ಡಿಸೆಂಬರ್ 18, 2010

ಎಂ ಎನ್ ಸಿಗಳ ತೆಕ್ಕೆಗೆ ಔಷಧ

 ಹೆಲ್ತ್ ಫಾರ್ Only rich!.


 ಒಂದು ದೇಶದಲ್ಲಿ ತಯಾರಿಸಲಾಗುವ  ಔಷಧ ಮಾತ್ರೆಗಳು ಆ ದೇಶದ ಜನರ  ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ,  ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ?? 
ಇದು ಸಧ್ಯದ  ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ  ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ..
ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ.
ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ  ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ  ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು.  ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ  ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ.
2105ರ ಸುಮಾರಿಗೆ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಒಂದು ವರ್ಷಕ್ಕೆ ನಡೆಯುವ ವಹಿವಾಟು   ಎಷ್ಟು ಗೊತ್ತೇ? ಬರೋಬ್ಬರಿ 90ಸಾವಿರ ಕೋಟಿ!
 ಈಗ್ಗೆ ಎರಡು ವರ್ಷಗಳ ಹಿಂದೆ ಅಮೆರಿಕದಿಂದ ಶುರುವಾಗಿ ಹಲವಾರು ದೇಶಗಳ ಆರ್ಥಿಕತೆಗಳೇ  ಕುಸಿಯತೊಡಗಿ ಅನೇಕ ಉದ್ದಿಮೆಗಳು ನಡುಗತೊಡಗಿದಾಗಲೂ ಭಾರತವನ್ನು ದೃಢವಾಗಿ ನಿಲ್ಲಿಸಿದ್ದು ಇಂತಹ ಉದ್ದಿಮೆಗಳೇ.
 ದುರಾದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ನಮ್ಮ ಔಷಧೋದ್ದಿಮೆಯ ದಿಕ್ಕು ಬೇರೆಯೇ ಹಾದಿ ಹಿಡಿದಿರುವುದನ್ನು ಇತ್ತೀಚಿನ ಬೆಳವಣಿಗೆಗಳು ತೋರಿಸಿವೆ.
ಸ್ವಾತಂತ್ರ್ಯಾನಂತರದಲ್ಲಿ  ನಮಗೆ ಬೇಕಾದ ಔಷಧಿ ಸರಕುಗಳಿಗಾಗಿ ನಾವು ಬೇರೆಯವರನ್ನೇ ಅವಲಂಬಿಸಬೆಕಾಗಿದ್ದುದನ್ನು ಕಂಡು ಅಂದಿನ ಸರ್ಕಾರಗಳು ನಮ್ಮವೇ ಆದ ಔಷಧಿ ಕಂಪನಿಗಳನ್ನು  ಪೋಷಿಸಿದವು. ಅದರಲ್ಲೂ 1970ರ ನಮ್ಮ ಪೇಟೆಂಟ್ ಕಾಯ್ದೆ ದೈತ್ಯ ಬಹುರಾಷ್ಟ್ರೀಯ ಕಂಪನಿಗಳ ಎದುರು ಭಾರತೀಯ ಕಂಪನಿಗಳು ಬೆಳೆಯಲು ಅನುವು ಮಾಡಿಕೊಟ್ಟಿತ್ತು. ಅದರ ಪ್ರಕಾರ ಯಾವುದೇ ಕಂಪನಿ ಒಂದು ಔಷಧಿ ಕಂಡು ಹಿಡಿದರೆ ಅದು ಅದನ್ನು ತಯಾರು ಮಾಡುವ `ಪ್ರಕ್ರಿಯೆ'ಗೆ(process) ಮಾತ್ರ ಪೇಟೆಂಟ್ ಮಾಡಿಸಿಕೊಳ್ಳಬಹುದಿತ್ತು. ಇದರ ಉಪಯೋಗವನ್ನು ಪಡೆದ ನಮ್ಮ ವಿಜ್ಞಾನಿಗಳು ಅದೇ ಔಷಧಿಯನ್ನು ನಮ್ಮದೇ ರೀತಿಯಲ್ಲಿ ಕಂಡುಹಿಡಿದ ಪರಿಣಾಮವಾಗಿ ಆ ಔಷಧಿಗಳು ನಮಗೆ ಅಗ್ಗದ ದರದಲ್ಲಿ ದೊರೆಯುವಂತಾದವು. ಇಂತಹ ನೂರಾರು ಬಗೆಯ ಔಷಧಿಗಳನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದು ನಮ್ಮ  ಔಷಧೋದ್ದಿಮೆ ಬೃಹತ್ ಗಾತ್ರದಲ್ಲಿ ಬೆಳೆಯಲು ಕಾರಣರಾಗಿದ್ದರು. ಇದರೊಂದಿಗೆ  ಭಾರತದ `1978ರ ಡ್ರಗ್ ಪಾಲಿಸಿ' ವಿದೇಶದ ಕಂಪನಿಗಳಿಗೆ ಔಷಧಿ ತಯಾರಿಕೆಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿಬಿಟ್ಟಿತ್ತು. ಹೀಗಾಗಿ ಔಷಧೋದ್ದಿಮೆಯಲ್ಲಿ ಶೇ75ರಷ್ಟಿದ್ದ ಎಂಎನ್ಸಿಗಳ ಪಾಲು ಕ್ರಮೇಣ ಕೇವಲ ಶೇ.25ಕ್ಕೆ ಇಳಿಯಿತು. ನಾವು ಸ್ವಾವಲಂಬಿಗಳಾಗಿದ್ದು  ಮಾತ್ರವಲ್ಲ ಇತರ ದೇಶಗಳಿಗೂ ರಫ್ತು ಮಾಡಬಲ್ಲಷ್ಟು ಸಾಮರ್ಥ್ಯವನ್ನೂ ಪಡೆದವು.


1995ರಲ್ಲಿ ವಿಶ್ವ ವ್ಯಾಪಾರ ಒಪ್ಪಂದಕ್ಕೆ (ಡಬ್ಲ್ಯೂಟಿಓ) ಸಹಿ ಹಾಕಿದ ತರುವಾಯ ನಮ್ಮ ದಿಕ್ಕು ಬೇರೆಯಾಯಿತು. ಹಲವಾರು ಕ್ಷೇತ್ರಗಳಲ್ಲಿ ನಮ್ಮ ನೀತಿಗಳನ್ನು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಯ್ತು. ಅಂತೆಯೇ ಅದು ತೀವ್ರವಾಗಿ ಪ್ರಭಾವಿಸಿದ ಮತ್ತೊಂದು ಕ್ಷೇತ್ರ ಔಷಧಿ ಉದ್ದಿಮೆ ಕೂಡಾ. ಅದು ಪೇಟೆಂಟ್ ನೀತಿಯ ಬದಲಾವಣೆಯ ಮೂಲಕ. ಅದರಂತೆ 2005ರಲ್ಲಿ ಆ ಕೆಲಸವೂ ಮುಗಿಯಿತು. ನಂತರ ಏನಿದ್ದರೂ `Product Patent'ನ ಆಳ್ವಿಕೆಯೇ. ಅಂದರೆ ಯಾವುದೇ ರೋಗಕ್ಕೆ ಅಮರಿಕದಲ್ಲೋ, ಜಪಾನ್ನಲ್ಲೋ ಒಂದು ದುಬಾರಿ ಔಷಧಿಯನ್ನು ಕಂಡು ಹಿಡಿದರೆ ಅದನ್ನು ನಮ್ಮದೇ `ಪ್ರಕ್ರಿಯೆ'ಯಲ್ಲಿ ನಾವು ಜನಸಾಮಾನ್ಯರಿಗೆ ಎಟಕುವಂತೆ ಕಡಿಮೆ ಬೆಲೆಯಲ್ಲಿ ನೀಡಲು  ಸಾಧ್ಯವಿಲ್ಲದಾಯ್ತು. ಏಕೆಂದರೆ ಈ ಡಬ್ಲೂಟಿಓ ಪ್ರೇರಿತ ಪೇಟೆಂಟ್ ತಿದ್ದುಪಡಿಯ ಪ್ರಕಾರ ಆ ಔಷಧಿಯ ಮರು ಉತ್ಪಾದನೆ ಮಾಡುವಂತೆಯೇ ಇಲ್ಲ! ಆ ಉತ್ಪನ್ನದ ಮೇಲೆಯೇ ಆ ದೈತ್ಯ ಕಂಪನಿ ಪೇಟೆಂಟ್ ಮಾಡಿಕೊಂಡುಬಿಟ್ಟಿರುತ್ತಲ್ಲ.  ಜೊತೆಗೆ ಈ ಮೊದಲು 354 ಔಷಧಿಗಳು `ಬೆಲೆ ನಿಯಂತ್ರಣ'ಕ್ಕೆ ಒಳಪಟ್ಟಿದ್ದರೆ ಕ್ರಮೇಣ ಈ ಮೂಗುದಾರವನ್ನೂ ಸಡಿಲ ಬಿಟ್ಟಿದ್ದಾಯಿತು. ಈಗ ಬೆಲೆನಿತಂತ್ರಣಕ್ಕೊಳಡುವ ಔಷಧಗಳು ಮೂರು ಮತ್ತೊಂದು. ಹೀಗಾಗಿ ನಾವು ಅನಿವಾರ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳು ಹೇಳಿದ ದುಬಾರಿ ಬೆಲೆಯನ್ನೇ ತೆರಬೇಕಾಗಿ  ಬಂದಿತು. ಅಷ್ಟು ಮಾತ್ರವಲ್ಲ. ಈಗ ಎಂಎನ್ಸಿಗಳು ನಮ್ಮ ಹೊಲಗಳನ್ನು ನುಗ್ಗಿ ಮನಸೋಯಿಚ್ಛೆ ಮೇಯಲು ನಡುವೆ ಯಾವ ಬೇಲಿಯೂ ಇಲ್ಲ. ಇದರಿಂದಾಗಿ ಮತ್ತಷ್ಟು ಪೋತ್ಸಾಹಗೊಂಡ ವಿದೇಶೀ ಕಂಪನಿಗಳು ಈಗ ನಮ್ಮ ಔಷಧೋದ್ಯಮವನ್ನು ಪೂರಾ ಆಪೋಷನ ತೆಗೆದುಕೊಳ್ಳ ಹತ್ತಿವೆ.
ಔಷಧ ಉದ್ದಿಮೆಯಲ್ಲಿರುವ ಎಂಎನ್ಸಿಗಳಿಗೂ ಸಹ ಇಂದು ಇಂದು ತಮ್ಮ ಮಾರುಕಟ್ಟೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕೆಂದರೆ ಅವು ಭಾರತೀಯ ಕಂಪನಿಗಳೆದುರು ತೀವ್ರ ಪೈಪೋಟಿಯನ್ನೆದುರುಸುವುದು ಅನಿವಾರ್ಯವಾಗಿದೆ. ಈ ಪೈಪೋಟಿಯಲ್ಲಿ ಸಹಜವಾಗಿ ಅವರ ಕೈಯೇ ಮೇಲಾಗುತ್ತಿದೆ. ಕಳೆದ ಮೂರು ವರ್ಷಗಳ ಬೆಳವಣಿಗೆಯನ್ನೇ ನೋಡಿ. ಇಲ್ಲಿ ಹಲವಾರು ಭಾರತೀಯ ಎಂಎನ್ಸಿಗಳೊಂದಿಗೆ ಸ್ಪರ್ಧಿಸಲಾಗದೇ ಕೊನೆಗೂ ತಮ್ಮನ್ನು ತಾವು ಎಂಎನ್ಸಿಗಳೊಂದಿಗೆ ವಿಲೀನಗೊಳಿಸಿಕೊಂಡಿವೆ ಇಲ್ಲವೇ ಪರಭಾರೆಯಾಗಿವೆ. ಉದಾಹರಣೆಗೆ ದೇಶದ ಅತಿದೊಡ್ಡ ಔಷಧಿ ತಯಾರಿಕಾ ಕಂಪನಿಯಾಗಿದ್ದ ರಾನ್ಬಾಕ್ಸಿ ಲ್ಯಾಬೊರೇಟರೀಸ್ ನ್ನು  2008ರ ಜುಲೈ ನಲ್ಲಿ ಜಪಾನ್ನ ದಯೀಚಿ ಸಂಕ್ಯೋ 20ಸಾವಿರ ಕೋಟಿ ರೂಗಳಿಗೆ ಕೊಂಡುಕೊಂಡಿತು. (ಬಾಕ್ಸ್ ನೋಡಿ.) ದೇಶದ ಮತ್ತೊಂದು ದೊಡ್ಡ ಕಂಪನಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಬ್ರಿಟನ್ನ ಗ್ಲಾಕ್ಸೋ ಸ್ಮಿತ್ಕೈನ್(ಜಿಎಸ್ಕೆ) ಕಂಪನಿಯೊಂದಿಗೆ ವಿಲೀನಗೊಂಡಿತು. ಕಳೆದ 2000ನೇ ಇಸವಿ ಏಪ್ರಿಲ್ ನಿಂದ  2008ರ ಡಿಸೆಂಬರ್ ನಡುವಿನ ಅವಧಿಯಲ್ಲಿ ನಮ್ಮ ದೇಶದ ಔಷಧಿ ಉದ್ದಮೆಯೊಂದರಲ್ಲೇ ಹರಿದು ಬಂದಿರುವ ಬಂಡವಾಳ  6750 ಕೋಟಿರೂ.ಗಿಂತ ಹೆಚ್ಚು ಎಂದು ಒಂದು ಅಂಕಿಂಶ ಹೇಳುತ್ತದೆ.

ಇದು ಹೀಗೇ ಮುಂದುವರೆದರೆ, ಮುಂದೊಮ್ಮೆ ಔಷದಿ ಉದ್ದಿಮೆಯ ದಿಕ್ಕನ್ನು ಎಂಎನ್ಸಿಗಳೇ ನಿರ್ಧರಿಸುವಂತಾದರೆ ಮಾತ್ರೆ, ಔಷಧಿಗಳ ಮೇಲೆ ಅವರು ವಿಧಿಸುವ ಬೆಲೆಯನ್ನು ಬಡಭಾರತೀಯರು ಭರಿಸಲು ಶಕ್ಯವಿದ್ದಾರೆಯೇ ಎಂಬುದೇ ಈಗ ಕೇಳಿಕೊಳ್ಳಬೆಕಾದ ಪ್ರಶ್ನೆ. ಈಗಾಗಲೇ ದೇಶದ ಶೇ65ರಷ್ಟು ಜನರಿಗೆ ತಮಗೆ ಬೇಕಾದ ಔಷಧೋಪಚಾರಗಳ ಲಭ್ಯತೆ ಇಲ್ಲದಿರುವುದು ಮತ್ತೊಂದು ವಾಸ್ತವ. ದೇಶದಲ್ಲಿ ಒಟ್ಟು ಆರೋಗ್ಯದ ಮೇಲೆ ಭರಿಸುವ ಒಟ್ಟಾರೆ ಖರ್ಚಿನಲ್ಲಿ  ಶೇ.75ರಷ್ಟನ್ನು ಜನರು ತಾವೇ ಭರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತಾವು ಆರೋಗ್ಯಕ್ಕೆ ಖರ್ಚು ಮಾಡುವ  ಹಣದಲ್ಲಿ ಶೇ.80 ರಷ್ಟನ್ನು ಮಾತ್ರೆ, ಇಂಜೆಕ್ಷನ್,  ಟಾನಿಕ್್ಗಳಿಗಾಗಿಯೇ ವ್ಯಯಿಸಬೇಕಾಗಿರುವಾಗ ಔಷಧಿ ಉದ್ದಿಮೆಯಲ್ಲಿನ ಈ ಹೊಸ ಬೆಳವಣಿಗೆ ಜನಸಾಮಾನ್ಯರ ಮೇಲೆ ಎಂತಹ ಪರಿಣಾಮ ಬೀರಬಹುದು?!




