ಪೋಸ್ಟ್‌ಗಳು

ಮೇ 31, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅವರಲ್ಲಿ ಸಿದ್ದರಾಮಯ್ಯ ಸಹ ಸಂಪೂರ್ಣ ವಿಶ್ವಾಸ ಇರಿಸಿದ್ದರು...

ಇಮೇಜ್
  ಡಾ. ವೆಂಕಟೇಶಯ್ಯ  ನೆಲ್ಲುಕುಂಟೆ ಮೊನ್ನೆ ಸೋಷಲ್ ಮೀಡಿಯಾದಲ್ಲಿ ಸಿ ಎಂ ಸಿದ್ದರಾಮಯ್ಯ ಅವರು ವಿದಾನಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕೊಂದು ವೈರಲ್ ಆಗಿದ್ದನ್ನು ಗಮನಿಸಿದೆ . ಬಿಜೆಪಿ ಸರ್ಕಾರ ತರಲು ಹೊರಟಿದ್ದ ಮತಾಂತರ ಕಾಯ್ದೆಯನ್ನು ವಿರೋಧಿಸುತ್ತಾ ಸಿದ್ದರಾಮಯ್ಯ ಅವರು ಬಿಡುತ್ತಿದ್ದ ಒಂದೊಂದೇ ಮಾತಿನ ಬಾಣಗಳನ್ನು ಕೇಳಿ ಅಂದಿನ ಬಿಜೆಪಿ ಸರ್ಕಾರದ ಮಹಾಮಹಿಮರೆಲ್ಲಾ ಗರಬಡಿದಂತೆ ಕುಳಿತ ದೃಶ್ಯ ಅದು . ʼ ರನ್ನ ಯಾವ ಧರ್ಮದಲ್ಲಿ ಹುಟ್ಟಿದ್ದ ? ಯಾವ ಧರ್ಮಕ್ಕೆ ಸೇರಿದ್ದ ? ಪಂಪ ಯಾವ ಜಾತಿ , ಸೇರಿದ್ದು ಯಾವ ಧರ್ಮ ? ಸಾಮ್ರಾಟ ಅಶೋಕ ಯಾವ ಧರ್ಮದಲ್ಲಿದ್ದ ಯಾವ ಧರ್ಮ ಸೇರಿದ್ದ ? ಅಂಬೇಡ್ಕರ್ ಯಾವ ಧರ್ಮಕ್ಕೆ ಸೇರಿದ್ದರು ? ನಮ್ಮ ದೇಶದಲ್ಲಿ ಯಾರೆಲ್ಲಾ ಯಾಕಾಗಿ ಮತಾಂತರ ಆಗಿದ್ದರು ?” ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ . ಆ ಬೆಂಕಿಯಂತ ಭಾಷಣವನ್ನು ಅಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಿದ್ಧಪಡಿಸಿದ್ದು ಬೇರಾರೂ ಅಲ್ಲ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಡಾ . ನೆಲ್ಲುಕುಂಟೆ ವೆಂಕಟೇಶಯ್ಯನವರು . ಸಿದ್ದರಾಮಯ್ಯನವರು ಎರಡನೇ ಸಲಕ್ಕೆ ಮುಖ್ಯಮಂತ್ರಿಯಾದ ನಂತರ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಡಾ . ನೆಲ್ಲುಕುಂಟೆ ವೆಂಕಟೇಶಯ್ಯ ಅವರನ್ನೇ ನೇಮಿಸಿಕೊಂಡಾಗ ಕೆಲವರಿಗೆ ಅಚ್ಚರಿಯಾಗಿದ್ದಿರಬಹುದು . ಆದರೆ ವೆಂಕಟೇಶಯ್ಯ ಅವರಿಗ...