೆಗಳನ್ನು ಬರೆದಿದ್ದಾರೆ. ಮತ್ತೊಂದು ಕಡೆ ಭೈರಪ್ಪ ಸಮಾನತೆಯ ತತ್ವಗಳನ್ನು ಒಪ್ಪದೆ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರೆ ಸಮಾಜ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಈ ಅವಿವೇಕಕ್ಕೆ ನಾವೆಲ್ಲ ಮಂಗಳ ಹಾಡುವುದು ಯಾವಾಗ?  

ಹೊಸತಲೆಮಾರಿನ ಯುವ ಲೇಖಕರ ಬಗ್ಗೆ?
ಇಂದಿನ ಹೊಸ ತಲೆಮಾರಿನ ಲೇಖಕರು ನಿಜವಾಗಿಯೂ ವೈವಿದ್ಯಮಯವಾದದ್ದನ್ನು ಕೊಡುತ್ತಿದ್ದಾರೆ. ಶ್ರಮಜೀವಿಗಳ ಮಕ್ಕಳಾದ ವೀರಣ್ಣ ಮಡಿವಾಳರ, ವಿ.ಆರ್. ಕಾರ್ಪೆಂಟರ್ ಅಂತಹ ಇನ್ನೂ ಹಲವಾರು ತರುಣ ಲೇಖಕರು ಈ ಬದುಕಿನ ಎಲ್ಲಾ ಬಗೆಯ ನಿಸ್ಸಹಾಯಕತೆಯ ಸೂಕ್ಷ್ಮಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಅಂತರಂಗದ ಒಂದು ಗೀತೆಯಿರುತ್ತದೆ. ಹಾಗೆಯೇ ಮೇಲ್ಜಾತಿಯಿಂದ ಬಂದವರೂ ಕರುಳಿನಿಂದ ಬರೆದಾಗ ಅಲ್ಲೂ ಸತ್ವ ತುಂಬಿರುತ್ತದೆ. ಹೆಣ್ಣುಮಕ್ಕಳಲ್ಲೂ ಅಷ್ಟೆ. ಆ ಲೋಕ ಇನ್ನೂ ಚೆನ್ನಾಗಿ ದಾಖಲಾಗಬೇಕು. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳಾ ಅನುಭವ ದಾಖಲಾಗಿಯೇ ಇಲ್ಲ. ಡಾ. ಎಚ್.ಎಸ್. ಅನುಪಮಾ ಎಂಬ ಹೆಣ್ಣುಮಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ. ಅಂಬೇಡ್ಕರ್ ಚಿಂತನೆ, ಪ್ರಗತಿಪರತೆ ಎಲ್ಲವನ್ನೂ ತುಂಬಾ ಚೆನ್ನಾಗಿ ಅರಿತು ಕೆಲಸಮಾಡುತ್ತಿದ್ದಾರೆ. ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು ಬಹಳ ದಿಟ್ಟತನದಿಂದ ಅಂತರಂಗಪೂರ್ವಕವಾಗಿ ಮಾತನಾಡುವುದಿದೆಯಲ್ಲ- ಅದು ಸೊಗಸಾದದ್ದು. ಉಳಿದೆಲ್ಲ ಪ್ರಗತಿಪರರಿಗಿಂತ ಹೆಚ್ಚು ಪ್ರಗತಿಪರವಾಗಿ ಆಕೆ ಕೆಲಸ ಮಾಡುತ್ತಿದ್ದಾರೆ- ಅಧ್ಯಯನ ಮಾಡುತ್ತಿದ್ದಾರೆ. ಇದೂ ಸಾಧ್ಯ ನೋಡಿ. ಪ್ರಾಮಾಣಿಕತೆಗೆ ಎಲ್ಲೆಡೆ ಬೆಲೆಯಿರುತ್ತದೆ. ನಾನು ಗೌಪಾಲಗೌಡರ ಕುರಿತು ಅಧ್ಯಯನ ಮಾಡಿದ್ದೇನೆ. ಅವರ ಹೆಸರು ಕೇಳಿದೊಡನೆ ಅವರನ್ನು ಕಂಡಿರುವವರೆಲ್ಲ ಬ್ರಾಹ್ಮಣರಿಂದ ದಲಿತರವರೆಗೆ ಎಲ್ಲರೂ ಕಣ್ಣೀರು ಸುರಿಸುತ್ತಾರೆ. ಅವರೊಬ್ಬ ಗೇಣಿದಾರನ ಮಗ. ಭಾರತೀಯ ರಾಜಕೀಯ ಚರಿತ್ರೆಯಲ್ಲಿ ಅಚ್ಚರಿ ತರುವಂತಹ ವಿಷಯಗಳಿವು. ತಮಿಳುನಾಡಿನ ಕಾಮರಾಜ ನಾಡಾರ್ ಸಹ ಅಷ್ಟೆ. ಇವರಿಬ್ಬರ ತಾಯಂದಿರೂ ಒಂದು ಪುಟ್ಟ ಗುಡಿಸಲಲ್ಲಿದ್ದವರೇ. ಈಗ ನೋಡಿ. ಗೋಪಾಲಗೌಡರಂತಹ ಧೀರರ ಊರಲ್ಲಿ ಕಳ್ಳರ ಸಂತೆಯೇ ನಡೆಯುತ್ತಿದೆ. ಜನರಿಗೂ ಸಿಟ್ಟೇ ಬರುತ್ತಿಲ್ಲವಲ್ಲ? ಮತ್ತೆ ಐದು ವರ್ಷ ಅವರೇ ಚುನಾಯುತರಾದರೂ ಆಶ್ಚರ್ಯವಿಲ್ಲ. 