*****
ಭಾರತದ ದೊಡ್ಡ ಕಂಪನಿಗಳನ್ನು ನುಂಗಿದ ಎಂಎನ್ಸಿಗಳು
 ವರ್ಷ        ಭಾರತದ ಕಂ                ಎಂಎನ್ಸಿ                ಯಾವ ದೇಶದ್ದು

ಆ.2006    ಮ್ಯಾಟ್ರಿಕ್ಸ್ ಲ್ಯಾಬ್          ಮೈಲಾನ್ ಇಂಕ್      ಅಮೆರಿಕ
ಏ.2008    ಡಾಬರ್ ಫಾರ್ಮಾ           ಫ್ರೆಸೆನಿಯಸ್ ಕಬಿ     ಸಿಂಗಪುರ
ಜೂ.2008  ರಾನ್ಬಾಕ್ಸಿ ಲ್ಯಾಬ್             ದಯೀಚಿ ಸಂಕ್ಯೋ   ಜಪಾನ್
ಡಿ.2009     ಆರ್ಕಿಡ್ ಕೆಮಿಕಲ್ಸ್            ಹೊಸ್ಪಿರಾ              ಅಮೆರಿಕ
ಮೇ.2010  ಪಿರಾಮಲ್ ಹೆಲ್ತ್ ಕೇರ್      ಅಬ್ಬಾಟ್ ಲ್ಯಾಬೊರೆಟರಿ ಅಮೆರಿಕ

****

ಡಿಸೆಂಬರ್ 02, 2010

ಇರಬೇಕು ಇದ್ದರೆ ಇಂಥಾ ಶಾಲೆ





ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಸೇರಿಸೋದು ಇಂದು ಒಂದು ಬಗೆಯ ಮಾಸ್ ಹಿಸ್ಟೀರಿಯಾ ಆಗಿಬಿಟ್ಟಿದೆ. ಆದರೆ ಪ್ರಪಂಚದೆಲ್ಲೆಡೆ ಸಾಬೀತಾಗಿರುವ ವಾಸ್ತವ ಸತ್ಯ ಏನೆಂದರೆ ಯಾವುದೇ ಒಂದು ಮಗು ತನ್ನ ಪರಿಪೂರ್ಣ ಬೌದ್ಧಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗೋದು ಮಾತೃಭಾಷಾ ಶಿಕ್ಷಣದ ಮೂಲಕ ಮಾತ್ರ. ಪ್ರಪಂಚದಲ್ಲಿ ಯಾವ್ಯಾವ ದೇಶಗಳು ಮುಂದುವರೆದಿವೆಯೋ ಅಲ್ಲೆಲ್ಲಾ ಈ ವ್ಯವಸ್ಥೆ ಇದೆ. ಆದರೆ ಮೆಕಾಲೆಯ ವಾರಸುದಾರರಾಗಿರುವ ನಮ್ಮ ಆಳುವ ಮಂದಿಗೆ ಮಾತ್ರ ಈ ಸತ್ಯ ಅರಿವಾಗೋದೇ ಇಲ್ಲ. ಒಂದು ಕಡೆ ಶಿಕ್ಷಣವನ್ನು ದುಡ್ಡು ಮಾಡಲು ಒಂದು ದಂದೆಯಾಗಿ ಮಾತ್ರ ನೋಡುವ ಉದ್ಯಮಿಗಳು ನಾಯಿಕೊಡೆಗಳಂತೆ ಬೆಳೆಸುತ್ತಿರುವ ಕಾನ್ವೆಂಟುಗಳು ಇನ್ನೊಂದೆಡೆ ದರಿದ್ರ ಶಿಕ್ಷಕರಿಂದ ಮಕ್ಕಳ ಕ್ರಿಯೇಟಿವಿಟಿಯನ್ನೆಲ್ಲಾ ಹಾಳುಮಾಡುತ್ತಿರುವ ಸರ್ಕಾರಿ ಶಾಲೆಗಳು.


ಇದರೆ ನಡುವೆ ನಮ್ಮಲ್ಲೂ ಒಂದಷ್ಟು ಮಂದಿ ಎಚ್ಚೆತ್ತಿದ್ದಾರೆ. ಹೊಸ ಬಗೆಯ ಮಾದರಿಯ ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಕನ್ನಡ ಮಾದ್ಯಮ ಶಿಕ್ಷಣದ ಬಗ್ಗೆ ಗಂಟೆಗಟ್ಟಲೆ ಉಪನ್ಯಾಸ ನೀಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಕಳುಹಿಸುವ ಸೋಗಲಾಡಿ ಮಂದಿಯಲ್ಲ ಇವರು... ಶಿಕ್ಷಣದ ವ್ಯಾಪಾರ ಮಾಡಲು ಇಳಿದವರೂ ಅಲ್ಲ... ಕನ್ನಡ ಮಿಡಿಯಂ ಶಾಲೆ ನಡೆಸುತ್ತಿರುವ ತಮ್ಮನ್ನು ಯಾರಾದರೂ ಗುರುತಿಸಬೇಕು, ಪ್ರಶಸ್ತಿ, ಪದವಿ ನೀಡಬೇಕು ಎಂಬ ಹಪಹಪಿಕೆಯೂ ಇವರಿಗಿಲ್ಲ. ಆದರೆ ಈ ನಾಡಿನ ಮುಂದಿನ ಪ್ರಜೆಗಳಾಗಲಿರುವ ಮಕ್ಕಳ ಬಗ್ಗೆ ಅಗಾಧವಾದ ಪ್ರೀತಿ, ಅವರ ಮೂಲಕವೇ ಈ ನಾಡಿನ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ ಎಂಬ ನಂಬಿಕೆ ಇವರಿಗಿದೆ. ಇಂಗ್ಲಿಷ್ ಕಾನ್ವೆಂಟ್ ಸೇರಿಸುವ ಹಿಸ್ಟೀರಿಯಾಗೆ ಬಲಿಯಾಗದೇ ಕನ್ನಡ ಶಾಲೆಗಳನ್ನು ಕರ್ತವ್ಯವೆಂಬಂತೆ ಮುನ್ನಡೆಸುತ್ತಿದ್ದಾರೆ. ಇಂತಹ ನಾಲ್ಕು ಶಾಲೆಗಳನ್ನು ಸುತ್ತಿ ಬರೋಣ ಬನ್ನಿ...
ಇಂದು ಎಷ್ಟೋ ಶಾಲೆಗಳು ಮಕ್ಕಳ ಪಾಲಿಗೆ ಸಕ್ಷಾತ್ ನರಕದ ಕೂಪಗಳು. ಅಲ್ಲಿ ಮಕ್ಕಳು ಬಾಲ್ಯದ ಸವಿಯುಣ್ಣದೆ, ಪ್ರತಿ ಕ್ಷಣವೂ ಹೋಂವರ್ಕ್ ಟ್ಯೂಷನ್, ಎಕ್ಸಾಮ್, ಕಾಂಪಿಟೇಷನ್ ಹೀಗೆ ಸರಣಿ ಒತ್ತಡದಲ್ಲಿ ತೊಳಲಾಡುತ್ತಾ ಮುಖದ ಮೇಲೆ ಕೃತಕ ನಗುವನ್ನೂ, ಎದೆಯಲ್ಲಿ ದುಗುಡವನ್ನೂ ತುಂಬಿಕೊಂಡು ಒದ್ದಾಡುತ್ತಿರುವ ಹೊತ್ತಿನಲ್ಲೇ ಸದ್ದಿಲ್ಲದೇ ವಿದ್ಯಾನಾದ ಹರಿಸುತ್ತಿರುವ ಈ ಕನ್ನಡ ಶಾಲೆಗಳು ಮಕ್ಕಳ ಮುಖದಲ್ಲಿ ಸಹಜ ನಗು ಅರಳಲು ಕಾರಣವಾಗುತ್ತಿವೆ.





ಇವು ಬರೀ ಕನ್ನಡ ಮೀಡಿಯಂ ಶಾಲೆಗಲ್ಲ, ವೈಜ್ಞಾನಿಕ ಶಿಕ್ಷಣ ಕಲಿಸುವ ಶಾಲೆಗಳು. ಸಮಾಜದ ಎಲ್ಲಾ ಸ್ತರಗಳಿಂದಲೂ ಬಂದು ಮಾತೃಭಾಷೆ ಕನ್ನಡದಲ್ಲಿ ಜ್ಞಾನ ಸಂಪಾದನೆಯ ನಿಜವಾದ ಆನಂದವನ್ನು ಅನುಭವಿಸುತ್ತಿರುವ ಈ ಮಕ್ಕಳನ್ನೊಮ್ಮೆ ನೀವು ನೋಡಲೇಬೇಕು. ಇಂದಿನ ವ್ಯಾವಹಾರಿಕ ಬದುಕಿಗೆ ಬೇಕಾದ ಇಂಗ್ಲಿಷನ್ನೂ ಯಾವ ಒತ್ತಡವೂ ಇಲ್ಲದೇ ಕಲಿತು ಇತರೆಲ್ಲರಿಗೂ ಸಮಾನರಾಗಿಯೇ ಓಡುತ್ತಿರುವ ಪರಿ ಕಂಡು ಸ್ಪೂರ್ತಿ ಪಡೆಯಬೇಕು. ಸಾಧ್ಯವಾದರೆ ಅಲ್ಲಿ ಆಟಪಾಟಗಳಲ್ಲಿ ತಮ್ಮನ್ನೇ ತಾವು ಮರೆತಿರುವ ಮಕ್ಕಳ ಜೊತೆಗೆ ಕೊಂಚ ಸಮಯ ಕಳೆದು ಬರಬೇಕು. ಮಾತ್ರವಲ್ಲ ಈ ಶಾಲೆಗಳನ್ನು ನಡೆಸಲು ತಮ್ಮ ಬದುಕನ್ನು ಮುಡುಪಾಗಿಟ್ಟವರಿಗೊಮ್ಮೆ ಸೆಲ್ಯೂಟ್ ಹೊಡೆಯಬೇಕು!

`ತಕ್ಷಶಿಲೆ'ಯಂತಿಪ್ಪ `ಸ್ನೇಹ ಶಿಲೆ'
`ಒಂದೇ ಮಾತಲ್ಲಿ ಹೇಳಬೇಕೆಂದರೆ `ಇಟ್ಸ್ ನಾಟ್ ಮಿಯರ್ ಎ ಸ್ಕೂಲ್. ಇಟ್ಸ್ ರಿಯಲಿ ಎ ಹೆವನ್ ಆನ್ ಅರ್ಥ್. ಈ ಕ್ಷಣದಲ್ಲೂ ಕೂಡ ನಾನು ಅದನ್ನ ಮಿಸ್ ಮಾಡಿಕೊಳ್ತಾ ಇದ್ದೀನಿ, ಬೇರೆಲ್ಲೂ ಆ ಅನುಭವ ಸಿಗಲು ಸಾಧ್ಯವೇ ಇಲ್ಲ' ಎಂದು ಈಗ ಮಂಗಳೂರಿನಲ್ಲಿ ಬಿಎಸ್ಸಿ ಓದುತ್ತಿರುವ ಚೈತ್ರಾ ಭಾವಪರವಶತೆಯಿಂದ ಹೇಳುತ್ತಾರೆ.
ಆಕೆ ಹೇಳುವುದು ತಾನು ಹೈಸ್ಕೂಲ್ ಓದಿದ ದಕ್ಷಿಣ ಕನ್ನಡಜಿಲ್ಲೆಯ ಸುಳ್ಯದಲ್ಲಿರುವ `ಸ್ನೇಹಶಿಲಾ' ಶಾಲೆಯ ಬಗ್ಗೆ.


1996ರಲ್ಲಿಯೇ ಈ ಶಾಲೆಯನ್ನು ಚಂದ್ರಶೇಖರ್ ದಾಮ್ಲೆ ಆರಂಭಿಸಿದಾಗ ಅವರಿಗೆ ಅಪಾರ ವಿಶ್ವಾಸವಿತ್ತು. ಆದರೆ ಕನ್ನಡ ಮೀಡಿಯಂ ಶಾಲೆಯನ್ನು ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ಕೇಳಿದಾಗ ಇವರನ್ನು ಸಂಶಯದಿಂದ ನೋಡಿದವರೇ ಹೆಚ್ಚು. ಹೀಗಾಗಿ ಅನುಮತಿ ಪಡೆಯಲೆಂದೇ ಹತ್ತಾರು ಬಾರಿ ಬೆಂಗಳೂರಿಗೆ ಅಲೆಯಬೇಕಾಯಿತು.
ಅದೇ ಸುಳ್ಯ ಪೇಟೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡಿ ಕನ್ನಡ ಮೀಡಿಯಂ ಅನುಮತಿ ಪಡೆದು ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ನಡೆಸುತ್ತಾ ಪ್ರತಿವರ್ಷ ಲಕ್ಷಾಂತರ ರೂಪಾಯಿ ಸಂಪಾದಿಸಿ ಶಿಕ್ಷಣದ ಬಿಸಿನೆಸ್ನ್ನು ಜೋರಾಗಿಯೇ ನಡೆಸುತ್ತಿರುವವರ ನಡುವೆ ಚಂದ್ರಶೇಖರ್ ದಾಮ್ಲೆ ಮತ್ತು ಜಯಲಕ್ಷ್ಮಿದಾಮ್ಲೆ ದಂಪತಿ ಬೇರೆಯದೇ ದಾರಿ ಹಿಡಿದಿದ್ದರು. ಅವರ ಅಚಲ ವಿಶ್ವಾಸ, ಸೇವಾ ನಿಷ್ಠೆ ಇಂದು ಅಲ್ಲೊಂದು ಸೊಬಗಿನ ಸ್ನೇಹಲೋಕವನ್ನೇ ಸೃಷ್ಟಿಸಿದೆ.
ಇಂದು `ಸ್ನೇಹಶಿಲಾ' ಶಾಲೆಯ ಆವರಣದಲ್ಲಿ `ಬರಹದ ಮನೆ, ಕಲಾಶಾಲೆ, ಎಲ್.ಸಿ.ಡಿ ಹೋಂ, ಬಯಲು ರಂಗ ಮಂದಿರಗಳು ತಲೆಎತ್ತಿವೆ. ಇವು ಕಲಿಯುತ್ತಿರುವ ಚಿಣ್ಣರಿಗೆ ನೀಡುತ್ತಿರುವ ಅನುಭವ ಅನನ್ಯ. ಇಲ್ಲಿನ ಔಷಧಿ ವನ ಹಾಗೂ ಶಾಲೆಯ ವತಿಯಿಂದಲೇ ಬೆಳೆಸಿರುವ ಅರಣ್ಯ ಮಕ್ಕಳಲ್ಲಿ ನಿಸರ್ಗ ಪ್ರೀತಿಯನ್ನು ಹೆಚ್ಚಿಸಿದೆ. `ಇಲ್ಲಿ ಕಲಿಯಲು ಬರುವ ಪ್ರತಿ ಮಗುವೂ ತನ್ನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ತಾನೇನೂ ಯಾರಿಗೂ ಕಡಿಮೆಯಿಲ್ಲ' ಎಂಬ ಆತ್ಮಾಭಿಮಾನ ಬೆಳೆಸಿಕೊಳ್ಳುವಂತೆ ಮಾಡುವಲ್ಲಿ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಶ್ರಮ ವಿಶೇಷವಾಗಿ ಎದ್ದು ಕಾಣುತ್ತದೆ.


ಶಾಲಾ ಕಾರ್ಯಕ್ರಮಗಳಲ್ಲಿ ಸಹ ಇಲ್ಲಿ ಮಕ್ಕಳ ಹಾಗೂ ಪೋಷಕ ಕೇಂದ್ರಿತವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಎಲ್ಲರಿಗೂ ಬೋರು ಹೊಡೆಸುವ `ಗಣ್ಯರ' ಭಾಷಣಗಳನ್ನು ಇಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.
`ನಮ್ಮ ಮಕ್ಕಳು ಇಲ್ಲಿ ಯಾಂತ್ರಿಕವಾಗಿ ಏನನ್ನೂ ಕಲಿಯುತ್ತಿಲ್ಲ. ಹೆಚ್ಚಿನದಾಗಿ ಉತ್ತಮ ಸಂಸ್ಕಾರವನ್ನು ಇಲ್ಲಿ ಮೈಗೂಡಿಸಿಕೊಳ್ಳುತ್ತಿರವ ಬಗ್ಗೆ ನಮಗೆ ಹೆಮ್ಮೆ ಇದೆ' ಎನ್ನುತ್ತಾರೆ ತಮ್ಮ ಇಬ್ಬರು ಮಕ್ಕಳನ್ನು (ಸಿಂಚನ, ಸುದೀಪ್) ಬಿಟ್ಟಿರುವ ಡಾ.ವಿದ್ಯಾ.
ಸ್ನೇಹಶಿಲೆಯ ಮಕ್ಕಳು ತಾವೇ ಬರೆದ ಚುಟುಕು, ಕತೆ, ಕವನ ತುಂಬಿದ `ಅಂಕುರ' ಹಾಗೂ `ಇಂಚರ' ಎಂಬ ಕೈಬರಹದ ಪತ್ರಿಕೆಗಳನ್ನು ಹೊರ ತರುತ್ತಿದ್ದಾರೆ. `ನನಗೂ ಕತೆ, ಕವಿತೆ ಬರೆಯಲು ಬರುತ್ತೆ ಅಂತ ನನಗೆ ಗೊತ್ತಾಗಿದ್ದೆ ನಾನು ಏಳನೆಯ ತರಗತಿಗೆ ಇಲ್ಲಿ ಸೇರಿದ ಮೇಲೇನೇ. ನಂತರ ಎಸ್ಎಸ್ಎಲ್ಸಿಯಲ್ಲಿರುವಾಗ ನಾನೂ ಹಾಗೂ ನನ್ನ ಇತರ ಮೂವರು ಗೆಳತಿಯರೂ ಸೇರಿ ನಾವೇ ಬರೆದಿದ್ದ ಬರಹಗಳ ಒಂದು ಸಂಕಲನ 'ಚತುರ್ಧ್ವನಿ' ಯನ್ನು ಹೊರತಂದಿದ್ದು ನನ್ನ ಜೀವನದ ಮರೆಯಲಾಗದ ಹೆಮ್ಮೆಯ ಅನುಭವ' ಎನ್ನುತ್ತಾರೆ ಚೈತ್ರಾ. ಬೇರಾವ ಶಾಲೆ ಈ ಮಟ್ಟಿಗಿನ ಶಿಕ್ಷಣ ನೀಡೀತು?

