ಪೋಸ್ಟ್‌ಗಳು

ಏಪ್ರಿಲ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೀರಣ್ಣ ಮಡಿವಾಳರ ಸಂದರ್ಶನ

ಇಮೇಜ್
ಕನ್ನಡದ  ಹೊಸತಲೆಮಾರಿನ ಸಂವೇದನಾಶೀಲ ಬರೆಹಗಾರರಲ್ಲಿ ಒಬ್ಬರಾದ ವೀರಣ್ಣ ಮಡಿವಾಳರ ಅವರ 'ನೆಲದ ಕರುಣೆಯ ದನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಗಾಗಿ ನಡೆಸಿದ ಸಂದರ್ಶನ. ನಿಮ್ಮ 'ನೆಲದ ಕರುಣೆಯ ದನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ    ಲಭಿಸಿರುವುದು ಏನೆನ್ನಿಸುತ್ತದೆ?  ಇದು ನನ್ನ ಮತ್ತು ನನ್ನ ತಲೆಮಾರಿನ ಅಭಿವ್ಯಕ್ತಿಗೆ ಸಂದ ಗೌರವವೆಂದು ಭಾವಿಸುತ್ತೇನೆ. ಈ ಕ್ಷಣ ಅಪ್ಪನ ಬೆವರು, ಅವ್ವನ ಕನಸು ನೆನಪಾಗುತ್ತಿವೆ. ಈ ಪುರಸ್ಕಾರವನ್ನು ಕನ್ನಡ ಕಾವ್ಯವನ್ನು ಮತ್ತಷ್ಟು ಜೀವಪರವಾಗಿಸಿದ ಕವಿ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ, ಹಾಗೂ ನಾನು ಎಷ್ಟು ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ ಪುಟ್ಟ ಪುಸ್ತಕಗಳೇ ಆಗಿರುವ ನನ್ನ ಗಾವಡ್ಯಾನವಾಡಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ. ವರ್ತಮಾನದ ಈ ಅವಘಡದ ಕಾಲದಲ್ಲಿ ಯಾವುದೇ ಸಂವೇದನಾಶೀಲ ಮನಸ್ಸು , ಯಾವುದೇ ಪುರಸ್ಕಾರವನ್ನು ಆನಂದಿಸುವ ಸ್ಥಿತಿಯಲ್ಲಿಲ್ಲ. ಈ ಕ್ಷಣ ನನ್ನ ಶಿಕ್ಷಕ ತರಬೇತಿಯ ಖಾಲಿ ಹೊಟ್ಟೆಯ ದಿನಗಳು ನೆನಪಾಗುತ್ತಿವೆ. ಈಗ ನನ್ನ ತುತ್ತಿಗೆ ದಾರಿಯಾಗಿರಬಹುದು, ಆದರೆ ಅದೆಷ್ಟು ಎಣಿಸಲಾಗದ ಹಸಿದ ಹೊಟ್ಟೆ ಚೀಲಗಳು ಕಣ್ಣಮುಂದೆಯೇ ಇವೆ. ಇಂದು ಕೇವಲ ಅನ್ನಕ್ಕಾಗಿ ಪರದಾಟ ಮಾತ್ರವಲ್ಲ, ಅದರಾಚೆಗೆ ಬದುಕಿಗೆ ಬೆಳಕಾಗುವ ವಿದ್ಯಾದೀಪದ ಹುಡುಕಾಟದ ದುರಂತವೂ ಇದೆ. ತೀರಾ ಹೊಟ್ಟೆ ಹಸಿದರೆ ಸೊಪ್ಪ...