ಮೈಸೂರು ದಸರಾಕ್ಕೆ ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸುತ್ತಿರುವ ಕುರಿತು ಎರಡು ಬಗೆಯ ಅಭಿಪ್ರಾಯಗಳು ಬರುತ್ತಿವೆ. ಒಂದು ಅವರು ಕೋಮುವಾದಿ ಲೇಖಕ ಅವರನ್ನು ಕರೆಸಬಾರದು. ಮತ್ತೊಂದು ದಸರಾ ಒಂದು ರಾಜಶಾಹಿ, ಪುರೋಹಿತಶಾಹಿ ಆಚರಣೆ. ಅದಕ್ಕೆ ಭೈರಪ್ಪನವರೇ ಸೂಕ್ತ ಎಂದು. ನೀವೆನು ಹೇಳುತ್ತೀರಿ? 
ಇದನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಯೋಚಿಸಬೇಕು. ದೇವರನ್ನು, ಚಾಮುಂಡೇಶ್ವರಿಯನ್ನು, ನಾನು ನಂಬದಿದ್ದರೂ ಜನರು ನಂಬಿದ್ದಾರೆ. ಹಾಗೆಯೇ ದಸರಾ ನಿಜವಾದ ನಾಡಹಬ್ಬವಾಗುವುದರಲ್ಲಿ ಇನ್ನೂ ಸಾಧ್ಯವಾಗಿಲ್ಲ. ನಿಜ. ಆದರೆ ಇಂದು ಸರ್ವಾಧಿಕಾರವಂತೂ ಇಲ್ಲ. ಸಾಂಸ್ಕೃತಿಕ ವೈವಿಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಹಾಗಂತ ಈ ಬಗೆಯ  ಉದ್ಘಾಟಕರ ಆಯ್ಕೆ ಅದು ಆಯ್ಕೆ ಮಾಡುವವರ ಅಭಿರುಚಿಗೆ ಸಂಬಂಧಿಸಿದ್ದು. ಅಂಥವರು ಅಧಿಕಾರದಲ್ಲಿದ್ದಾರೆ. ತಮಗೆ ಬೇಕಾದವರನ್ನೇ ತರುತ್ತಾರೆ. ಪೇಜಾವರರನ್ನು ಈ ಹಿಂದೆ ಇವರೇ ಆಯ್ಕೆ ಮಾಡಿದ್ದರು. ತಾವೇ ಸಹಪಂಕ್ತಿ ಭೋಜನಕ್ಕೆ ಒಪ್ಪದ ಪೇಜಾವರ ಪ್ರಗತಿಪರರಂತೆ ಮಾತನಾಡುತ್ತಾರೆ. ಮನುಷ್ಯರೆಲ್ಲಾ ಒಂದೇ ಎಂದು ಹೇಳುವುದಿರಲಿ ಹಿಂದೂಗಳೆಲ್ಲಾ ಒಂದು ಎಂದೂ ಹೇಳುವುದಿಲ್ಲ ಅವರು. ಅಷ್ಟೇ ಅಲ್ಲ ಕನಿಷ್ಟಪಕ್ಷ ಬ್ರಾಹ್ಮಣರೆಲ್ಲಾ ಒಂದು ಎಂದೂ ಹೇಳಲಿಲ್ಲ. ಗೌಡಸಾರಸ್ವತ ಬ್ರಾಹ್ಮಣರನ್ನು ತಮ್ಮ ಮಠದಲ್ಲೇ ಕೂರಿಸದೇ ನೀವು ನಮ್ಮವರಲ್ಲ ಹೋಗಿ ಎಂದು ಎಬ್ಬಿಸಿ ಕಳಿಸಿದವರು ಅವರು. ದಲಿತರನ್ನು ಬಿಡಿ ದಕ್ಷಿಣ ಕನ್ನಡದಲ್ಲಿ ಇಂದಿಗೂ ಬಿಲ್ಲವರನ್ನು ಇವತ್ತಿಗೂ ಯಕ್ಷಗಾನ ಮಂಡಳಿಗಳಿಗೆ ಸೇರಿಸುವುದಿಲ್ಲ. ನಾನು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ನನಗೇ ಈ ಬಗ್ಗೆ ಎಷ್ಟೋ ದೂರುಗಳು ಬಂದಿದ್ದವು. ಮತ್ತೆ ಅದೆಲ್ಲಾ ಇಂದೂ ಮುಂದುವರೆದಿದೆ. ಕನಕರನ್ನೂ ಈ ಹಿಂದೆ ಒಳಗೆ ಬಿಟ್ಟಿರಲಿಲ್ಲ. ೧೯೩೪ರಲ್ಲಿ ಗಾಂಧೀಜಿ ಉಡುಪಿ ಗುಡಿಗೆ ಬಂದಿದ್ದಾಗ ಇವರಿಗೆಲ್ಲ ಛೀಮಾರಿ ಹಾಕಿ ಹೋಗಿದ್ದರು. ಅವರು ದೇವಸ್ಥಾನಕ್ಕೆ ಕಾಲಿಡಲಿಲ್ಲ್ಲ. ಎಲ್ಲರಿಗೂ ಪ್ರವೇಶವಿದ್ದರೆ ಮಾತ್ರ ನಾನೂ ಹೋಗುತ್ತೇನೆ ಎಂದು ಹೇಳಿ ಎಂದು ಕನಕನ ಕಿಂಡಿಯಲ್ಲೇ ಕೃಷ್ಣದರ್ಶನ ಪಡೆದರು. 