`ಅರಿವು' ಎಂಬ ಕಿನ್ನರ ಲೋಕ
ವೃತ್ತಿಯಲ್ಲಿ ವೈದ್ಯರಾಗಿ ಖ್ಯಾತಿಗಳಿಸಿರುವ ಮೈಸೂರಿನ ಡಾ.ಮನೋಹರ್ ಹಾಗೂ ಡಾ.ಸುದರ್ಶನ್ ಮತ್ತು ಅವರ ಆಪ್ತ ಬಳಗದವರಿಗೆಲ್ಲಾ ನಮ್ಮ ಈ ಶಿಕ್ಷಣ ವ್ಯಸಸ್ಥೆಯನ್ನು ನೋಡಿದಾಗಲೆಲ್ಲಾ ಇಲ್ಲಿ ಎಲ್ಲವೂ ಸರಿಯಿಲ್ಲ ಎನ್ನಿಸುತ್ತಿತ್ತು. ಒಂದೆಡೆ ನಾಯಿಕೊಡೆಗಳಂತೆ ಬೆಳೆಯುತ್ತಿರುವ ಇಂಗ್ಲಿಷ್ ಕಾನ್ವೆಂಟ್ಗಳು ಮಕ್ಕಳನ್ನು ಗಿಳಿಪಾಠ ಹೇಳುವಂತೆ ಮಾಡುತ್ತಿದ್ದರೆ ಇನ್ನೊಂದೆಡೆ ಅವರನ್ನು ನಿರುತ್ಸಾಹಿಗಳನ್ನಾಗಿ ಮಾಡಿ ಅವರ ಕ್ರಿಯೇಟಿವಿಟಿಗೆ ಅವಕಾಶವನ್ನೇ ನೀಡದ ಸರ್ಕಾರಿ ಶಾಲೆಗಳು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಲಷ್ಟೇ ಇಲ್ಲದ ಗಿಮಿಕ್, ಸಲ್ಲದ ಪಾಲಿಟಿಕ್ಸ್ ಮಾಡುವ ಕೆಲವು ಹಾಗೂ ಕ್ಲಾಸ್ ರೂಂಗಳಲ್ಲಿ ನಿದ್ದೆ ಹೊಡೆಯುವ ಹಲವು ಮೇಸ್ಟ್ರುಗಳು. ಹಾಗಂತ ಯಾರ ಬಳಿ ಅಲವತ್ತುಕೊಳ್ಳುವುದು, ಸರ್ಕಾರಕ್ಕೆ ಬೈಯುತ್ತಾ ಕುಳಿತರೆ ಆಡಳಿತದಲ್ಲಿರುವವರಿಗೆ ಅರ್ಥ ಆಗುವುದುಂಟೇ, ಹಾಗೆಂದು ಇವರ್ಯಾರೂ ಸುಮ್ಮನೆ ಕೂರಲಿಲ್ಲ.

ಮೈಸೂರಿನ ಸುಮಾರು 40 ಮಂದಿ ಪೋಷಕರು, ಶಿಕ್ಷಣಪ್ರೇಮಿಗಳು ಒಂದೆಡೆ ಕಲೆತು ಒಂದು ನಿರ್ಧಾರಕ್ಕೆ ಬಂದ ಪರಿಣಾಮ 3 ವರ್ಷಗಳ ಹಿಂದೆ ಆರಂಭವಾದ ಅರಿವು ವಿದ್ಯಾ ಸಂಸ್ಥೆ. ಸಿಟಿಯಿಂದ 9 ಕಿ.ಮೀ. ದೂರದ ಲಿಂಗಾಂಭುದಿ ಪಾಳ್ಯದ ಹಸಿರಿನ ಗಿಡಮರಗಳ ನಡುವೆ ಶಾಲೆ ನಿರ್ಮಾಣವಾಗಿದೆ. ಇಲ್ಲಿ ಮಕ್ಕಳಿಗೆ ಹೇಗೆ ಕಲಿಸಬೇಕು, ಏನು ಕಲಿಸಬೇಕು ಎಂಬುದೆಲ್ಲವನ್ನೂ ಈ ನಲವತ್ತು ಜನರ ಸಮಿತಿಯೇ ನಿರ್ಧರಿಸುತ್ತದೆ.
ಪೂಣರ್ಾವಧಿ ಶಿಕ್ಷಕರಾಗಿರುವುದು ನಾಲ್ಕೇ ಜನರಾದರೂ ಸಂಪನ್ಮೂಲ ವ್ಯಕ್ತಿಗಳಾಗಿ ಬರುವ ಹಲವಾರು ಪ್ರತಿಭಾನ್ವಿತರು ಈ ಮಕ್ಕಳೊಂದಿಗೆ ಬೆರೆತು ಚಿಣ್ಣರ ಅರಿವಿನ ಪರಿಧಿ ವಿಸ್ತರಿಸಿ ಹೋಗುವ ಪರಿ ನಿಜಕ್ಕೂ ಅದ್ಭುತ.
`ನನ್ನ ಮಗಳಿಗೆ ನಾನು ಚಿಕ್ಕಂದಿನಲ್ಲಿ ಹೇಗೆ ಕಲಿತಿದ್ದೆನೋ ಅದೇ ಬಗೆಯ ವಾತಾವರಣ ಇರಬೇಕೆಂಬುದು ನನ್ನ ಬಯಕೆಯಾಗಿತ್ತು. ಅಕೆಯನ್ನು ಎರಡನೇ ತರಗತಿವರೆಗೆ ಸಿಬಿಎಸ್ಸಿ ಸಿಲೆಬಸ್ ಇರುವ ಬೇರೊಂದು ಇಂಗ್ಲಿಷ್ ಕಾನ್ವೆಂಟಿಗೆ ಸೇರಿಸಿದ್ದೆ. ಆದರೆ ಮನಸ್ಸಿಗೆ ಯಾಕೋ ಕಸಿವಿಸಿಯಾಗತೊಡಗಿ ಇಲ್ಲಿಗೆ ಮತ್ತೆ ಎರಡನೇ ತರಗತಿಗೇ ಸೇರಿಸಿದ್ದೇನೆ' ಎನ್ನುತ್ತಾರೆ ಇಂಜಿನಿಯರ್ ಆಗಿರುವ ನಾರಾಯಣ ಸ್ವಾಮಿ.
ಈ ಶಾಲೆ ಸೇರಿದ ಮೆಲೆ ಅವರ ಮಗಳು ನಮಿತಾ ಬಾಲ್ಯವನ್ನು ಮರಳಿ ಪಡೆದಿದ್ದಾಳೆ. "ಹಿಂದಿನ ಶಾಲೆಯಲ್ಲಿದ್ದಾಗ ಏನನ್ನೂ ಕೇಳದಿದ್ದ ನನ್ನ ಮಗಳು ಈಗ ಸಿಕ್ಕಾ ಪಟ್ಟೆ ಪ್ರಶ್ನೆ ಕೇಳುತ್ತಾ, ತನಗೆ ಗೊತ್ತಿಲ್ಲದಿರುವುದನ್ನೆಲ್ಲಾ ಕುತೂಹಲದಿಂದ ಕಲಿಯುತ್ತಾ ಸಾಗುತ್ತಿರುವ ರೀತಿ ನಿಜಕ್ಕೂ ನನಗೆ ತೃಪ್ತಿ ನೀಡಿದೆ" ಎಂದೆನ್ನುತ್ತಾರವರು. ಇಲ್ಲಿ ಮಕ್ಕಳಿಗೆ ಯಾವ ಒತ್ತಡವೂ ಆಗದಂತೆ ಎಲ್ಲವನ್ನೂ ಪ್ರಾಕ್ಟಿಕಲ್ ಆಗಿಯೇ, ಅವು ಯೋಚಿಸುವ ಭಾಷೆಯಲ್ಲಿಯೇ ಕಲಿಸುವುದರಿಂದ ಅವರು ಪ್ರತಿಯೊಂದನ್ನೂ ಬಹುಬೆಗನೇ ಅರ್ಥೈಸಿಕೊಳ್ಳುತ್ತಾರೆ.
ಇಲ್ಲಿ ಯಾವ ಮಗುವೂ ಎನನ್ನೂ ಕಷ್ಟ ಪಟ್ಟು ಕಲಿಯುವುದಿಲ್ಲ. ಬದಲಿಗೆ ಪ್ರತಿಯೊಂದನ್ನೂ ಇಷ್ಟ ಪಟ್ಟು ಕಲಿಯುವಂತೆ ಮಾಡಲಾಗುತ್ತಿದೆ. ಅಸಲಿಗೆ ಶಾಲೆ ಅಥವಾ ಒಂದು ಶಿಕ್ಷಣ ಪದ್ಧತಿ ಮಾಡಬೇಕಿರುವುದು ಇದನ್ನೇ ಅಲ್ಲವೇ? ಮೊದಲು ಬೇರೊಂದು ಶಾಲೆಯಲ್ಲಿ ಕೆಲಸ ಮಾಡಿ ಈಗ ಇಲ್ಲಿ ಮಕ್ಕಳಿಗೆ ಕಲಿಸುತ್ತಿರುವ ಮಂಜುಳಾ `ಈ ಮಕ್ಕಳಿಗೆ ಕಲಿಸುವುದಕ್ಕಿಂತ ಅವರಂದಲೇ ಬಹಳಷ್ಟನ್ನು ಕಲಿಯಲಿಕ್ಕಿದೆ ಎಂಬುದು ಅರ್ಥವಾಗಿದೆ' ಎನ್ನುತ್ತಾರೆ.
`ನನ್ನ ಮಗ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು, ಸರಾಗವಾಗಿ ಬರೆಯುವುದನ್ನು ಕಂಡಾಗ ಆಗುವ ಸಂತೋಷ ಬೇರೇನೇ' ಎಂದು ಬೀಗುತ್ತಾರೆ ಎರಡನೇ ತರಗತಿಯಲ್ಲಿ ಓದುವ ಸುಮುಖನ ತಂದೆ, ವೃತಿಯಲ್ಲಿ ಕಲಾವಿದ ಸಚ್ಚು. ಅರಿವು ಶಾಲೆಯಲ್ಲಿ ಎಲ್ಲಾ ಮಕ್ಕಳೂ ಅದ್ಭುತವಾಗಿ ಡ್ರಾಯಿಂಗ್ ಮಾಡುತ್ತಾರೆ, ಮೀನಿನಂತೆ ಈಜುವುದನ್ನೂ ಕಲಿತಿದ್ದಾರೆ. ಮಾತ್ರವಲ್ಲ ಈ ಮಕ್ಕಳ ದೆಸೆಯಿಂದ ಪೋಷಕರೂ ಈಜು ಕಲಿತ್ತಿದ್ದಾರೆ. ಪೋಷಕರೇ ಸೇರಿಕೊಂಡು ವಾಹನ ವ್ಯವಸ್ಥೆಯನ್ನು ಮಾಡಿ ಸಿಟಿಯಿಂದ ದೂರದಲ್ಲಿರುವ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದು ಅಷ್ಟು ಸುಲಭವಲ್ಲವಾದರೂ ನಿಜವಾದ ಶಿಕ್ಷಣದೆಡೆಗಿನ ಅವರ ತುಡಿತ ಅದನ್ನು ಸಾಧ್ಯ ಮಾಡಿದೆ.

`ಬಾಲಬಳಗ'ದ ಮೋಡಿ






`ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ, ಮನಶಾಸ್ತ್ರಜ್ಞರೂ ಹೇಳಿರುವುದು ಒಂದೇ ವಿಚಾರ. ಅದೆಂದರೆ `ಪ್ರತಿ ಮಗುವೂ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆಯಬೇಕಾದದ್ದು ಮಾತೃಭಾಷೆಯಲ್ಲಿಯೇ ಎಂದು. ಅದು ಮಾತ್ರವೆ ಮಗುವಿನ ಕ್ರಿಯಾಶೀಲತೆಯನ್ನು ವಿಸ್ತರಿಸ ಬಲ್ಲದು ಆ ಮಗುವಿನ ಮನವನ್ನು ಅರಳಿಸಬಲ್ಲದು. ಕಲಿಕೆಯ ನಿಜವಾದ ಸ್ವಾದವನ್ನು ಮಗುವಿಗೆ ನೀಡಬಲ್ಲದು.'ಇದನ್ನು ಬಲವಾಗಿ ನಂಬಿದ್ದ ನಾನು ನನ್ನ ಮಗ ಚೈತನ್ಯ ಷರೀಫ್ ಮತ್ತು ಇನ್ನಿಬ್ಬರು ಮಕ್ಕಳನ್ನಿಟ್ಟುಕೊಂಡು 96ರಲ್ಲಿ ನನ್ನ ಮನೆಯ ಒಂದು ಕೊಠಡಿಯಲ್ಲಿಯೇ ಈ ಶಾಲೆಯನ್ನು ಆರಂಭಿಸಿದ್ದೆ'
`ಆಗ ಇದಕ್ಕೆ ಮೊದಲ ಟೀಚರ್ ಆಗಿ ಬಂದವರು ನೀನಾಸಂ ತರಬೇತಿ ಪಡೆದಿದ್ದ ರಜನಿ ಗರುಡ...
' ಹೀಗೆ ತಾವು `ಬಾಲಬಳಗ' ಶಾಲೆಯನ್ನು ಆರಂಭಿಸಿದ ಸಂದರ್ಭ ನೆನೆಸಿಕೊಳ್ಳುವ ಡಾ.ಸಂಜೀವ್ ಕುಲಕರ್ಣಿ ಇಂದು ಧಾರವಾಡದಲ್ಲಿ ಮನೆಮಾತಾಗಿದ್ದಾರೆ.
`ಮಕ್ಕಳಿಗೆ ಕನ್ನಡದ ಅಡಿಪಾಯ ಸಿಗಬೇಕು, ಇಂಗ್ಲಿಷಿನ ಬಗ್ಗೆ ಆತ್ಮ ವಿಶ್ವಾಸ ಮೂಡಬೇಕು. ಮುಂದೆ ಅವರು ಸಮಾಜಮುಖಿಯಾಗಿ, ಮತ್ತೆ ತಮ್ಮೂರು, ಹಳ್ಳಿಗಳತ್ತ ಮುಖ ಮಾಡಿ ಬದುಕಬೇಕು' ಇದು ಸಂಜೀವ್ ಕುಲಕರ್ಣಿಯವರು `ಬಾಲ ಬಳಗದ' ಮೂಲಕ ಜಾರಿಗೊಳಿಸುತ್ತಿರುವ ಶಿಕ್ಷಣ ತತ್ವ.

ಇಂದು ಕರ್ನಾಟಕ ವಿಶ್ವ ವಿದ್ಯಾಲಯದ ಸನಿಹದಲ್ಲೆ ವಿಶಾಲವಾದ ಜಾಗದಲ್ಲಿ ಸ್ಥಾಪಿಸಲಾಗಿರುವ ಬಾಲಬಳಗದಲ್ಲಿ ಮುನ್ನೂರು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯನ್ನು ಕಟ್ಟಿ ಬೆಳೆಸಿರುವುದು ಪೂರ್ತಿಯಾಗಿ ಇಲ್ಲಿಗೆ ಬರುವ ಮಕ್ಕಳ ಪೋಷಕರೇ. ಈಗ ಬಾಲಬಳಗದ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಿತ್ತಿರುವವರು ಕುಲಕರ್ಣಿಯವರ ಪತ್ನಿ ಪ್ರತಿಭಾ. ಇಲ್ಲಿ ಸಹ ಪ್ರತಿ ಹಂತದಲ್ಲೂ ಮಗುಸ್ನೇಹಿ, ನಿಸರ್ಗಸ್ನೇಹಿ ವಾತಾವರಣವಿದೆ.
ಮಕ್ಕಳಿಂದ `ಮೌಂಶಿ' ಹಾಗೂ `ಮಾಮಾ' ಎಂದು ಕರೆಸಿಕೊಳ್ಳುವ ಶಿಕ್ಷಕರನ್ನು ತಮ್ಮ ಆತ್ಮೀಯ ಸ್ನೇಹಿತರನ್ನಾಗಿಯೇ ಮಕ್ಕಳು ಕಾಣುತ್ತಾರೆ. ತಿಂಗಳಿಗೊಂದಾವರ್ತಿ ನಡೆಸಲಾಗುವ `ಪುಸ್ತಕ ಪ್ರೀತಿ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಸೇರಿ ಒಂದರ್ಧ ಗಂಟೆ ಯಾವುದಾದರೂ ಪುಸ್ತಕವನ್ನು ಓದಿ ಅದರ ಬಗ್ಗೆ ಚರ್ಚಿಸುವ ಪರಿಪಾಠವಿದೆ. ಪ್ರತಿ ಶಾನಿವಾರ ಸಂಜೆ ನಡೆಯುವ `ಸಂಗೀತ ಸಭೆ'ಯ ಸಂಗೀತ ಸುಧೆಯಲ್ಲಿ ಎಲ್ಲರೂ ತೇಲಿ ಹೋಗುತ್ತಾರೆ.
`ಇಲ್ಲಿ ಎಂಟನೇ ತರಗತಿ ಓದುತ್ತಿರುವ ನನ್ನ ಮಗನಿಗೆ ಶಾಲೆಯ ಪ್ರತಿಯೊಬ್ಬರೂ ಗೊತ್ತು. ಆ ಮಟ್ಟಿಗೆ ತರಗತಿ, ವಯಸ್ಸಿನ ಹಂಗಿಲ್ಲದೇ ಎಲ್ಲಾ ಮಕ್ಕಳೂ ಬೆರೆಯುಂತೆ ಮಾಡಲಾಗುತ್ತದೆ' ಎನ್ನುತ್ತಾರೆ ಗುರುಮೂರ್ತಿ ಮೆಹಂದಾಳೆ.
`ಇದು ನಮಗೆ ಬೇರೆ ಯಾರೋ ನಡೆಸುತ್ತಿರುವ ಶಾಲೆ ಎನ್ನಿಸಿಲ್ಲ. ಇದು ನಮ್ಮದೇ ಶಾಲೆ ಎಂದು ಎಲ್ಲಾ ಪಾಲಕರೂ ಭಾವಿಸುತ್ತಾರೆ. ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಮಗ ಚಿನುವ ತೋರಿಸುವ ಧೈರ್ಯ, ಆತ್ಮ ವಿಶ್ವಾಸ ಕಂಡು ಆಚ್ಚರಿಗೊಳ್ಳುವ ಅನಿತಾ ಪೈಲೂರು `ಬೇರೆ ಶಾಲೆಗೆ ಸೇರ್ತೀಯಾ ಎಂದೇನಾದರೂ ಕೇಳಿದರೆ ಅವನು ಸುತಾರಾಂ ಒಪ್ಪುವುದಿಲ್ಲ. ಇಲ್ಲಿ ಅವನು ಯಾವ ಅಳುಕೂ ಇಲ್ಲದೇ, ಯಾವ ಒತ್ತಡವೂ ಇಲ್ಲದೇ ಕಲಿಯುತ್ತಿರುವಂತೆ ಬೇರೆಲ್ಲೂ ಕಲಿಯಲು ಸಾಧ್ಯವೆ ಇಲ್ಲ' ಎನ್ನುತ್ತಾರೆ.
ಬಾಲಬಳಗದಲ್ಲಿ ಎಲ್ಲಾ ಮಕ್ಕಳೂ ವಾರಕ್ಕೆರಡು ದಿನ ಖಾದಿ ಬಟ್ಟೆ ಧರಿಸಬೇಕು. ಸ್ವದೇಶಿ ಚಿಂತನೆಯನ್ನು ಬೆಳೆಸುವ ಒಂದು ಕ್ರಮ ಇದು.