'ಪ್ರಾಮಾಣಿಕತೆ ಎಂಬುದು ನಾವು ನಂಬಿದ ಮೌಲ್ಯದ ಪ್ರಶ್ನೆ’- ಚಿರಂಜೀವಿ ಸಿಂಗ್

ಇಮೇಜ್
ಚಿರಂಜೀವಿ ಸಿಂಗ್ ಅವರನ್ನು ನಾನು ಮೊದಲು ನೋಡಿದ್ದು, ಅವರ ಮಾತು ಕೇಳಿದ್ದು ಕೆಲವು ವರ್ಷಗಳ ಹಿಂದೆ, ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ.  'ಹಿಂಸೆಯ ಎಡ -ಬಲ’ ಎಂಬ ಕುರಿತ ಚರ್ಚೆಗಳನ್ನು ಅಂದು ಉದ್ಘಾಟಿಸಿದ್ದ ಚಿರಂಜೀವಿ ಸಿಂಗ್ ಮಾತುಗಳು ಎಲ್ಲರನ್ನು ಪ್ರಭಾವಿಸಿದ್ದವು. ನಂತರದಲ್ಲಿ ಅವರ ಕುರಿತು ಇತರೆ ಸ್ನೇಹಿತರು ಹೇಳಿದ್ದನ್ನು ಕೇಳಿದ್ದೇನೆ. ಅದರಲ್ಲೂ  ಹಿರಿಯ ಸ್ನೇಹಿತೆ ಹಾಗೂ ದಕ್ಷ ಅಧಿಕಾರಿ ವಿ. ಭಾಗ್ಯಲಕ್ಷ್ಮಿಯವರು ಚಿರಂಜೀವಿ ಸಿಂಗ್ ಅವರ ಬಗೆಗೆ ಅದೆಷ್ಟು ಭಾವುಕರಾಗಿ ಮಾತನಾಡಿದ್ದರಂದರೆ ಅವರ ಮಾತು ಕೇಳಿದಾಗಿನಿಂದಲೂ ನನಗೆ ಚಿರಂಜೀವಿ ಸಿಂಗ್ ಅವರ ಜೊತೆ ಸ್ವಲ್ಪ ಹೊತ್ತು ಕಳೆಯುವ ಇಚ್ಛೆಯಾಗಿತ್ತು.  ನಮ್ಮ ’ದ ಸಂಡೆ ಇಂಡಿಯನ್’ನ 'ಸಾಕ್ಷಿಪ್ರಜ್ಞೆ'ಗಾಗಿ ನಾನು ಮತ್ತು ನನ್ನ ಸಹೋದ್ಯೋಗಿ ಅಹೋಬಲಪತಿ ಚಿರಂಜೀವಿ ಸಿಂಗ್ ಅವರ ಮನೆಗೆ ಹೋಗಿ ಸಂದರ್ಶನ ನಡೆಸಿಕೊಂಡು ಬಂದೆವು. ಅವರ ಬದುಕಿನ ಸರಳತೆ, ನಡೆ ನುಡಿಯ ಮಿದುತನಗಳು   ನಿಜಕ್ಕೂ ನಮ್ಮನ್ನು ತೀರಾ ಕುಬ್ಜರನ್ನಾಗಿಸಿದವು. ಹೀಗೇ ಮಾತು ಆರಂಭಿಸಿ 'ಸರ್, ನೀವು ಅಷ್ಟು ದೂರದಿಂದ ಬಂದು ಇಲ್ಲಿನವರೇ ಆಗಿಬಿಟ್ಟಿದ್ದೀರಿ. ನೀವು ವಾಪಾಸು ಹೋಗುವ ಆಲೋಚನೆ ಇದೆಯಾ? ನಿಮ್ಮ ಹುಟ್ಟೂರು ಯಾವುದು' ಎಂದೆಲ್ಲಾ ಕೇಳಿದೆ. 'ನಾನು ಹುಟ್ಟಿದ್ದು ಈಗಿನ ಪಾಕಿಸ್ತಾನದಲ್ಲಿ. ಎಂದು ಹೇಳಿದ ಅವರ ಮುಖದಲ್ಲಿ ಒಂದು ಬಗೆಯ ನೋವಿನ ಭಾವ ಮೂಡಿತು. ಈ ಕುರಿತು ಮತ್ತೆ ...