ಪೋಸ್ಟ್‌ಗಳು

ಅಕ್ಟೋಬರ್ 26, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಹಜ ಕೃಷಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬಹುದು- ಕಡಿದಾಳು ಶಾಮಣ್ಣ

ಇಮೇಜ್
ಕಡಿದಾಳು ಶಾಮಣ್ಣನವರನ್ನು ಹತ್ತಿರದಿಂದ ನೋಡಿದ್ದು ಹತ್ತು ವರ್ಷದ ಹಿಂದೆ .  ಕುದುರೆಮುಖ ಗಣಿಗಾರಿಕೆಯ ವಿರುದ್ಧ ನಡೆಯುತ್ತಿದ್ದ ಜನಾಂದೋಲನದ ಸಂದರ್ಭದಲ್ಲಿ . ನಮ್ಮಂತಹ ಯುವಕರನ್ನು ತಮ್ಮ ನಡೆನುಡಿಗಳಿಂದ   ಪ್ರಭಾವಿಸಿ ಪ್ರೇರೇಪಿಸುತ್ತಿದ್ದ ಶಾಮಣ್ಣನವರನ್ನು   ದ ಸಂಡೆ ಇಂಡಿಯನ್ ಗಾಗಿ ಒಂದೆರಡು ಗಂಟೆಗಳ ಕಾಲ ಭಗವತಿಕೆರೆಯ ಮನೆಯಲ್ಲಿ ಸಂದರ್ಶಿಸುವ ಸಂದರ್ಭ  ಒ ದಗಿ ಬಂದಾಗ ಸಹಜವಾಗಿ ಸಂತೋಷವಾಗಿತ್ತು . ನಾನು ಮತ್ತು ಗೆಳೆಯ ಕಿರಣ್ ಮಾರಶೆಟ್ಟಿಹಳ್ಳಿ ಜೊತೆಗೂಡಿ ಹೋದೆವು . ನಿಜಕ್ಕೂ ಅದೊಂದು ಆಪ್ಯಾಯ ಮಾನವಾದ ಮಾತುಕತೆ . ಶ್ರೀದೇವಿ ಅಕ್ಕ ತೋರಿದ ಅಕ್ಕರೆ ಮರೆಯಲಾರದ್ದು . ಹೊತ್ತು ಸರಿದದ್ದೇ ತಿಳಿಯಯಲಿಲ್ಲ .  ಕೊನೆಗೆ ತಮ್ಮ ಸರೋದ್ ಹಾಗೂ ಹಾರ್ಮೋನಿಯಂ ನುಡಿಸಿ ನಮ್ಮ ಮನಸ್ಸನ್ನು ಮುದಗೊಳಿಸಿದರು ಶಾಮಣ್ಣ .  ಮತ್ತಷ್ಟು ಹೊತ್ತು ಅವರೊಂದಿಗೆ   ಕಳೆಯುವ ಮನಸ್ಸಾಗುತ್ತಿದ್ದರೂ ಕತ್ತಲುಗೂಡಿದ್ದರಿಂದ ಅವರಿಂದ ಬೀಳ್ಕೊಂಡೆವು . ಮರುದಿನ ಶ್ರೀದೇವಿ ಅಕ್ಕನಿಂದ ಒಂದು ಕರೆ ಬಂದಿತು . " ಹರ್ಷಾ , ನೆನ್ನೆ ತುಂಬಾ ಬೇಸರವಾಗಿಬಿಟ್ಟಿತು . ಎಷ್ಟೊಂದು    ಹಣ್ಣುಗಳಿದ್ದವು ಮನೆಯಲ್ಲಿ . ಆ ಗಡಿಬಿಡಿಯಲ್ಲಿ  ನಿಮಗೆ ಕೊಡಲು  ನೆನಪೇ ಆಗಲಿಲ್ಲ . ನೀವು ಹೋದ ಮೇಲೆ ನೆನಪಾಗಿ   ಇಬ್ಬರಿಗೂ ಬಹಳ...