ಶಿರಸಿ ಮಡಿಲಲ್ಲೊಂದು ಚಂದನ

ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುತ್ತಾ, ಅವರ ಆಲೋಚನಾ ಶಕ್ತಿ, ಕ್ರಿಯಾಶೀಲತೆಗೆ ಗರಿಷ್ಠ ಪ್ರಮಾಣದಲ್ಲಿ ಇಂಬು ನೀಡುತ್ತಾ, ಅವರು ಭವಿಷ್ಯದಲ್ಲಿ ಜೀವನದ ಯಾವುದೇ ಕಠಿಣ ಸವಾಲನ್ನು ಬುದ್ಧಿವಂತಿಕೆಯಿಂದ, ಸೂಕ್ಷ್ಮತೆಯಿಂದ ಎದುರಿಸುವಂತಹ ಸಾಮಥ್ರ್ಯ ಬೆಳೆಸುವ ಶಿಕ್ಷಣ ನೀಡುವ ಕನಸನ್ನು ಬೆನ್ನತ್ತಿದವರು ಶಿಸರ್ಿ-ನೆರೆಬೈಲು ಗ್ರಾಮದ ಎಲ್.ಎಂ.ಹೆಗ್ಡೆ. ಅವರಿಗೆ ಹತ್ತು ವರ್ಷದ ಹಿಂದಿನಿಂದ ಹೆಗಲಾದವರು ಡಾ.ರಮೇಶ್. 1998ರಲ್ಲಿ ಗೋಳಿಕೊಪ್ಪದ ಯುವಕರು ಆರಂಭಿಸಿದ ಮಲೆನಾಡು ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಸಂಸ್ಥೆ 2000ನೇ ಇಸವಿಯಲ್ಲಿ ಚಂದನ ಶಾಲೆಯನ್ನು ಆರಂಭಿಸಿತ್ತು.
ಈ `ಮಾಂಟೆಸ್ಸರಿ' ಮಾದರಿಯ `ಚಂದನ' ಶಾಲೆ ಆರಂಭವಾದಾಗ ಇದ್ದ ಹೇಗೋ, ಏನೋ ಎಂಬ ಆತಂಕ ಇಂದು ಪೋಷಕರಿಗಾಗಲೀ. ಮ್ಯಾನೇಜ್ಮೆಂಟ್ನವರಿಗಾಗಲೀ ಇಲ್ಲ. ಅ ಮಟ್ಟದ ಪ್ರಗತಿಯನ್ನು ಚಂದನ ಶಾಲೆ ಸಾಧಿಸಿರುವುದೇ ಇದಕ್ಕೆ ಕಾರಣ. ಇಲ್ಲಿ ಮಕ್ಕಳು ಪ್ರಾಥಮಿಕ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲೇ ಓದುತ್ತಾ ಹೈಸ್ಕೂಲಿಗೆ ಬರುವಷ್ಟರಲ್ಲಿ ಇಂಗ್ಲಿಷಿನ ಮೇಲೂ ಹಿಡಿತ ಸಾಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ.
`ಬೇರೆ ಶಾಲೆಗಳಲ್ಲಿ ನಾಲ್ಕು ಪೇಜ್ ಬರೀಲಿಕ್ಕೆ ಹೋಂ ವರ್ಕ್ ಕೊಟ್ಟು ಬರೆಯದೇ ಇದ್ರೆ ಮರುದಿನ ಪನಿಷ್ಮೆಂಟ್ ಕೊಡ್ತಾರೆ. ಆದ್ರೆ ಇಲ್ಲಿ ಹಾಗಿಲ್ಲ. ಹೋಂವರ್ಕ್ ಮಾಡದೇ ಇದ್ರೆ ಮಕ್ಕಳನ್ನು ಪನಿಷ್ ಮಾಡಲ್ಲ ಆದ್ರೂ ನಮ್ಮ ಮಕ್ಕಳು ಬಹಳ ಖುಷಿಯಿಂದಲೇ ಓದುತ್ತಾರೆ. ಬರೀತಾರೆ' ಅಂತಾರೆ ವಂದನಾ ಹೆಗಡೆ.

ಪೋಷಕರಿಂದ ಅತಿಯಾದ ಡೊನೇಷನ್ ವಸೂಲಿ ಮಾಡದ ಚಂದನ ಶಾಲೆಗೆ ಇತ್ತೀಚೆಗೆ ದೇಶಪಾಂಡೆ ಪೌಂಡೇಷನ್ ಹಾಗೂ ಎಲ್ಐಸಿಯ ಇನ್ಷೂರೆನ್ಸ್ ವತಿಯಿಂದ ಒಂದಷ್ಟು ಹಣ ಬಿಡುಗಡೆಯಾಗಿದೆ. ಸುತ್ತಲಿನ ಹಳ್ಳಿಗಳಿಂದ ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆಯನ್ನೂ ತಾವೇ ಮಾಡಿದ್ದ ಎಲ್.ಎಂ. ಹೆಗಡೆ ಆರಂಭದಲ್ಲಿ ಸಾಕಷ್ಟು ಪರದಾಡಿದ್ದೂ ನಿಜ. ಇಂದು ಬನವಾಸಿ, ಮಂಚಿಕೇರಿಗಳಿಂದೆಲ್ಲಾ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಾರೆ.
`ನಮಗೆ ಇಲ್ಲಿ ಪಾಠದಲ್ಲಿರುವುದಕ್ಕಿಂತಲೂ ಹೆಚ್ಚಿನ ಜ್ಞಾನ ಇತರ ರೀತಿಯಲ್ಲಿ ಲಭ್ಯವಾಗುತ್ತಿದೆ. ಎಲ್ಸಿಡಿ ಟಿವಿಗಳ ಮೂಲಕ ಡಾಕ್ಯುಮೆಂಟರಿಗಳನ್ನು ವೀಕ್ಷಿಸುತ್ತೇವೆ. ಹಾಗೆಯೇ ನಮಗೆ ಏನು ಬೇಕು, ಏನು ಬೇಡ ಎಂದು ವಿದ್ಯಾರ್ಥಿಗಳಿಂದಲೇ ರಚಿತವಾಗಿರುವ ಕ್ಯಾಬಿನೆಟ್ ನಿರ್ಧರಿಸುತ್ತೆ'ಎನ್ನುತ್ತಾನೆ ಎಂಟನೆಯ ತರಗತಿಯಲ್ಲಿರುವ ಫಸ್ಟ್ ಬ್ಯಾಚ್ ಸ್ಟುಡೆಂಟ್ ಅಮಿತ್ ಹೆಗ್ಡೆ.


ಈ ಎಲ್ಲಾ ಶಾಲೆಗಳಲ್ಲೂ ಕೂಡಾ....

*ಕೆಲವೇ ಮಕ್ಕಳಿಂದ ಆರಂಭವಾದ ಈ ಶಾಲೆಗಳಲ್ಲಿ ಇಂದು ಸರಾಸರಿ 300 ಮಕ್ಕಳಿದ್ದಾರೆ.
*ಯೂನಿಫಾರಂನ ಸಮಸ್ಯೆ ಮಕ್ಕಳಿಗಿಲ್ಲ. ಮಕ್ಕಳು ಅವರಿಗಿಷ್ಟವಾದ ರೀತಿಯ ಬಟ್ಟೆ ಧರಿಸುತ್ತಾರೆ. ಮಣ್ಣಿನಲ್ಲಿ ಆಡುತ್ತಾರೆ. ಯಾವ ಸ್ಟಾಂರ್ಡ್ ಗಳೂ ಇವರ ಬಾಲ್ಯವನ್ನು ಕಾಡುವುದಿಲ್ಲ. 
* ಶಾಲೆಗಳನ್ನು ಪರಿಸರ ಸ್ನೇಹಿಯಗಿಯೇ ನಿರ್ಮಿಸಿರುವುದರಿಂದ ಮಕ್ಕಳಲ್ಲಿ ಪರಿಸರದ ಮೇಲಿನ ಪ್ರೀತಿ, ಕಾಳಜಿ ಹಸುರಾಗಿದೆ.
*ಮಕ್ಕಳು ಪರಕೀಯ ಭಾಷೆಯೊಂದಿಗೆ ಪರಕೀಯ ಸಂಸ್ಕೃತಿಗೆ ತಮ್ಮನ್ನು ಒಡ್ಡಿಕೊಳ್ಳುವ ಪ್ರಮೆಯವಿಲ್ಲ. ಬದಲಿಗೆ ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯೂ ಈ ನೆಲದ ಸಂಸ್ಕೃತಿಯನ್ನು ಪಾಲಿಸುವ, ಗೌರವಿಸುವುದರೊಂದಿಗೆ ಈ ನಾಡಿನ ನಿಜವಾದ ಸಾಂಸ್ಕೃತಿಕ ವಾರಸುದಾರರಾಗಿ ಹೊರ ಹೊಮ್ಮುತ್ತಿದ್ದಾರೆ. 
* ಮತ್ತೊಬ್ಬನನ್ನು ತುಳಿದಾದರೂ ಮೇಲೆ ಬರುವ, ಇಲ್ಲವೇ ಮತ್ತೊಬ್ಬನ ಏಳಿಗೆಯನ್ನು ಕಂಡು ಕರುಬುವ ಸೋಕಾಲ್ಡ್ 'ಸ್ಪರ್ಧೆ' ಇಲ್ಲಿ ನಿಷಿದ್ಧ. ಬದಲಾಗಿ `ನೀನೂ ಬದುಕು, ಇತರರಿಗೂ ಬದುಕಗೊಡು' ಎಂಬ ಸಹಕಾರಿ ತತ್ವ ಈ ಮಕ್ಕಳಲ್ಲಿ ಅಂತರ್ಗತವಾಗಿದೆ.
*ಒಂದು ತರಗತಿಗೆ 30 ಮಕ್ಕಳಿಗಿಂತ ಹೆಚ್ಚಿರದಂತೆ ನೋಡಿಕೊಳ್ಳಲಾಗುತ್ತದೆ. ಹೀಗಾಗಿ ಇಲ್ಲಿ ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಮೇಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ. 
* ಇಲ್ಲಿ ನಡೆಸಲಾಗುವ ಪರೀಕ್ಷೆಗಳು ಮಕ್ಕಳಿಗೆ `ದಡ್ಡ ಅಥವಾ ದಡ್ಡಿ' ಎಂಬ ಹಣೆ ಪಟ್ಟಿ ಹಚ್ಚುವುದೇ ಇಲ್ಲ. ಪ್ರತಿ ಪಾಠದ ನಂತರವೂ ನಡೆಯುವ ಘಟಕ ಪರೀಕ್ಷೆ ಇಲ್ಲವೇ ಪನರಾವರ್ತನಗಳು ಮಕ್ಕಳಿಗೆ ಆ ಪಾಠ ಇನ್ನಷ್ಟು ಅರ್ಥವಾಗಲು ಇಲ್ಲವೆ ಮನನವಾಗಲು ಸಹಕರಿಸುತ್ತವೆ. 
* ಇಲ್ಲಿ ಪಾಠ ಹೇಳಿಕೊಡುವ ಶಿಕ್ಷಕರಿಗೆ ಅದು ವೃತ್ತಿ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಸುಪ್ತ ಪ್ರತಿಭೆಯನ್ನು ಗುರುತಿಸಿಕೊಂಡು, ಅನಾವರಣಗೊಳಿಸಲು ಸಹಾಯ ಮಾಡುವ ಮಹೋನ್ನತ ಕಲೆಯೂ ಹೌದು. * ಈ ಶಾಲೆಗಳು ಸ್ಟೇಟ್ ಸಿಲೆಬಸ್ನಲ್ಲಿಯೇ ಕಲಿಸುತ್ತಿವೆಯಾದರೂ ಇಲ್ಲಿನ ಗುಣಮಟ್ಟ ಮಾತ್ರ ಸೆಂಟ್ರಲ್ ಅಥವಾ ಇಂಟರ್ನ್ಯಾಷನಲ್ ಸಿಲೆಬಸ್ನ್ನೂ ಮೀರಿಸುವಂತಾದ್ದು. 
*ಮಕ್ಕಳು-ಶಿಕ್ಷಕರು-ಪಾಲಕರು ಈ ಮೂವರ ಸಂಬಂಧ ಈ ಎಲ್ಲಾ ಶಾಲೆಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಏರ್ಪಡುತ್ತದೆ. ಶಿಕ್ಷಕರಾದವರು ಮಕ್ಕಳೊಂದಿಗೆ ಅವರಂತೆಯೇ ಬೆರೆತು, ಪಾಲಕರೂ ಶಾಲೆಗಳಲ್ಲಿ ಶಿಕ್ಷಕರಾಗಿ ಪಾಲ್ಗೊಳ್ಳುವ ಕ್ರಮವೇ ಮಕ್ಕಳ ದೃಷ್ಟಿಯಿಂದ ಅದ್ಭುತವಾದದ್ದು.