ಯುವ ಬರಹಗಾರರಿಗೆ ನಿಮ್ಮ ಸಲಹೆಗಳೇನು? 
ನಮ್ಮ ಸಂವೇದನಾಶೀಲತೆ ಮತ್ತು ಪ್ರಾಮಾಣಿಕತೆಗಳು ನಮ್ಮನ್ನು ಕಾಪಾಡುತ್ತವೆ. ಪ್ರಾಮಾಣಿಕತೆ ಮತ್ತು ಸತ್ಯದ ಪರವಾದ ಕಾಳಜಿಗಳಿದ್ದಲ್ಲಿ ಲೇಖಕನೇ ಬೆಳೆಯುತ್ತಾ ಹೋಗುತ್ತಾನೆ. ಹಾಗೆಯೇ ನಮ್ಮ ಉತ್ತಮ ಪ್ರಯತ್ನಗಳು ಮಾತ್ರ ಅತ್ಯುತ್ತಮವಾದದ್ದನ್ನು ಕೊಡಲು ಸಾಧ್ಯ. ಪಾರದರ್ಶಕವಾಕವಾಗಿದ್ದುಕೊಂಡು, ನೈತಿಕಧೈರ್ಯದಿಂದ ಇದ್ದು, ಪಕ್ಷಪಾತವಿಲ್ಲದೇ ಸಮಾಜವನ್ನು ಗಮನಿಸಿ ನಾವೇನನ್ನು ಗ್ರಹಿಸುತ್ತೇವೆಯೋ ಅದನ್ನು ಕೊಡುತ್ತಾ ಹೋದರೆ ಆ ಮೂಲಕ ಒಳ್ಳೆಯ ಸೃಜನಶೀಲ ಸಾಹಿತ್ಯ ಬರುತ್ತದೆ; ಮತ್ತದರ ಸತ್ಪರಿಣಾಮ ಸಮಾಜದ ಮೇಲೆ ಆಗುತ್ತದೆ. ಅದೊಂದು ಸವಾಲು ಸಹ ಅಗಿದೆ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಆದರೆ ಎಲ್ಲರೂ ಸೇರಿ ಆರೋಗ್ಯಕರವಾದದ್ದನ್ನು ಸೃಷ್ಟಿಸಲು, ಹೆಮ್ಮೆಯ ಸಾಂಸ್ಕೃತಿಕಲೋಕವನ್ನು ಕಟ್ಟಲು ಸಾಧ್ಯ. ಅವಕಾಶವಾದಿಗಳಿಗೆ, ಹೇಡಿಗಳಿಗೆ ಮತ್ತು ಸೋಮಾರಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಆ ಬದ್ಧತೆ, ಕಾಳಜಿಗಳಿರಬೇಕಷ್ಟೆ. ದುಃಖಿತರ, ಕಷ್ಟದಲ್ಲಿರವವರ ಪರವಾದ ಅಂತರಂಗದ ದನಿ ಸದಾ ಇರಬೇಕು. ಮತ್ತೆ ಈ ಬಗೆಯ ಕಾಳಜಿ ಹೊಂದಿರುವವರು ಯಾವಾಗಲೂ ಕೂಡಿ ಪರಸ್ಪರ ವಿಚಾರ ವಿನಿಮಯದ ಮೂಲಕ ಒಟ್ಟಾಗಿ ಕೆಲಸ ಮಾಡಬೇಕು. ನಮ್ಮಲ್ಲಿ ಯಾವ ಕಾರಣಕ್ಕೂ ಅವಕಾಶವಾದಿತನ ಇರಬಾರದು, ಅಷ್ಟೆ. 

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.