"ಲೋಕಾಯತ ಜನಸಾಮಾನ್ಯರ ತತ್ವ ಪ್ರಣಾಳಕೆ"- ಡಾ. ಜಿ.ರಾಮಕೃಷ್ಣ

ಡಾ. ಜಿ. ರಾಮಕೃಷ್ಣ ಅವರು ನಮ್ಮ ನಾಡು ಕಂಡ ಅಪರೂಪದ ಚಿಂತಕ. ಜೀವಮಾನವಿಡೀ ಸಮಾಜಮುಖಿ ಚಿಂತನೆ ಹಾಗೂ ಕೃತಿಯಲ್ಲಿ ತೊಡಗಿರುವವವರು. ತತ್ವಶಾಸ್ತ್ರ ಕ್ಷೇತ್ರದಲ್ಲಿ ಕನ್ನಡ ಜನತೆಗೆ ಅಪಾರ ಕೊಡುಗೆ ಸಲ್ಲಿಸಿರುವ ಜಿಆರ್ ಎಡಪಂಥೀಯ ಚಿಂತನೆ ಚಿಂತನೆ, ಶಿಕ್ಷಣ, ಸಮಾಜ ಮುಂತಾದವುಗಳ ಬಗ್ಗೆ  ದ ಸಂಡೆ ಇಂಡಿಯನ್ ಅವರೊಂದಿಗೆ ನಡೆಸಿದ ಸಂದರ್ಶನ. ನೀವು ಎಡಪಂಥೀಯ ಚಿಂತನೆಯಲ್ಲಿ ನಂಬಿಕೆ ಇರುವವರು. ಆದರೆ ಸೋವಿಯತ್ ರಷ್ಯಾ ಹಾಗೂ ಚೀನಾಗಳಲ್ಲಿ ಹಿನ್ನಡೆಯಾದ ನಂತರ ಕುಸಿದ ನಂತರ ಕಮ್ಯುನಿಸಂಗೆ ಭವಿಷ್ಯವಿಲ್ಲ ಎನ್ನುವ ಮಾತಿದೆ.  ಇದಕ್ಕೆ ಏನು ಹೇಳುತ್ತ್ತೀರಿ? ಮಾರ್ಕ್ಸ್‌ವಾದಕ್ಕೆ ಭವಿಷ್ಯ ಇಲ್ಲ ಎಂದರೆ ಸಮಾಜದ ವಿಕಾಸಕ್ಕೆ ಭವಿಷ್ಯ ಇಲ್ಲ ಎಂದಾಗುತ್ತದೆ. ಸಮಾಜದ ವಿಕಾಸದ ನಿಯಮ ಏನು ಎನ್ನುವುದನ್ನು ಹೇಳುವುದೇ ಮಾರ್ಕ್ಸ್‌ವಾದ. ಸೋವಿಯತ್ ಒಕ್ಕೂಟದಲ್ಲಿ, ಚೀನಾದಲ್ಲಿ ಸಮಾಜವಾದ ಬಿದ್ದೊಡನೆ ಕಮ್ಯೂನಿಸಂ ಸತ್ತೇ ಹೋಯಿತು ಅನ್ನಲಾಗುವುದಿಲ್ಲ. ಸಮಾಜ ಮುಂದೆ ಚಲಿಸುತ್ತದೆಯೇ ಹೊರತು ಹಿಮ್ಮುಖವಾಗಿಲ್ಲ. ಮಾರ್ಕ್ಸ್ ಎನ್ನುವನು ಹುಟ್ಟಿದ್ದಕ್ಕೆ ಸಮಾಜ ಬದಲಾಗಿಲ್ಲ. ಸಮಾಜ ತನ್ನಂತೆ ತಾನು ವಿಕಾಸವಾಗುತ್ತದೆ. ಒಂದು ಶತಮಾನದಲ್ಲಿ ಆಗುವ ಏಳುಬೀಳುಗಳಿಂದ ಏನೂ ಆಗುವುದಿಲ್ಲ. ತಕ್ಷಣದಲ್ಲಿ ವಿಶ್ವಾಸ ಕುಂದಿರಬಹುದು, ಹಾಗಂತ ಮುಂದೆಂದೂ ಹೀಗೇ ಇರುತ್ತದೆಂದಲ್ಲ. ಮಾನವ ಜನಾಂಗದಲ್ಲಿನ ಆಂತರಿಕ ಸಂಘರ್ಷಗಳು ನಡೆಯುತ್ತಲೇ ಇವೆ. ಇಂದೇನೋ ಅಮೆರಿಕ ಸೈನಿಕವಾಗಿ ಬಲಿಷ್ಟವಾಗ...