ನವೆಂಬರ್ 02, 2010

ಎತ್ತ ಸಾಗಿದೆ ಮಾಹಿತಿ ಹಕ್ಕು




ಎತ್ತ ಸಾಗಿದೆ ಮಾಹಿತಿ ಹಕ್ಕು

ಕರೇಗೌಡ ಎಂಬ ಆ ವಿಧ್ಯಾರ್ಥಿ ತನ್ನ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ತಾನು ಹುಟ್ಟಿದ ವರ್ಷ ತಪ್ಪಾಗಿ ದಾಖಲಾಗಿತ್ತೆಂಬ ಕಾರಣಕ್ಕೆ ಶಿಕ್ಷಣ ಇಲಾಖೆಯ ಕಛೇರಿಗೆ ಒಂದು ಅರ್ಜಿ ಬರೆದು ತನ್ನ ಮೂಲ ಅಂಕಪಟ್ಟಿಯನ್ನು ಕಳುಹಿಸಿಕೊಟ್ಟಿದ್ದ. ಯಥಾಪ್ರಕಾರ ಆ ಇಲಾಖೆಯ ಅಧಿಕಾರಿಗಳಿಂದ ಅದನ್ನು ಸರಿತಿದ್ದಿಕೊಡುವುದು ಹೋಗಲಿ, ಕನಿಷ್ಠ ಒಂದು ಪ್ರತಿಕ್ರಿಯೆಯೂ ಬರಲಿಲ್ಲ. ಆತಂಕಕ್ಕೊಳಗಾದ ಆ ಯುವಕ ಅನೇಕ ಬಾರಿ ಪತ್ರಗಳನ್ನೂ ಬರೆದ. ಆಗಲೂ ಉತ್ತರ ಬರಲಿಲ್ಲ. ಹೀಗೇ ನಾಲ್ಕುವರ್ಷಗಳು ಕಳೆದು ಹೋದವು. ತನ್ನ ಅಂಕಪಟ್ಟಿ ಇನ್ನು ತನಗೆ ಸಿಗುವುದೇ ಇಲ್ಲವೇನೋ ಎಂಬ ತೊಳಲಾಟಕ್ಕೆ ಬಿದ್ದ ಕರೇಗೌಡ ಕೊನೆಗೆ ಮಾಹಿತಿಹಕ್ಕು ಕಾರ್ಯಕರ್ತರೊಬ್ಬರ ಸಹಾಯ ಪಡೆದ. ತನ್ನ ಅಂಕಪಟ್ಟಿಯ ಕುರಿತು ಮಾಹಿತಿ ನೀಡಲು ಮಾಹಿತಿ ಹಕ್ಕು ಕಾಯ್ದೆ ಅಡಿ ಒಂದು ಅರ್ಜಿ  ಸಲ್ಲಿಸಿದ. ಅಷ್ಟೇ ನೋಡಿ. ಆ ಅರ್ಜಿ ತಲುಪಿದ ಮೂರೇ ದಿನಗಳಲ್ಲಿ ಕರೇಗೌಡನ ಅಂಕಪಟ್ಟಿ ತಿದ್ದುಪಡಿಯೂ ಆಗಿ ಅವನ ಮನೆಯ ವಿಳಾಸಕ್ಕೇ ತಲುಪಿತ್ತು!. ಇದು ನಡೆದಿದ್ದು ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರು ತಾಲ್ಲೂಕಿನ ಮೊಗಾವಿಯಲ್ಲಿ.
ಈ ಒಂದು ಘಟನೆ ಮಾಹಿತಿ ಹಕ್ಕು ಕಾಯ್ದೆಯ ಪವರ್ ಏನು ಎಂದು ತೋರಿಸಿಕೊಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ಈ ದೇಶದಲ್ಲಿ ಜಾರಿಗೆ ಬಂದು ಇದೇ ಅಕ್ಟೋಬರ್ 12 ಕ್ಕೆ ಐದನೇ ವರ್ಷಕ್ಕೆ ಕಲಿಡಲಿದೆ.
ಇಂದು ಈ ಕಾಯ್ದೆ ಒಂದು ಕಾನೂನು ಮಾತ್ರವಾಗಿಲ್ಲ. ಬದಲಿಗೆ ಜಡ್ಡುಗಟ್ಟಿಹೋಗಿರುವ ಬ್ಯೂರಾಕ್ರಸಿಯನ್ನು ಒಂದು ಕೈ ವಿಚಾರಿಸಿಕೊಳ್ಳಲು ಸಾಮಾನ್ಯ ನಾಗರಿಕರ ಪಾಲಿನ ಒಂದು ಪ್ರಬಲ ಅಸ್ತ್ರವೇ ಆಗಿದೆ ಎಂದು ತೋರಿಸಲು ನಮಗಿಂದು ನೂರಾರು ಉದಾಹರಣೆಗಳು ಸಿಗುತ್ತವೆ. ಈ ಕಾಯ್ದೆಯ ಮಹತ್ವವನ್ನು ಅರಿತ ಪ್ರಜ್ಞಾವಂತರು ಅದನ್ನು ಪ್ರಯೋಗಿಸಿ ಸಾರ್ವಜನಿಕರಿಗಾಗಿ ಸಕರ್ಾರಗಳು ತಂದ ಯೋಜನೆಗಳ ಮೇಲೆ ಒಂದು ಬಗೆಯ ಮೇಲ್ವಿಚಾರಣೆ ನಡೆಸಿದ್ದಾರೆ. ನೆನಗುದಿಗೆ ಬಿದ್ದಿದ್ದ ಎಷ್ಟೋ ಯೋಜನೆಗಳು ಮರುಜೀವ ಪಡೆದಿವೆ. ಹಲವು ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲಾಗಿದೆ. ಈ ಕಾಯ್ದೆಯಡಿ ಮಾಹಿತಿ ಕೇಳಿದ ಒಂದೇ ಕಾರಣದಿಂದ ಹಲವಾರು ಕಾನೂನು ಬಾಹಿರ ಯೋಜನೆಗಳು ಪೇರಿ ಕಿತ್ತಿವೆ. ಪಡಿತರ ದಾಸ್ತಾನುಗಳಿಂದ ಭಯಂಕರ ಹೆಗ್ಗಣಗಳ ಪಾಲಾಗಲಿದ್ದ ಬಡವರ ಪಾಲಿನ ದವಸ ದಾನ್ಯಗಳು ಉಳಿದುಕೊಂಡಿವೆ, ಭ್ರಷ್ಟರ ಜೇಬು ಸೇರಬೇಕಿದ್ದ ಸರ್ಕಾರದ  ಅರ್ಥಾತ್ ಸಾರ್ವಜನಿಕರ ನೂರಾರು ಕೋಟಿ ರೂಪಾಯಿ ಮರಳಿ ಸರ್ಕಾರಿ  ಖಜಾನೆಯಲ್ಲೇ ಉಳಿದಿದೆ. ಸರ್ಕಾರಿ ಕಛೇರಿಗಳಿಂದ ಒಂದು ಸಣ್ಣ ಮಾಹಿತಿಯನ್ನು ನೀಡಲೂ ಇನ್ನಿಲ್ಲದ ಪಾಡು ಪಡಬೇಕಿದ್ದ ಹೊತ್ತಿನಲ್ಲಿ ಯಾವುದೇ ನಾಗರೀಕನು ಕಾಯ್ದೆಯ ಬೆಂಬಲದಿಂದ ಅಧಿಕಾರಯುತವಾಗಿ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಸಂಶಯವೇ ಬೇಡ. ಮಾಹಿತಿ ಹಕ್ಕು ಕಾಯ್ದೆ ಕಳೆದ ಐದು ವರ್ಷಗಳಲ್ಲಿ ಭ್ರಷ್ಟತೆಯ ಕೂಪದಿಂದ ಜನಸಾಮಾನ್ಯರನ್ನು ಕಾಪಾಡುವಲ್ಲಿ ಒಂದು ಮಂತ್ರದಂಡದಂತೆ ಕೆಲಸಮಾಡಹತ್ತಿದೆ. ಹತಾಶೆಯ ಮಡುವಲ್ಲಿ ಕಾಲಕಳೆಯುತ್ತಿದ್ದ ಅಭಿವೃದ್ಧಿಹೀನ ಹಳ್ಳಿಗಾಡು ಜನರ ಮೊಗದಲ್ಲಿ ಒಂದಷ್ಟಾದರೂ ಮಂದಹಾಸ ಕಾಣಿಸಿಕೊಂಡಿರುವುದರಲ್ಲಿ ಈ ಮಾಹಿತಿ ತಿಳಿದುಕೊಳ್ಳುವ ಹಕ್ಕಿನ ಪಾತ್ರವೂ ಇದೆ. ಇತ್ತತ್ತೀಚೆಗೆ ವೆಂಕಟೇಶ್ ನಾಯಕ್ ಎಂಬುವವರ ಅಜರ್ಿಯ ಮೇರೆಗೆ ಕೇಂದ್ರ ಮಾಹಿತಿ ಆಯೋಗವು ಒಂದು ತೀಪರ್ು ನೀಡಿತು. ಸಕರ್ಾರದ ಎಲ್ಲಾ ಸಚಿವಲಯಗಳೂ ಸಹ ಕರಡು ಮಸೂದೆಗಳನ್ನು ಕ್ಯಾಬಿನೆಟ್ನಲ್ಲಿ ಊಜರ್ಿತಗೊಳಿಸುವ ಮುನ್ನ ಅವುಗಳ ಪಠ್ಯವನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುಗಡೆಗೊಳಿಸಬೇಕು. ಇಂತದ್ದೊಂದು ಮಹತ್ವದ ಬೆಳವಣಿಗೆ ಸಾಧ್ಯವಾಗಿದ್ದು ಆರ್ಟಿಐ ದೆಸೆಯಿಂದ.
ಹಾಗೆಂದ ಮಾತ್ರಕ್ಕೆ ಈ ಮಾಹಿತಿ ಹಕ್ಕು ಕಾಯ್ದೆ ಮಹತ್ತರ ಯಶಸ್ಸನ್ನೇ ಸಾಧಿಸಿಬಿಟ್ಟಿದೆ ಎಂದು ಹೇಳಲು ಸಾಧ್ಯವೇ? ಸಧ್ಯದ ಸ್ಥಿತಿಯಲ್ಲಿ ಆ ಧೈರ್ಯ ಯಾರಿಗೂ ಇಲ್ಲ. ಏಕೆಂದರೆ ಈ ಕಾಯ್ದೆಯ ಸತ್ಪರಿಣಾಮಗಳ ಬಗ್ಗೆ ಮೇಲೆ ತಿಳಿಸಲಾದ ಉದಾಹರಣೆಗಳೆಲ್ಲವೂ ಸಲೀಸಾಗಿ ಆಗಿರುವಂತವಲ್ಲ. ಇಲ್ಲಿ ಮಾಹಿತಿ ಕಾಯ್ದೆಯಡಿ ಮಾಹಿತಿ ಕೇಳಿದ ಸಾರ್ವಜನಿಕರಿಗೆ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಸಂತೋಷದಿಂದ ನೀಡಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಹೀಗಾಗಿ ಇಲ್ಲಿ ಬೆಂಬಲಕ್ಕೆ ಕಾಯ್ದೆ ಇದ್ದರೂ ಅಗತ್ಯ ಮಾಹಿತಿ ಪಡೆಯಲು ಒಂದು ಮಟ್ಟಿಗಿನ ಸಂಘರ್ಷವನ್ನೇ ನಡೆಸಬೇಕಾದ ಸಂದರ್ಭ ಇದೆ. ಇದು ಇಂಡಿಯಾದ ಕರಪ್ಟ್ ಆಡಳಿತ ವ್ಯವಸ್ಥೆಯ ರಿಯಲ್ ರಿಯಾಲಿಟಿ ಶೋ. ಇದಕ್ಕಿಂತ ಕಹಿಸತ್ಯವೇನೆಂದರೆ ಈ ಕಾಯ್ದೆ ಜಾರಿಯಗಿ ನಾಲ್ಕು ವರ್ಷಗಳು ಮುಗಿದ ನಂತರವೂ ಇಂತಹ ಒಂದು ಕಾಯ್ದೆ ಜಾರಿಯಲ್ಲಿದೆ ಎಂದೇ ಅರಿಯದ ಕೋಟ್ಯಂತರ ಜನರಿದ್ದಾರೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ಜನರಿಗೆ ಮಾಹಿತಿ ಹಕ್ಕಿನ ಕುರಿತು ಶಿಕ್ಷಣ ನೀಡಿರುವ ಉದಾಹರಣೆಗಳು ಬಲು ಅಪರೂಪ.



ರಾಶಿ ರಾಶಿ ದೂರುಗಳು
ದೇಶದ ಮಾಹಿತಿ ಹಕ್ಕು ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮ್ಯಾಗ್ಸೆಸೆ ವಿಜೇತೆ ಅರುಣಾ ರಾಯ್ ಹಾಗೂ ಡೆವೆಲಪ್ಮೆಂಡ್ ಎಕನಾಮಿಸ್ಟ್ ಜೀನ್ ಡೀಝ್ ಅವರ ಪ್ರಯತ್ನದಿಂದಾಗಿ ಸ್ವತಂತ್ರ ಮೇಲ್ಮನವಿ ಪ್ರಾಧಿಕಾರವಾದ ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳು ಜಾರಿಗೆ ಬಂದವು. ಅದರೆ ಕನರ್ಾಟಕದಲ್ಲಿ ಮಾಹಿತಿ ಆಯೋಗದ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದ ಮಹಿತಿ ಆಯೋಗದ ಮುಂದೆ ಜಮಾವಣೆಯಾಗಿರುವ ಮೇಲ್ಮನವಿಗಳ ಪ್ರಮಾಣವನ್ನು ನೋಡಿದರೆ ನಿಜಕ್ಕೂ ನಿರಾಶೆಯಾಗುತ್ತದೆ. ಕಳೆದ ಜುಲೈ ಕೊನೆಯಲ್ಲಿ ಮಾಹಿತಿ ಆಯೋಗದ ಸುಪದರ್ಿಯಲ್ಲಿ ಇತ್ಯರ್ಥವಾಗದ ದೂರುಗಳ ಸಂಖ್ಯೆ 11,848! ಅಲ್ಲದೇ ಪ್ರತಿ ತಿಂಗಳೂ ಸಹ ಹತ್ತಿರತ್ತಿರ ಸಾವಿರ ಮೇಲ್ಮನವಿಗಳು, ದೂರುಗಳು ಜಮಾಯಿಸುತ್ತಲೇ ಇವೆ. ಮಾಹಿತಿ ಆಯೋಗವು ಸಧ್ಯದಲ್ಲಿರುವ ಸ್ಥಿತಿಯಲ್ಲೇ ಮುಂದುವರಿದರೆ ಈ ಅಷ್ಟೂ ದೂರುಗಳು ಬಗೆಹರಿಯಲು ಮತ್ತೊಂದು ದಶಕವಾದರೂ ಬೇಕು. 15 ದಿನದಲ್ಲಿ ಸಿಗಬೇಕಾದ ಮಾಹಿತಿ 10 ವರ್ಷವಾದಮೇಲೆ ಸಿಕ್ಕರೆ ಅದಕ್ಕಾಗಲೀ, ಅದನ್ನು ಕೊಡಿಸಿದ ಕಾಯ್ದೆಗಾಗಲೀ ಉಳಿಯುವ ಕಿಮ್ಮತ್ತಾದರೂ ಏನು? ಸರ್ಕಾರಿ ಪ್ರಾಧಿಕಾರಗಳಲ್ಲಿ ನೇಮಕ ಮಾಡಲಾಗುವ ಸಾರ್ವಜನನಿಕ ಮಾಹಿತಿ ಅಧಿಕಾರಿಗಳು (ಪಿಐಒ) ಅನೇಕ ಸಂದರ್ಭಗಳಲ್ಲಿ ಮಾಹಿತಿಯನ್ನು ನೀಡುವುದೇ ಇಲ್ಲ. ಅಥವಾ ಇಲ್ಲಸಲ್ಲದ ಕಾರಣವೊಡ್ಡಿ ಮಾಹಿತಿಯನ್ನು ನಿರಾಕರಿಸಿರುತ್ತಾರೆ. ಇಂತಹ ಪಿಐಓಗಳ ಮೇಲೆ ಯಾವುದೇ ಕ್ರಮವನ್ನೂ ಮಾಹಿತಿ ಆಯುಕ್ತರು ಕೈಗೊಳ್ಳದಿರುವುದೂ ಸಹ ಮಾಹಿತಿಗಾಗಿ  ಅರ್ಜಿ ಹಾಕುವವರಲ್ಲಿ ನಿರಾಸೆಯನ್ನುಂಟು ಮಾಡುತ್ತಿದೆ. ಹಾಗೆಯೇ ಪ್ರಥಮ ಹಂತದ ಮೇಲ್ಮನವಿ ಅಧಿಕಾರಿಯಂತೂ ದಿನ ತಳ್ಳುವುದಕ್ಕೆ ಮಾತ್ರ ಲಾಯಕ್ಕು.

ಹೀನಾಯ ಸ್ಥಿತಿಯಲ್ಲಿ ಮಾಹಿತಿ ಆಯೋಗ.
ಕೆಳ ಮಟ್ಟದಲ್ಲಿ ಮಾಹಿತಿ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಮಾಹಿತಿ ದೊರಕದ ಸಂದರ್ಭದಲ್ಲಿ ಮೇಲ್ಮನವಿಗಳನ್ನು ಸ್ವೀಕರಿಸಿ ನ್ಯಾಯ ದೊರಕಿಸಲು ಸ್ಥಾಪಿಸಲಾಗಿರುವ ರಾಜ್ಯ ಮಾಹಿತಿ ಆಯೋಗ ಇಂದು ಹೀನಾಯ ಸ್ಥಿತಿಯಲ್ಲಿದೆ ಎಂದೇ ಹೇಳಬೇಕು. ಮಾಹಿತಿ ಆಯೋಗದ ಅಗತ್ಯದ ದೃಷ್ಟಿಯಿಂದ ಸಧ್ಯದ ಪರಿಸ್ಥಿತಿಯಲ್ಲಿ ಕನಿಷ್ಠ 6-7 ಅಯುಕ್ತರಾದರೂ ಅಗತ್ಯವಿದೆ. ವಿಭಾಗೀಯ ಮಟ್ಟದಲ್ಲಿ ಆಯುಕ್ತರನ್ನು ನೇಮಿಸಿದರೆ ಇನ್ನೂ ಉತ್ತಮ . ಆದರೆ ಇಲ್ಲಿನ ಸ್ಥಿತಿ? ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು (ಸಿಐಸಿ) ಕಳೆದ ಜುಲೈ 9ರಂದು ನಿವೃತ್ತರಾಗಿದ್ದು ಇನ್ನೂ ಆ ಸ್ಥಾನ ಭತರ್ಿಯಾಗಬೇಕಿದೆ. ಅ.21 ಕ್ಕೆ ಆಯುಕ್ತ ಕೆ.ಎ.ತಿಪ್ಪೇಸ್ವಾಮಿಯವರ ಸ್ಥಾನವೂ ತೆರವಾಗಿದೆ. ಉಳಿದಿರುವುದು ಇಬ್ಬರೇ. ಆಯುಕ್ತ ಡಾ.ಹೆಚ್.ಎನ್.ಕೃಷ್ಣ ಹಾಗೂ ವಿರೂಪಾಕ್ಷಪ್ಪ. ಇಂತಹ ದಯನೀಯ ಸ್ಥಿತಿಯಲ್ಲಿರುವ ರಾಜ್ಯ ಮಾಹಿತಿ ಆಯೋಗದಿಂದ ಮಾಹಿತಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವನ್ನು ನಿರೀಕ್ಷಿಸುವುದಾದರೂ ಹೇಗೆ?

ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಸಧ್ಯ ಮಾಹಿತಿ ಆಯೋಗದಲ್ಲಿ ನೇಮಕವಾಗಿರುವವರೆಲ್ಲರೂ ಮಾಜಿ ಬ್ಯೂರಾಕ್ರಾಟ್ಗಳೇ. ಹಲವರು ನಿವೃತ್ತ ಐಎಎಸ್ ಅಧಿಕಾರಿಗಳು. ಆಯುಕ್ತರಾಗಿ ನೇಮಕಗೊಳ್ಳುವವರಿಗೆ ಸುಪ್ರೀಂ ಕೋಟರ್್ ಜಡ್ಜ್ಗಿರುವಷ್ಟೇ ಸೌಲಭ್ಯ ಇರುತ್ತದೆ. ಮಾಸಿಕ 80 ಸಾವಿರ ರೂ. ವೇತನ. ಹೆಚ್ಚಿನವರು ಇವುಗಳ ಆಸೆಯಿಂದಲೇ ಇಲ್ಲಿರಲು ಬಯಸುತ್ತಾರೆಯೇ ವಿನಃ ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವಾಗಬೇಕೆನ್ನುವ ಇಚ್ಛಾಶಕ್ತಿಯಲ್ಲ ಎನ್ನುವುದನ್ನು ಅಯೋಗದ ಕಾರ್ಯವೈಖರಿಯ ಮೂಲಕವೇ ತಿಳಿಯಬಹುದು. ನಿಜ ಹೇಳಬೇಕೆಂದರೆ ಮಾಹಿತಿ ಆಯೋಗದ ಅಧಿಕಾರಿಗಳು ಇತರರಿಗೊಂದು ನೀತಿ ತಮಗೊಂದು ನೀತಿಯನ್ನೇ ಅನುಸರಿಸುವುದು.
ಸಧ್ಯ ತೆರವಾಗಿರುವ ಐದು ಸ್ಥಾನಗಳಿಗೆ ಈಗಾಗಲೇ 89 ಅರ್ಜಿಗಳು  ಬಂದಿವೆ. ಇದರಲ್ಲಿ 52 ಮಂದಿ ನಿವೃತ್ತ ಐಎಎಸ್, ಕೆ.ಎ.ಎಸ್, ಹಾಗೂ ನ್ಯಾಯಾಂಗ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗಳು. ಅವೆಲ್ಲವನ್ನೂ ಸ್ಕ್ರೀನಿಂಗ್ ಮಾಡುವ ಕೆಲಸ ಇನ್ನೂ ಆಗಬೇಕಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಈ ಮಾಹಿತಿ ಹಕ್ಕು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಯಾರು ಮಾಡುತ್ತಿದ್ದಾರೋ ಅಂತಹ `ಸಿವಿಲ್ಸೊಸೈಟಿ'ಯ ಸದಸ್ಯರನ್ನೂ ಆಯೋಗದಲ್ಲಿ ನೇಮಿಸಿಕೊಳ್ಳಬೇಕು ಎಂಬ ಒತ್ತಾಸೆ ತುಸು ತೀವ್ರವಾಗಿಯೇ ಇದೆ. ಪಕ್ಕದ ಆಂಧ್ರ, ಗುಜರಾತ್ ರಾಜ್ಯಗಳ ಮಾಹಿತಿ ಆಯೋಗದಲ್ಲಿ ಮಾತ್ರವಲ್ಲದೆ ಕೇಂದ್ರ ಆಯೋಗದಲ್ಲಿಯೂ ಇದು ಸಾಧ್ಯವಾಗಿರುವಾಗ ಕನರ್ಾಟಕದಲ್ಲೇಕೆ ಸಾಧ್ಯವಾಗಬಾರದು ಎಂಬುದು ಹಲವರ ಪ್ರಾಮಾಣಿಕ ಪ್ರಶ್ನೆ.

ಮಾಹಿತಿ ಹಕ್ಕನ್ನೇ ಉಸಿರಾಡುತ್ತಾ
..
ಈ ಮಾಹಿತಿ ಹಕ್ಕು ಕಾಯ್ದೆ ಜಾರಿಯಾದಾಗಿನಿಂದ ದೇಶದಾದ್ಯಂತ ಹುಟ್ಟಿಕೊಂಡಿರುವ ಹೊಸ ಜಾತಿಯ ಹೆಸರು `ಆರ್ಟಿಐ ಕರ್ತರು'. ಆರ್ಟಿಐ ಕಾಯ್ದೆಯ ಬೆಳಕಿನಲ್ಲಿ ಹೊಸ ಮಾರ್ಗವನ್ನು ಕಂಡುಕೊಂಡು ಸಮಾಜದ ಸೇವೆಗೆ ತಮ್ಮನ್ನು ತಾವು ಇದರ ಮೂಲಕ ತೆರೆದುಕೊಳ್ಳುತ್ತಿರುವ ಸಾವಿರಾರು ಮಂದಿ ದೇಶದಲ್ಲಿದ್ಧಾರೆ. ಕನರ್ಾಟಕದಲ್ಲೂ ಅಂತವರ ದೊಡ್ಡ ಪಟ್ಟಿಯೇ ಇದೆ. ಇದರಲ್ಲಿ ಕೆಲವರು ಇದನ್ನೇ ವೃತ್ತಿಯಗಿಯೂ ಮಾಡಿಕೊಂಡಿದ್ದರೆ ಇನ್ನು ಕೆಲವರು ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಎರಡೂ ಮಾಡಿಕೊಂಡವರೂ ಇದ್ದಾರೆ. ಇಂದು ರಾಜ್ಯದಲ್ಲಿ ಈ ಕಾಯ್ದೆಯು ಒಂದಷ್ಟಾದರೂ ಜನಸಾಮಾನ್ಯರಿಗೆ ತಲುಪತೊಡಗಿದೆ ಎಂದರೆ ಅದು ಇಂತಹವರಿಂದಲೇ ಎಂದರೆ ಅತಿಶಯವಲ್ಲ. ಇಲ್ಲಿ ಉಲ್ಲೇಖಿಸಬಹುದಾವರೆಂದರೆ ಉತ್ತರ ಕನರ್ಾಟಕ ಭಾಗದ ಜೆ.ಎಂ.ರಾಜಶೇಖರ್, ಅಶೋಕ್ ಹಲಗಲಿ, ಬೆಂಗಳೂರಿನ ರವೀಂದ್ರನಾಥ ಗುರು, ವೀರೇಶ್, ಭಾಸ್ಕರ್, ವೈ.ಜಿ.ಮುರುಳೀಧರ್, ಕಾತ್ಯಾಯಿನಿ ಚಾಮರಾಜ, `ಕ್ರಿಯಾ ಕಟ್ಟೆ'ಯ ವಿಕ್ರಮ ಸಿಂಹ, ಚಿಂತಾಮಣಿಯ ಮಂಜುನಾಥ್ ರೆಡ್ಡಿ, ಶಿರಸಿಯ ಹೆಗ್ಗಡೆ ಕಡೆಕೋಡಿ, ಗುಲ್ಬರ್ಗದ ದೀಪಕ್ ಗಾಲ, ಶಿವಮೊಗ್ಗದ ಬಿ.ಎಸ್.ನಾಗರಾಜ್... ಹೀಗೆ ಪಟ್ಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಇವರೆಲ್ಲಾ ಮಾಹಿತಿ ಹಕ್ಕಿನ ಶಕ್ತಿ ಸಾಮಥ್ರ್ಯವನ್ನು ಅರಿಯುವುದರೊಂದಿಗೆ ಸಮಾಜದಲ್ಲಿ ಅದರ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವವರು. ಸಕರ್ಾರಿ ತರಬೇತಿ ಸಂಸ್ಥೆಗಳ ಮುಖಾಂತರ ಅಧಿಕಾರಿಗಳಿಗೆ ತರಬೇತಿ ನೀಡುತ್ತಾ, ರಾಜ್ಯದಾದ್ಯಂತ ತಿರುಗಾಡುತ್ತಾ, ಸ್ವಯಂ ಸೇವಾ ಸಂಸ್ಥೆಗಳ ಮುಖೇನ ನಾಗರೀಕರಿಗೆ ಜನಜಾಗೃತಿ ಮಾಡುತ್ತಾ, ಕೆಲವೊಮ್ಮೆ ತಮ್ಮ ವೈಯುಕ್ತಿಕ ಸಾಮಥ್ರ್ಯದಿಂದಲೇ ತಮ್ಮ ಸುತ್ತಮುತ್ತಲ ಸಾಮಾಜಿಕ ಬದುಕಿನಲ್ಲಿ ಜಾಗೃತಿಯ ಹಣತೆಯನ್ನು ಬೆಳಗಿಸುತ್ತಿರುವವರು ಇವರು. `ಮಾಹಿತಿ ಹಕ್ಕಿನ' ಪ್ರಬಲ ಆಯುಧವನ್ನು ತಾವೂ ಪ್ರಯೋಗಿಸುತ್ತಲೇ ಸಾರ್ವಜನಿಕರೂ ಹೇಗೆ ಉಪಯೋಗಿಸಬೇಕೆಂದು ತಿಳಿಹೇಳುವ ಹೊತ್ತಲ್ಲಿ ಅಧಿಕಾರಶಾಹಿಯ ಕೆಂಗಣ್ಣಿಗೆ ಗುರಿಯಾದವರೂ ಇದ್ದಾರೆ. ಹಾವೇರಿಯ ಆರೋಗ್ಯ ಇಲಾಖೆಯ ಜೆ.ಎಂ.ರಾಜಶೇಖರ್ ಒಂದು ಉದಾಹರಣೆ. ಅವರು ತಮ್ಮ ಈ ಪೃವೃತ್ತಿಯ ಕಾರಣದಿಂದಲೇ ಸಸ್ಪೆಂಡ್ ಆಗಿದ್ದರು. ಮತ್ತೆ ತಮ್ಮನ್ನು ಅಮಾನತುಗೊಳಿಸಿದ ಕುರಿತು ಮಾಹಿತಿ ಕೇಳಿ ಇದೇ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದಾಗ ನಿರುತ್ತರಿ ಮೇಲಧಿಕಾರಿಗಳು ಅಮಾನತ್ತನ್ನು ವಾಪಾಸು ಪಡೆದಿದ್ದಾರೆ.

ಇವರು ಆರ್ಟಿಐ ಹುತಾತ್ಮರು.
ಆರ್ಟಿಐ ಕಾಯ್ದೆ ನಮ್ಮ ದೇಶದಲ್ಲಿ ಜಾರಿಗೆ ಬಂದ ಮೇಲೆ ಭ್ರಷ್ಟ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಗಂಟಲೊಲಗಣ ಕಡುಬಿನಂತಾಗಿದೆ. ಈ ಕಾಯ್ದೆಯ ಕಾರಣದಿಂಲೇ ಅದೆಷ್ಟೋ ಹಗರಣಗಳು ಬಯಲಿಗೆ ಬಂದಿವೆ. ಹೀಗೆಂದೇ ಇಂತಹ ಭ್ರಷ್ಟರು ಮತ್ತು ಅವರ ಬೆಂಬಲಕ್ಕೆ ನಿಂತ ವ್ಯವಸ್ಥೆ ಪ್ರಾಮಾಣಿಕ ಆರ್ಟಿಐ ಕಾರ್ಯಕರ್ತರನ್ನು ಟಾಗರ್ೆಟ್ ಮಾಡತೊಡಗಿದ್ದಾರೆ. ಈ ಒಂದು ವರ್ಷದಲ್ಲಿ ಇಂತಹ 11 ಹೇಯ ಘಟನೆಗಳು ದೇಶದಲ್ಲಿ ನಡೆದಿವೆ. ಈ ವರ್ಷ ಇಂತಹ ಎಂಟು ಮಂದಿ ಆರ್ಟಿಐ ಕಾರ್ಯಕರ್ತರು ಹತಯೆಯಾಗಿರುವುದೇ ಇದಕ್ಕೆ ನಿದರ್ಶನ. ಕಳೆದ ಜುಲೈ ತಿಂಗಳಲ್ಲಿ ಗುಜರಾತ್ ಹೈಕೋಟರ್್ ಎದುರೇ ಅಮಿತ್ ಜೇತ್ವಾ ಎಂಬ ಕಾರ್ಯಕರ್ತನನ್ನು ಹತ್ಯೆಗೈಯಲಾಗಿತ್ತು. ಮೇ 31ರಂದು ಮಹಾರಾಷ್ಟ್ರದ ದತ್ತಾ ಪಾಟೀಲ್ರನ್ನು ಹೀಗೇ ಟಾಗರ್ೆಟ್ ಮಾಡಿ ಮುಗಿಸಲಾಗಿತ್ತು. ಎಪ್ರಿಲ್ 21 ರಂದು ವಿಠಲ್ ಗೈತ್ ರನ್ನು , ಎಪ್ರಿಲ್ 11ರಂದು ಆಂಧ್ರ ಪ್ರದೇಶದ ಸೋಲಾ ರಂಗರಾವ್, ಫೆಬ್ರವರಿ 14 ರಂದು ಮಹಾರಾಷ್ಟ್ರದ ಅರುಣ್ ಸಾವಂತ್, ಫೆ.11 ರಂದು ಬಿಹಾರದ ಶಶಿಧರ್ ಮಿಶ್ರ, ಜನವರಿ 13 ರಂದು ಪುಣೆಯ ಸತೀಶ್ ರೆಡ್ಡಿಯನ್ನು ಹತ್ಯೆಗೈಯಲಾಗಿದೆ. ದುರಂತವೆಂದರೆ ಸಕರ್ಾರವೇ ಜಾರಿಗೊಳಿಸಿರುವ ಈ ಮಹತ್ವದ ಮಾಹಿತಿ ಹಕ್ಕು ಕಾಯ್ದೆಯ ಪ್ರಾಮಾಣಿಕ ಅನುಷ್ಠಾನಕ್ಕಾಗಿ ಪ್ರಯತ್ನಿಸಿದ ಇಂತಹ ಸೇವಾ ಮನೋಭಾವನೆಯ ಯುವ ಕಾರ್ಯಕರ್ತರು ಹತ್ಯೆಯಾದಾಗ ಎಲ್ಲಾ ಸರ್ಕಾರಗಳೂ  ಕಣ್ಣೊರೆಸುವ ಹೇಳಿಕೆಯನ್ನು ನೀಡು ಕೈತೊಳೆದುಕೊಂಡಿದ್ದು ಬಿಟ್ಟರೆ ಅಪರಾಧಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.


ಇವರೇನು ಹೇಳುತ್ತಾರೆ
?....
"ಕಳೆದ ಮೂರು ವರ್ಷದಲ್ಲಿ ಮಾಹಿತಿ ಹಕ್ಕಿನ ಕುರಿತು ಜಾಗೃತಿ ಹೆಚ್ಚಾಗಿದೆ. ರಾಯಚೂರು, ಕೊಪ್ಪಳ, ಗುಲ್ಬರ್ಗ, ಹಾವೇರಿ ಇಂತಹ ಕಡೆ ಪರಿಣಾಮ ಕಂಡಿಬರುತ್ತಿದೆ. ಒಂದು ತಿಂಗಳಲ್ಲಿ 800ರಿಂದ 1000 ದೂರುಗಳು ಬರುತ್ತವೆ. ನಮ್ಮ ಮಾಹಿತಿ ಆಯೋಗವನ್ನು ಬಲಪಡಿಸಬೇಕಾದ ಅಗತ್ಯವಂತೂ ಇದ್ದೇ ಇದೆ. ಅಯೋಗದಲ್ಲಿ 1 ಪ್ಲಸ್10 ಬಲದ ಅಗತ್ಯ ಇದೆ. ಕನಿಷ್ಠ 1 ಪ್ಲಸ್ 6 ಆದರೂ ಇರಬೇಕು. ಸಕರ್ಾರ ಈ ಕುರಿತು ನಿರ್ಧರಿಸಬೇಕು"
ಕೆ.ಎ.ತಿಪ್ಪೇಸ್ವಾಮಿ ಮಾಜಿ ಆಯುಕ್ತರು, ರಾಜ್ಯ ಮಾಹಿತಿ ಆಯೋಗ

"ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನ ನಿರಾಶಾದಾಯಕವಾಗಿದೆ. ಅಧಿಕಾರಿಗಳು ಅಷ್ಟು ಸುಲಭವಾಗಿ ಮಾಹಿತಿಗಳನ್ನು ನೀಡುವುದಿಲ್ಲ. ಕಾರಣ ಅದು ಅವರ ವಿರುದ್ಧವೇ ಇದೆ ಎಂದು. ಹಾಗೇನೇ ಸಕರ್ಾರಿ ಪ್ರಾಧಿಕಾರಗಳಲ್ಲಿ ಮಾಹಿತಿಗಳ ರೆಕಾಡರ್ಿಂಗ್, ಫೈಲಿಂಗ್ ವ್ಯವಸ್ಥೆ ತೀರಾ ಅವ್ಯವಸ್ಥಿತವಾಗಿರುದೂ ತಕ್ಷಣದಲ್ಲಿ ಮಾಹಿತಿ ಸಿಗದಿರಲು ಕಾರಣವಾಗಿದೆ. ನಾಗರಿಕರಿಗೆ ಈ ಕಾಯ್ದೆಯ ಸಂಪೂರ್ಣ ಫಲ ಸಿಗದಿರುವುದರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಆಯೋಗವೂ ತೃಪ್ತಿಕರವಾಗಿ ಕಾರ್ಯ ನಿರ್ವಹಿಸಿಲ್ಲ. ದೇಶದಲ್ಲಿ ನಮ್ಮ ರಾಜ್ಯ ಆಯೋಗದ ವೆಬ್ ಸೈಟಿನಟ್ಟು ಕೆಟ್ಟದಾಗಿ ಬೇರಾವುದೂ ಇಲ್ಲ"
-ವೈ.ಜಿ.ಮುರುಳೀಧರ್ ಆರ್ಟಿಐ ಕಾರ್ಯಕರ್ತ

"ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಸಾರ್ವಜನಿಕ ಪ್ರಾಧಿಕಾರಗಳು ಸ್ವಯಂಪ್ರೇರಿತವಾಗಿ ಶೇ.90ರಷ್ಟು ಮಾಹಿತಿ ನೀಡಬೆಕು. ಆದರೆ ಇಲ್ಲಿಯ ತನಕ ನೂರಕ್ಕೆ ಹತ್ತರಷ್ಟು ಅಧಿಕಾರಿಗಳು ಮಾತ್ರ ಈ ಕೆಲಸ ಮಾಡಿದ್ದಾರೆ. ಕಾಯ್ದೆಯಲ್ಲಿ ತಿಳಿಸಿರುವ ರೀತಿಯಲ್ಲಿ ಪ್ರಾಧಿಕಾರಗಳೇ ಮಹಿತಿಯನ್ನು ಬಹಿರಂಗ ಪಡಿಸಿದರೆ ಸಾರ್ವಜನಿಕರು ಮಾಹಿತಿಗಾಗಿ ಅಲೆದಾಡುವುದು ತಪ್ಪುತ್ತದೆ. ಆ ಪ್ರಬುದ್ಧತೆ ಬಹುತೇಕ ಅಧಿಕಾರಿಗಳಿಗಿಲ್ಲವೆನ್ನುವುದು ವಿಷಾದಕರ"
- ವಿಕ್ರಮಸಿಂಹ ಆರ್ಟಿಐ ಕಾರ್ಯಕರ್ತ

ಫೆಬ್ರವರಿ 22, 2010

Charles Darwin


ಜೀವ ವಿಜ್ಞಾನದ ಮಹಾನ್ ಚೇತನ ಚಾರ್ಲ್ಸ್ ಡಾರ್ವಿನ್ -200

ಕ್ರಿ.ಶ.1831ರ ಜನವರಿ ಮಾಸದ ಒಂದು ನಡುಹಗಲು. ಬಿರುಗಾಳಿ ಬಲವಾಗಿ ಬೀಸುತ್ತಿತ್ತು. ಮೈಕೊರೆವ ಚಳಿ. ಶಾಂತಸಾಗರದಲ್ಲಿ ಹಾಯ್ದು ಹೋಗುತ್ತಿದ್ದ ಹಡಗೊಂದು ಗಜಗಾತ್ರದ ಅಲೆಗಳ ಅಬ್ಬರಕ್ಕೆ ಸಿಕ್ಕು ಬುಗರಿಯಂತಾಡುತ್ತಾ ಮೇಲೆ ಕೆಳಗೆ ಏರುತ್ತಾ ಇಳಿಯುತ್ತಾ ಸಾಗತೊಡಗಿತ್ತು. ಆ ನೌಕೆಯೊಳಗಿದ್ದ 22ರ ಹರೆಯದ ಯುವಕ ತೀವ್ರವಾಗಿ ಬಳಲಿ ಬೆಂಡಾಗಿಹೋಗಿದ್ದ. ಪ್ರಾಣಸಂಕಟದಿಂದ ಅಸ್ವಸ್ಥಗೊಂಡಿದ್ದ ಆ ಯುವಕ ಇನ್ನು ತನ್ನಿಂದ ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಿದ್ದ. ಆದರೆ ಅದೆಲ್ಲಿತ್ತೋ ಹುಮ್ಮಸ್ಸು ಒತ್ತಟ್ಟಿಕೊಂಡು ಬಂದು "ಊಂ ಹೂಂ.. ಹಾಗಾಗಕೂಡದು. ನಾನು ಈ ಸಾಗರಯಾನವನ್ನು ಪೂರೈಸಲೇ ಬೇಕು. ಪ್ರಾಣಹೋದರೂ ಅಡ್ಡಿಯಿಲ್ಲ" ಎಂದು ಗಟ್ಟಿ ನಿರ್ಧಾರ ತಳೆದ. ಆ ಒಂದು ದಿಟ್ಟ ನಿರ್ಧಾರ ಇಡೀ ಮನುಕುಲಕ್ಕೇ ಒಬ್ಬ ಅದ್ವಿತೀಯ, ಅಪ್ರತಿಯ ಜೀವವಿಜ್ಞಾನಿಯನ್ನು ನೀಡಿತು. ಊ.ಒ.ಖ. ಬೀಗಲ್ ಎಂಬ ಹೆಸರಿನ ಬ್ರಿಟಿಷ್ ರಾಯಲ್ ನೌಕಾಪಡೆಯ ಹಡಗಿನಲ್ಲಿದ್ದ ಆ ಯುವಕನೇ ಚಾರ್ಲ್ಸ್ ರಾಬರ್ಟ್ ಡಾರ್ವಿನ್ . 'ವಿಕಾಸವಾದ ಸಿದ್ಧಾಂತ'ವನ್ನು ವಿಶ್ವಕ್ಕೆ ನೀಡಿದ ಡಾರ್ವಿನ್ .

ಡಾರ್ವಿನ್ ನ ಬಾಲ್ಯಜೀವನ
ಚಾರ್ಲ್ಸ್ ಡಾರ್ವಿನ್ 1809ರ ಫೆಬ್ರವರಿ 12ರಂದು ಇಂಗ್ಲೆಂಡಿನ ಶ್ರೂಸ್ಬೆರಿಯಲ್ಲಿ ಜನಿಸಿದ. ವಿಶೇಷವೆಂದರೆ ಅದೇ ದಿನವೇ ಅಮೆರಿಕದ ಮಹಾನ್ ನಾಯಕ ಅಬ್ರಹಾಂ ಲಿಂಕನ್ ಕೂಡ ಜನಿಸಿದ್ದ!. ಡಾವರ್ಿನನ್ನನ ತಂದೆ ರಾಬರ್ಟ್ ಡಾರ್ವಿನ್- ಒಬ್ಬ ವೈದ್ಯ. ತಾಯಿ ಸೂಸನ್ನ ಡಾರ್ವಿನ್. ಆತನ ತಾತ ಇರಾಸ್ಮಸ್ ಡಾರ್ವಿನ್; ಒಬ್ಬ ಪ್ರಕೃತಿ ವಿಜ್ಞಾನಿ. ಡಾರ್ವಿನ್ ತಂದೆಗೆ ತನ್ನ ಮಗ ಮುಂದೆ ಒಬ್ಬ ಕ್ರೈಸ್ತ ಧಾಮರ್ಿಕ ಮಠಾದಿಪತಿಯಾಬೇಕೆಂಬ ಬಯಕೆ. 1817ರಲ್ಲಿ ತನ್ನ ಹುಟ್ಟೂರಿನ ಶಾಲೆಯಲ್ಲಿ ಸೇರಿಕೊಂಡನಾದರೂ ಆ ಶಾಲೆಯ ನೀರಸ ಜೀವನ ಬಾಲಕ ಡಾರ್ವಿನ್ ಗೆ ಹಿಡಿಸಲಿಲ್ಲ. ಅಲ್ಲಿ ಅವನ ಕೂತೂಹಲದ ಪ್ರಶ್ನೆಗಳಿಗೆ ಉತ್ತರಿಸುವ ಶಿಕ್ಷಕರಿರಲಿಲ್ಲ. ತರಗತಿಯಲ್ಲಿ ಪೆಚ್ಚಾಗಿ ಕುಳಿತಿರುತ್ತಿದ್ದ ಡಾರ್ವಿನ್ ನನ್ನು ಎಲ್ಲರೂ 'ದಡ್ಡ', ಮಡ್ಡು' ಎಂದು ಮೂದಲಿಸುತ್ತಿದ್ದರು. ಆದರೆ ಡಾರ್ವಿನ್ ದು ಬೇರೆಯದೇ ಲೋಕವಾಗಿತ್ತು. ಅವನಿಗೆ ತನ್ನ ಸುತ್ತಮುತ್ತಲ ನಿಸರ್ಗ, ಕಾಡು, ಗುಡ್ಡ, ನದಿ, ಕಡಲತಡಿಗಳೆಂದರೆ ವಿಚಿತ್ರ ಕೂತೂಹಲ. ಹಕ್ಕಿ, ಪ್ರಾಣಿ, ಕೀಟಗಳನ್ನು ಕಂಡರೆ ಅವನ ಜೀವ ಕುಣಿಯುತ್ತಿತ್ತು. ಬಣ್ಣ ಬಣ್ಣದ ಚಿಟ್ಟೆಗಳನ್ನು ಹಿಡಿದು ಸಂಗ್ರಹಿಸುವ, ಹಕ್ಕಿಗಳನ್ನು ಬೇಟೆಯಾಡುವ, ತರತರದ ಕಲ್ಲುಚೂರು, ಲೋಹದ ಚೂರುಗಳನ್ನು ಹೆಕ್ಕಿ ಸಂಗ್ರಹಿಸಿ, ವಿಂಗಡಿಸುವ, ಮುಂತಾದ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ, ಆದಮ್ಯ ಉತ್ಸಾಹ ತೋರುತ್ತಿದ್ದ. ಬಾಲಕ ಡಾರ್ವಿನ್ ಪಾಲಿಗೆ ಪ್ರಕೃತಿಯೇ ಶಾಲೆ; ಶಾಲೆಯೇ ವಿಶ್ರಾಂತಿ ತಾಣವಾಗಿತ್ತು. ತನ್ನ ತಾಯಿಯನ್ನು ಕಳೆದುಕೊಂಡು ಸಹೋದರ ಇರಾಸ್ಮಸ್ನೊಂದಿಗೆ ಹತ್ತಿರದ ವಸತಿ ಶಾಲೆಯೊಂದನ್ನು ಸೇರಿದ್ದ ಡಾರ್ವಿನ್ 1825ರಲ್ಲಿ ತಂದೆಯ ಅಣತಿಯ ಮೇರೆಗೆ ವೈದ್ಯ ತರಬೇತಿಗೆಂದು ಎಡಿನ್ ಬರ್ಗ್ ವಿಶ್ವವಿದ್ಯಾಲಯ ಸೇರಿದ. ಆದರೆ ಅಲ್ಲಿ ಆತ ಮಾಡಿದ್ದೆಂದರೆ ಸಮುದ್ರ ಕಿನಾರೆಗಳಲ್ಲಿ ಪ್ರಾಣಿಗಳನ್ನು ಸಂಗ್ರಹಿಸುವುದು; ಬೆಸ್ತರೊಂದಿಗೆ ಚಿಪ್ಪುಮೀನು (ಔಥಿಣಜಡಿ)ಗಳನ್ನು ಹಿಡಿಯುವುದು. ಇತ್ಯಾದಿ. ಆ ಹೊತ್ತಿಗೆ ಜಾನ್ ಎಡ್ಮಂಡ್ ಸ್ಟೋನ್ ಎಂಬ ನೀಗ್ರೋಯುವಕನ ಸಖ್ಯ ಬೆಳೆಸಿ, ಸತ್ತ ಪ್ರಾಣಿಪಕ್ಷಿಗಳ ಚರ್ಮದೊಳಗೆ ಹತ್ತಿ, ಹುಲ್ಲು ತುಂಬಿ ಅವುಗಳು ಸಾಕ್ಷಾತ್ ಜೀವಂತವಾದವುಗಳೆಂಬಂತೆ ಮಾಡುವ ಕಲೆ (ಣಚಿಥಜಜಡಿಟಥಿ) ಯನ್ನೂ ಕಲಿತುಕೊಂಡ. 1827ರಲ್ಲಿ ವೈದ್ಯ ತರಬೇತಿಗೆ ಗುಡ್ ಬೈ ಹೇಳಿ ಬಂದ ಡಾರ್ವಿನ್ ನನ್ನು ಆತನ ತಂದೆ ಗದರಿಸಿ 1828ರಲ್ಲಿ ಕೇಂಬ್ರಿಜ್ ವಿ.ವಿ.ಯಲ್ಲಿ ಮತಧರ್ಮಶಾಸ್ತ್ರವನ್ನು ಕಲಿಯಲು ಕಳುಹಿಸಿದರು. ಅಲ್ಲೂ ಅಷ್ಟೇ, ಕ್ಲಾಸಿಗೆ ಚಕ್ಕರ್ ಬೇಟೆಗೆ ಹಾಜರ್ ಎಂಬ ಹಾಡಾಯಿತು. ಅಲ್ಲಿ ಜಾನ್ ಸ್ಟೀವನ್ ಹೆನ್ಸ್ ಲೋ ಎಂಬ ಸಸ್ಯಶಾಸ್ತ್ರ ಪ್ರಾದ್ಯಾಪಕರ ಪರಿಚಯ ಡಾರ್ವಿನ್ ಗಾದದ್ದು ಆತನ ಜೀವನಗತಿಯನ್ನೇ ಬದಲಿಸಿತು. ಚಾರ್ಲ್ಸ್ ಡಾರ್ವಿನ್ ಒಳಗಿದ್ದ ಪ್ರಕೃತಿ ಇತಿಹಾಸದ ಬಗೆಗಿನ ಕುತೂಹಲ, ಪರೀಶೀಲನಾ ಶೀಲತೆ, ನಿಷ್ಠೆಗಳಿಗೆ ನೀರೆರೆದು ಪೋಷಿಸಿದ ಹೆನ್ಸ್ಲೋ ತಮ್ಮ ಜ್ಞಾನವನ್ನೇಲ್ಲಾ ಧಾರೆಯೆರೆದು ಆತನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕಾರಣರಾದರು. ಡಾರ್ವಿನ್ ಜೀವನದಲ್ಲಿ ಮೊದಲಬಾರಿಗೆ ಒಬ್ಬ ನಿಜವಾದ ಗುರುವನ್ನು ಕಂಡುಕೊಂಡಿದ್ದ. ಅಂತೂ 1831ರಲ್ಲಿ ಡಾರ್ವಿನ್ ಬಿ.ಎ.ಪದವಿ ಪಡೆದನು.

ಬೀಗಲ್ ಮೇಲಿನ ಪ್ರವಾಸ ಯಾತ್ರೆ
ಇಂಗ್ಲೆಂಡಿನ ರಾಣಿಯು ಭೂಗೋಳದ ಸುತ್ತಲೂ ಕಾಲಮಾಪಕ ಯಂತ್ರಗಳ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದೊಂದಿಗೆ 1831ರಲ್ಲಿ ಊ.ಒ.ಖ. ಬೀಗಲ್ ಹಡಗನ್ನು ಚಿಲಿ, ಪೆರು, ಪಟಗಾನಿಯ, ಟಿಯೆರಾಡೆಲ್ಪಿಗೋ ಹಾಗೂ ಕೆಲವು ಪೆಸಿಫಿಕ್ ದ್ವೀಪಗಳ ಕರಾವಳಿಗಳಲ್ಲಿ ವರ್ವೇಕ್ಷಣೆ ನಡೆಸಲು ಕಳಿಸುವವಳಿದ್ದಳು. ಅದರಲ್ಲಿ ರಾಯಲ್ ನೌಕಾಪಡೆಯ ಕ್ಯಾಪ್ಟನ್ ರಾಬರ್ಟ್ ಫಿಜ್ರಾಯ್ನೊಂದಿಗೆ ಒಬ್ಬ ಪ್ರಕೃತಿ ವಿಜ್ಞಾನಿಗೂ ಕರೆ ನೀಡಲಾಯ್ತು. ಆಗ ಪ್ರೊ|| ಹೆನ್ಸ್ಲೋ ಯುವಕ ಡಾರ್ವಿನ್ ನ್ನನ್ನು ಕರೆದೊಯ್ಯಲು, ಶಿಫಾರಸು ಮಾಡಿ ಒಪ್ಪಿಸಿದರು ಆದರೆ, ಇದಕ್ಕೆ ಒಪ್ಪದ ಅವನ ತಂದೆಯನ್ನು ಆತನ ಚಿಕ್ಕಪ್ಪನ ಮೂಲಕ ಮನವೊಲಿಸಲಾಯ್ತು. 1831ರ ಡಿಸೆಂಬರ್ 27ರಮದು ಬೀಗಲ್ ನೌಕೆಯು ಇಂಗ್ಲೆಂಡಿನ ದೇವನ್ ಪೋರ್ಟ್ ಎಂಬಲ್ಲಿಂದ ತನ್ನ ಯಾನವನ್ನು ಆರಂಭಿಸಿತು. ಅಲ್ಲಿಂದ ಅವಿರತವಾಗಿ ಐದು ವರ್ಷಗಳಕಾಲ ಅದು ಸಾಗಿತು. ಪೃಥ್ವಿಯ ದಕ್ಷಿಣಾರ್ಧಗೋಳವನ್ನೆಲ್ಲಾ ಪರ್ಯಟನೆ ನಡೆಸಿದ ಬೀಗಲ್, ವದರ್ಿ ದ್ವೀಪಗಳ ಭೂಶಿಖರಗಳನ್ನು ಮೊದಲು ತಲುಪಿ ಅಲ್ಲಿನ ಜ್ವಾಲಾಮುಖಿಗಳಿಂದಾದ ಅಗ್ನಿಪರ್ವತಗಳನ್ನು ಅಧ್ಯಯನ ನಡೆಸಿ, ಬ್ರೆಜಿಲ್, ಟಿಯೆರಾ, ಚಿಲಿ, ಅರ್ಜೆಂಟೀನಾ, ಆಂಡೀಸ್, ಗ್ಯಾಲಪಾಗಾಸ್ ದ್ವೀಪ ಸಮಚ್ಛಯ, ತಾಹಿತಿ, ನ್ಯೂಝೀಲ್ಯಾಂಡ್, ಆಸ್ವ್ರೇಲಿಯ, ಕಾಕಸ್, ದಕ್ಷಿಣ ಆಫ್ರಿಕಾ, ಸೆಂಟ್ ಹೆಲೆನಾ, ಮತ್ತೆ ಬ್ರೆಜಿಲ್ ಮುಖಾಂತರ ತಾಯ್ನಾಡನ್ನು 1836ರ ಅಕ್ಟೋಬರ್ 2 ರಂದು ಫಾಲ್ವತಾಲ್ ಎಂಬಲ್ಲಿ ತಲುಪಿತು.
ಈ ಯಾನದಲ್ಲಿ ಭೇಟಿ ನೀಡಿದ ಪ್ರತಿಯೊಂದು ಕಡೆಯಲ್ಲಿಯೂ ಡಾರ್ವಿನ್ ಪ್ರಕೃತಿಯ ಪ್ರತಿವಿವರವನ್ನೂ ಅಭ್ಯಸಿಸಿದ. ತಾನು ಗಮನಿಸಿದ್ದನ್ನೆಲ್ಲಾ ನಮೂದಿಸಿಕೊಂಡ. ಅಗ್ನಿಪರ್ವತಗಳ ವಿನ್ಯಾಸ, ತೀರ ಪ್ರದೇಶಗಳ ಭೂಲಕ್ಷಣ, ಕೀಟ ಮತ್ತು ಸಸ್ಯ ಪ್ರಬೇಧಗಳು, ಹವಳದ ದಂಡೆಗಳು, ವಿವಿಧ ಪ್ರಾಣಿ-ಪಕ್ಷಿ ಪ್ರಬೇಧಗಳ ಸಹಜೀವನ ಹಾಗೂ ಸಂಘರ್ಷ, ಹೀಗೆ ಎಲ್ಲವನ್ನೂ ಒಳಗಣ್ಣಿನಿಂದ ವೀಕ್ಷಿಸಿದ. ಉಷ್ಣವಲಯದ ಜೀವಜಾತಿಗಳ ಅಸಂಖ್ಯ ಶಾಖೆಗಳನ್ನು ಕಂಡು ಬೆಕ್ಕಸಬೆರಗಾದ. ಹಾದಿಮದ್ಯದಲ್ಲಿ ಸಿಕ್ಕ ಸಸ್ಯ, ಪಕ್ಷಿ, ಪ್ರಾಣಿಗಳ ಮಾದರಿಗಳನ್ನು; ಪಳೆಯುಳಿಕೆಗಳನ್ನು; ಶಿಲಾಮಾದರಿಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಕೊಂಡ. ಈ ನೌಕಾಯಾನದ ಶುರುವಿಗೆ ಕೇವಲ ಕುತೂಹಲ, ಆಸಕ್ತಿಗಳನ್ನು ಮಾತ್ರವೇ ಹೊಂದಿ ಹೊರಟಿದ್ದ ಯುವಕ ಡಾರ್ವಿನ್ ಯಾನದ ಅಂತ್ಯದ ವೇಳೆಗೆ ಇಡೀ ಜಗತ್ತು ನಂಬಿಕೊಂಡು ಬಂದಿದ್ದ ನಂಬಿಕೆಗಳನ್ನೇ ಬುಡಮೇಲು ಮಾಡುವ ಸಿದ್ಧಾಂತವೊಂದನ್ನು ವಿಜ್ಞಾನಿಯ ಮನೋಬಲವನ್ನು ಪಡೆದುಕೊಂಡು ಬಿಟ್ಟಿದ್ದ!.
ಡಾರ್ವಿನ್ ವಿಕಾಸವಾದ ಸಿದ್ಧಾಂತ
ಆ ಕಾಲದಲ್ಲಿ ಇದ್ದ ನಂಬಿಕೆ ಎಂದರೆ ಜಗತ್ತಿನ ಸಕಲ ಜೀವಚರಗಳೂ ಸಹ ಆರುದಿನಗಳಲ್ಲಿ ದೇವರಿಂದ ಸೃಷ್ಟಿಯಾಗಿವೆ ಮತ್ತು ಸಕಲ ಜೀವಜಾತಿಗಳೂ ಬದಲಾಗದಂತವು ಎಂಬುದು. ಡಾರ್ವಿನ್ ಕೂಡಾ ಈ ನಂಬಿಕೆಗೆ ಹೊರತಾಗಿರಲಿಲ್ಲ. ಆದರೆ ಬೀಗಲ್ ಯಾನವು ಡಾರ್ವಿನ್ ನನ್ನು ಹೊಸ ಸತ್ಯಗಳೊಂದಿಗೆ ಮುಖಾಮುಖಿಯಾಗಿಸಿತು. ಏಕೆ ದೂರದೂರದ ಭೂಪ್ರದೇಶಗಳ ಪ್ರಾಣಿಗಳು ಒಂದೇ ರೂಪ ಹೊಂದಿವೆ? ಉದಾ: ದ. ಅಮೆರಿಕದ ರಿಯಾ ಜಾತಿಯ ಪಕ್ಷಿಯು ಆಫ್ರಿಕಾದ ಆಸ್ಟ್ರಿಚ್ ಪಕ್ಷಿಯನ್ನೇಕೆ ಹೋಲುತ್ತದೆ?. ಇನ್ರ್ನೊಂದೆಡೆ ಒಂದೇ ಭೂಪ್ರದೇಶದಲ್ಲಿದ್ದರೂ ಭಿನ್ನ ರೂಪದ ಪ್ರಾಣಿಗಳೇಕಿವೆ? ಉದಾ: ಗ್ಯಾಲಪಾಗಾಸ್ ನ ಒಂದೇ ಪರಿಸರದಲ್ಲಿನ ಹಕ್ಕಿಗಳೂ, ಆಮೆಗಳೂ ಸಂಪೂರ್ಣ ಭಿನ್ನ ಏಕೆ?. ಎದುರಾದ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಆಳವಾದ ಅದ್ಯಯನದಲ್ಲಿ ತೊಡಗಿದ ಡಾವರ್ಿನ್ ಅಂತಿಮವಾಗಿ ಒಂದು ಸ್ಪಷ್ಟನಿಲುವಿಗೆ ಬಂದ. ಜಗತ್ತಿನ ಜೀವ ಪ್ರಬೇಧಗಳು ನಿರಂತರವಾಗಿ ಮಾರ್ಪಾಡಾಗುತ್ತಿವೆ ಹಾಗೂ ಹಲವು ಜೀವಿ ಪ್ರಬೇಧಗಳು ಒಂದೇ ಪೂರ್ವಜರನ್ನು ಹೊಂದಿವೆ ಎಂಬುದೇ ಆ ನಿಲುವಾಗಿತ್ತು. ಈ ತೆರನಾದ ಜೀವಿಗಳ ಮಾರ್ಪಾಡು ಪ್ರಾಕೃತಿಕ ಆಯ್ಕೆ (ಓಚಿಣಣಡಿಚಿಟ ಜಟಜಛಿಣಠಟಿ)ಯ ಮೂಲಕ ನಡೆಯುತ್ತದೆ. ಬದುಕಿಗಾಗಿನ ಸಂಘರ್ಷದಲ್ಲಿ ಕಾಲಾನು ಕ್ರಮದಲ್ಲಿ ಜೀವಸಂಕುಲಗಳು ಮಾರ್ಪಾಡಾಗುತ್ತಾ ವಿಕಾಸ ಹೊಂದುತ್ತವೆ. ಅದರಲ್ಲಿ ಹೊಂದಾಣಿಕೆ ಪರತೆಯನ್ನು ಪ್ರದರ್ಶಿಸುವ ಜೀವಿಗಳು ಉಳಿಯುತ್ತವೆ ಉಳಿದವು ನಶಿಸುತ್ತವೆ. ಎಂದು ಪ್ರತಿಪಾದಿಸಿದ. 1839ರ ನವೆಂಬರ್ 24ರಂದು ಪ್ರಕಟಗೊಂಡ 'ಜೀವಸಂಕುಲಗಳ ಉಗಮ' ಎಂಬ ಕೃತಿಯು ವಿಕಾಸವಾದದ ಈ ತತ್ವಗಳನ್ನು ವಿವರಿಸಿತು. ಪ್ರಕಟಗೊಂಡ ದಿನವೇ ಅದರ ಎಲ್ಲಾ ಪ್ರತಿಗಳೂ ಖರ್ಚಾಗಿ ಬಿಟ್ಟಿದ್ದವು!. ಚಾರ್ಲ್ಸ್ ಡಾರ್ವಿನ್ ಸಿದ್ಧಾಂತದ ಪ್ರಖರ ವಿಚಾರಗಳು ಅಂದಿನ ಬೌದ್ಧಿಕ ವಲಯದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದವು. ಹಲವು ಡಾರ್ವಿನ್ ವಿರೋಧಿಗಳು ಹಾಗೂ ಚರ್ಚ್ ನ ಆಡಳಿತವು ಚಾರ್ಲ್ಸ್ ಡಾರ್ವಿನ್ ಸಿದ್ಧಾಂತದ ಮೇಲೆ ದಾಳಿ ನಡೆಸಿದತು. ಆದರೆ ಥಾಮಸ್ ಹಸ್ಲೆ ಯಂತಹ ಮೇಧಾವಿಗಳು ಡಾರ್ವಿನ್ ಪರವಾಗಿ ನಿಂತು ವಿರೋಧಿಗಳ ಬಾಯಿ ಮುಚ್ಚಿಸಿದರು. ಮುಂದೆ ಡಾರ್ವಿನ್ ಮತ್ತಷ್ಟು ಅಧ್ಯಯನ, ಬರವಣಿಗೆಗಳ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಲೇ ಹೋದರು. ಜೀವ ವಿಜ್ಞಾನದ ಹತ್ತು ಹಲವು ವಿಚಾರಗಳ ಕುರಿತು ಹಲವಾರು ಕೃತಿಗಳನ್ನು ರಚಿಸಿದರು.

ಮಾನವತಾವಾದಿ ಡಾರ್ವಿನ್
ಡಾರ್ವಿನ್, ಜೀವಿಗಳ ಉಳಿವಿಗಾಗಿನ ಹೋರಾಟ ಹಾಗೂ ಪ್ರಾಕೃತಿಕ ಆಯ್ಕೆಯ ತತ್ವಗಳನ್ನು ಸಾಮಾಜಿಕ ನೀತಿಗಳಲ್ಲಿ ಅಳವಡಿಸಬಾರದು ಎಂದು ಪ್ರತಿಪಾದಿಸಿದರು. ಜೀತಗಾರಿಕೆಯ ಪದ್ಧತಿ, ಜನಾಂಗೀಯವಾದ, ಕಪ್ಪು ಜನರ ಮೇಲಿನ ಮೃಗೀಯ ದಬ್ಬಾಳಿಕೆಗಳನ್ನು ಡಾರ್ವಿನ್ ಖಡಾಖಂಡಿತವಾಗಿ ಖಂಡಿಸಿದ್ದರು. ಮೂಲನಿವಾಸಿಗಳ ಮೇಲಿನ ವಸಾಹತುಶಾಹಿ ದಬ್ಬಾಳಿಕೆಯನ್ನೂ ವಿರೋಧಿಸಿದ್ದರು. ಹಾಗೆಯೇ 'ಕೆಲವು ಜನಾಂಗಗಳು ಮುಂದುವರೆದಿರುತ್ತವೆ' ಎಂಬ ವಾದವನ್ನೂ ವಿರೋಧಿಸಿದ್ದರು. ಆದರೆ ಹಲವಾರು ಮಂದಿ ಡಾರ್ವಿನ್ ವಿಚಾರಗಳನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ನಡೆದಿದೆ. 'ಸಾಮಾಜಿಕ ಡಾರ್ವಿನ್ ವಾದ' ಎಂಬ ಎಡವಟ್ಟು ಸಿದ್ಧಾಂತವನ್ನು ಇದೇ ರೀತಿ ಚಾಲ್ತಿಯಲ್ಲಿ ತರಲಾಗಿದೆ. ಚಾರ್ಲ್ಸ್ ಡಾರ್ವಿನ್ ನಾಸ್ತಿಕವಾದಿಯಾಗಿರಲಿಲ್ಲ. ಆದರೆ, ಜೀವಸೃಷ್ಟಿಯ ಕುರಿತ ಅವರ ಚಿಂತನೆಗಳು ಅದುವರೆಗೂ ಪ್ರಚಲಿತದಲ್ಲಿದ್ದ ಬೈಬಲ್ನ ನಂಬಿಕೆಯನ್ನು ನುಚ್ಚುನೂರು ಮಾಡಿತು. ದೇವರು-ಧರ್ಮಗಳ ಹೆಸರಿನಲ್ಲಿ ಜನರನ್ನು ನಿಯಂತ್ರಣದಲ್ಲಿಟ್ಟುಕೊಂಡವರಿಗೆ ಅಷ್ಟರ ಮಟ್ಟಕ್ಕೆ ಪೆಟ್ಟು ಬಿದ್ದಿದ್ದಂತೂ ನಿಜ. ಕಾರ್ಲ್ ಮಾರ್ಕ್ಸ್ ರಂತಹ ಸಮತಾವಾದಿ ಚಿಂತಕರ ಚಿಂತನೆಗಳಿಗೆ ಡಾರ್ವಿನ್ ಸಿದ್ಧಾಂತವು ಖಂಡಿತವಾಗಿಯೂ ಖಚಿತತೆಯನ್ನೂ, ಪ್ರೇರಣೆಯನ್ನೂ ನೀಡಿತು.

ಅನಾರೋಗ್ಯದ ನಡುವೆ ಡಾರ್ವಿನ್
ಡಾರ್ವಿನ್ ನ ಆರೋಗ್ಯವು ಬೀಗಲ್ ಪ್ರವಾಸದಿಂದಲೇ ಕೈಕೊಟ್ಟಿತ್ತು. ಆಂಡೀಸ್ನ ಕಾಡುಗಳ ಕೂರೆಗಳು ಅವರಿಗೆ ವಿಲಕ್ಷಣವಾದ ರೋಗವೊಂದನ್ನು ಉಂಟುಮಾಡಿದ್ದವು. ಕರುಳಿನ ತೊಂದರೆ, ನಿದ್ರಾಹೀನತೆ, ನರರೋಗಗಳು ಡಾರ್ವಿನ್ ರನ್ನು ಹಿಂಡಿ, ಹೀರಿ, ಹಿಪ್ಪೆಮಾಡಿದ್ದವು. 1873ರಲ್ಲಿ ಮೊದಲ ಬಾರಿಗೆ ಹೃದಯಾಘಾತ ಕಾಣಿಸಿಕೊಂಡಿತು. ಇಂತಹ ಅನಾರೋಗ್ಯದ ಪರಿಸ್ಥಿತಿಯಲ್ಲೂ ದಣಿವರಿಯದೆ ಅಧ್ಯಯನವನ್ನು ಮುಂದುವರೆಸಿದ ಡಾರ್ವಿನ್ ಗೆ ಪತ್ನಿ ಎಮ್ಮಾ ಬಹು ವಿಧದಲ್ಲಿ ನೆರವಾದಳು. ಡಾರ್ವಿನ್ ದಂಪತಿಗಳ ಹತ್ತು ಮಕ್ಕಳಲ್ಲಿ ಮೂವರು ಚಿಕ್ಕಂದಿನಲ್ಲೇ ತೀರಿಕೊಂಡರೆ. ಇತರರು ಖಗೋಳಶಾಸ್ತ್ರ, ಸಸ್ಯಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ಅರ್ಥಶಾಸ್ತ್ರ ಮುಂತಾದ ಶಾಖೆಗಳಲ್ಲಿ ಅಪಾರ ಸಾಧನೆ ಗೈದಿದ್ದಾರೆ.
ಮನುಕುಲದ ಚಿಂತನಾಕ್ರಮವನ್ನೇ ಬದಲಿಸಿದ ಸಿದ್ಧಾಂತವೊಂದನ್ನು ತನ್ನ ಅವಿರತ ಶ್ರಮ, 25 ವರ್ಷಗಳ ಆಳ ಅಧ್ಯಯನ, ಬದ್ಧತೆಗಳ ಮೂಲಕ ವಿಶ್ವಕ್ಕೆ ಸಲ್ಲಿಸಿದ ಚಾರ್ಲ್ಸ್ ಡಾರ್ವಿನ್ 1882ರ ಏಪ್ರಿಲ್ 19ರಂದು ತಮ್ಮ 73ನೆಯ ವಯಸ್ಸಿನಲ್ಲಿ ಎರಡನೆಯ ಬಾರಿಗೆ ಉಂಟಾದ ಹೃದಯಾಘಾತದಿಂದ ನಿಧನರಾದರು. ತಮ್ಮ ಅನನ್ಯವಾದ ಸಾಧನೆಗಳಿಂದಾಗಿ ಡಾರ್ವಿನ್ ಎಂದೆಂದಿಗೂ ಅಜರಾಮರರಾಗಿದ್ದಾರೆ.

ಡಾರ್ವಿನ್ ರಚಿಸಿದ ಮುಖ್ಯ ಕೃತಿಗಳು
ದಿ ವೋಯೇಜ್ ಆಫ್ ಬೀಗಲ್ (1839)
ಜೀವ ಸಂಕುಲಗಳ ಉಗಮ (1859)

The Structure & Distribution of Coral Reefs (1842)

The Descent of Man & Selection in relation to sex (1871)

The Expression of the Emotions in man and Animals (1872)

The Insectivorous Plants (1875)

The Formation of mould through the Action of worms (1881)





ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.